ಚಿಕ್ಕಬಳ್ಳಾಪುರ: ದಾಖಲೆ ಮಳೆಯಿಂದ ಜಿಲ್ಲೆಯಲ್ಲಿ ಈಗ ಮೀನಿನ ಸುಗ್ಗಿ ನಡೆಯುತ್ತಿದೆ. ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ಈಗ ಎಲ್ಲಿ ನೋಡಿದರೂ ಬರೀ ಮೀನುಗಳದ್ದೇ ಕಾರುಬಾರು. ಕೂಡಾ ಮೀನುಕೃಷಿಯನ್ನು ಪ್ರೋತ್ಸಾಹಿಸಲು ಹಲವು ಸೌಲಭ್ಯಗಳನ್ನು ನೀಡಲು ಮುಂದಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮಟ್ಟಿಗೆ ಎಂದರೆ ಗಗನ ಕುಸುಮವಾಗಿತ್ತು. ಜಿಲ್ಲೆಯಲ್ಲಿ ಕೆರೆಗಳು ತುಂಬಿ ದಶಕಗಳೇ ಕಳೆದಿದ್ದವು. ಹೀಗಾಗಿ ಸ್ಥಳೀಯವಾಗಿ ಮೀನು ಸಿಗುವುದು ಕನಸಾಗಿತ್ತು. ಹೊರಗಡೆಯಿಂದ ಮೀನನ್ನು ತರಿಸಿದರೂ ದುಬಾರಿ ಬೆಲೆ ಹಿನ್ನೆಲೆ ಜನರಿಗೆ ಅಪಥ್ಯವಾಗಿತ್ತು. ಆದರೆ ಈಗ ಸ್ಥಳೀಯವಾಗಿ ಭಾರಿ ಪ್ರಮಾಣದಲ್ಲಿ ಮೀನು ಸಿಗುತ್ತಿದ್ದು, ಪ್ರಮುಖ ಜನರಿಗೆ ಆಹಾರವಾಗಿ ಮಾರ್ಪಟ್ಟಿದೆ. ಇದನ್ನು ಮತ್ತಷ್ಟು ವಿಸ್ತರಿಸಲು ಮೀನುಗಾರಿಕೆ ಇಲಾಖೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಕೃಷಿ ಹೊಂಡಗಳಿಗೆ ಉಚಿತ ಮೀನುಮರಿ ಕೆರೆಗಳು ಮಾತ್ರವಲ್ಲ ಕೃಷಿ ಹೊಂಡಗಳಲ್ಲೂ ಸಾಕಷ್ಟು ನೀರು ಸಂಗ್ರಹವಾಗಿದ್ದು ಅಲ್ಲೂ ಕೂಡಾ ಮೀನುಕೃಷಿ ಮಾಡಲು ಈಗ ಮೀನುಗಾರಿಕೆ ಇಲಾಖೆ ಉಚಿತವಾಗಿ ನೀಡಲು ಮುಂದಾಗಿದೆ. ಜಿಲ್ಲೆಯಲ್ಲಿ 1200ಕ್ಕೂ ಹೆಚ್ಚು ಕೃಷಿ ಹೊಂಡಗಳಿಂದ ಮೀನುಗಾರಿಕೆ ಇಲಾಖೆಯಿಂದ ಪ್ರತಿ ಹೊಂಡಕ್ಕೆ 250 ಮೀನು ಮರಿ ನೀಡಲಿದೆ. ಅರ್ಹರು ಜಿಲ್ಲೆ ಮತ್ತು ತಾಲೂಕಿನ ಮೀನುಗಾರಿಕೆ ಇಲಾಖೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯವನ್ನು ಪಡೆಯಬಹುದು. ಮೀನು ಕೃಷಿಗೆ ನೆರವುಜಿಲ್ಲೆಯಲ್ಲಿ ಈಗಾಗಲೇ ಹಲವು ರೈತರು ವೈಜ್ಞಾನಿಕವಾಗಿ ಮೀನುಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಸೀಗಡಿ ಮೀನು ಕೃಷಿ ಸೇರಿದಂತೆ ಹಲವು ಬಗೆಯ ಮೀನು ಸಾಕಣೆ ಮಾಡಿ ಲಾಭ ಗಳಿಸುತ್ತಿದ್ದಾರೆ. ಮೀನುಗಾರಿಕೆ ಇಲಾಖೆ ಆ ರೈತರಿಗೆ ಬೇಕಾದ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡುತ್ತಿದೆ. ಈಗ ಮೀನುಕೃಷಿಯನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಕೃಷಿ ಹೊಂಡ ಹೊಂದಿರುವವರಿಗೆ ಮೀನು ಮರಿ ವಿತರಿಸುತ್ತಿದ್ದು, ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ. ಮಹಿಳೆಯರಿಗೆ ಕಿಟ್, ಬೋಟ್ ಮೀನು ಮರಿ ಮಾತ್ರವಲ್ಲ. ಮಹಿಳಾ ಮೀನುಗಾರರಿಗೆ ಮೀನುಗಾರಿಕೆಗೆ ಅಗತ್ಯವಾದ ಎಲ್ಲ ಸಾಮಗ್ರಿಯನ್ನು ಒಳಗೊಂಡ ಕಿಟ್ ವಿತರಿಸುತ್ತಿದೆ. ಇದರ ಜೊತೆಗೆ ಅರ್ಹ ಮಹಿಳಾ ಮೀನುಗಾರರಿಗೆ ಎಲೆಕ್ಟ್ರಿಕ್ ಬೋಟ್ ವಿತರಿಸಲಾಗುತ್ತಿದೆ. ಕೆರೆಗಳಲ್ಲಿ ನೀರು ತುಂಬಿರುವುದರಿಂದ ಬೋಟ್ಗಳ ಅವಶ್ಯಕತೆ ಹೆಚ್ಚಿದೆ. ಹೀಗಾಗಿ ಮಹಿಳೆಯರು ಈ ಸೌಲಭ್ಯವನ್ನು ಪಡೆಯಲು ಮೀನುಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಬಹುದು. ಸದ್ಯ ಜಿಲ್ಲೆಯ 1608 ಕೆರೆಗಳ ಪೈಕಿ ಜಿಲ್ಲಾಪಂಚಾಯಿತಿ ವ್ಯಾಪ್ತಿಯಲ್ಲಿ 1394 ಕೆರೆಗಳಿದ್ದು ಇತ್ತೀಚೆಗೆ ಸುರಿದ ಮಳೆಯಿಂದ ಬಹುತೇಕ ಕೆರೆಗಳಲ್ಲಿ ನೀರು ತುಂಬಿಕೊಂಡಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 214 ಕೆರೆಗಳ ಪೈಕಿ ಈಗಾಗಲೇ 184ಕ್ಕೂ ಹೆಚ್ಚು ಕೆರೆಗಳ ಹರಾಜು ಪ್ರಕ್ರಿಯೆ ನಡೆದಿದ್ದು, ಇನ್ನು ಕೆಲವು ಕೆರೆಗಳ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಒಟ್ಟಿನಲ್ಲಿ ಬರದ ನಾಡು ಎಂದು ಕರೆಸಿಕೊಳ್ಳುತ್ತಿದ್ದ ಜಿಲ್ಲೆಯಲ್ಲಿ ಈಗ ಮೀನುಗಾರಿಕೆ ಸುಗ್ಗಿ ಜೋರಾಗಿದೆ. ಅಲ್ಲದೇ ಮೀನುಗಾರಿಕೆ ಇಲಾಖೆ ಕೂಡಾ ಜನರಿಗೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ರೈತರು ಇದರ ಸೌಲಭ್ಯ ಪಡೆದು ಸದ್ಬಳಕೆ ಮಾಡಿಕೊಳ್ಳಬೇಕಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಮೀನುಗಾರಿಕೆ ಇಲಾಖೆಯಲ್ಲಿ ದೊರೆಯುವ ಸೌಲಭ್ಯ ಪಡೆಯಲು ಬಾಗೇಪಲ್ಲಿ- ಚಿಂತಾಮಣಿಯ ಮೀನುಗಾರಿಕೆ ಇಲಾಖೆ ಸಹಾಯ ನಿರ್ದೇಶಕರ ಮೊಬೈಲ್ ನಂ. 97409 09438 ಹಾಗೂ ಚಿಕ್ಕಬಳ್ಳಾಪುರ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಮೊಬೈಲ್ ನಂ. 89714 10419 ಹಾಗೂ ಲ್ಯಾಂಡ್ ಲೈನ್ ನಂ. 08156 277118ನ್ನು ಸಂಪರ್ಕಿಸಲು ಕೋರಲಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಕೃಷಿ ಹೊಂಡ ಹೊಂದಿರುವವರಿಗೆ ಮೀನು ಮರಿ ವಿತರಿಸಲಾಗುವುದು. ಮಹಿಳೆಯವರಿಗೆ ಮೀನುಗಾರಿಕೆ ಕಿಟ್ ಜೊತೆ ಎಲೆಕ್ಟ್ರಿಕ್ ಬೋಟ್ನ್ನು ಕೂಡಾ ಕೊಡಲಾಗಿದೆ. ಹೆಚ್ಚಿನ ರೈತರು ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕಿದೆ. ಟಿ.ಎನ್.ಯಶಸ್ವಿನಿ, ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ ಈ ಬಾರಿ ದಾಖಲೆ ಮಳೆ ಸುರಿದಿರುವುದರಿಂದ ಕೃಷಿ ಹೊಂಡಗಳು ತುಂಬಿಕೊಂಡಿವೆ. ಮೀನುಗಾರಿಕೆ ಇಲಾಖೆ ವತಿಯಿಂದ ಮೀನು ವಿತರಣೆ ಮಾಡುತ್ತಿರುವುದು ಸ್ವಾಗತಾರ್ಹ. ಹೊಸದಾಗಿ ಮೀನು ಕೃಷಿಯಲ್ಲಿ ತೊಡಗಿಕೊಳ್ಳುವವರಿಗೆ ಇದು ನೆರವಾಗಲಿದೆ. ಪ್ರಶಾಂತ್, ಯುವ ರೈತ
from India & World News in Kannada | VK Polls https://ift.tt/3JVL29g