ದಕ್ಷಿಣ ಕನ್ನಡ ಜಿಲ್ಲಾ ರಂಗಮಂದಿರ ನಿರ್ಲಕ್ಷ್ಯಕ್ಕೆ ಆಕ್ರೋಶ: 17.5ಕೋಟಿ ರೂ. ವೆಚ್ಚದ ಯೋಜನೆ ಡಿಪಿಆರ್‌ನಲ್ಲೇ ಬಾಕಿ!

ವಿಜಯ್‌ ಕೋಟ್ಯಾನ್‌ ಮಂಗಳೂರು ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ , ಕಲಾಭಿಮಾನಿಗಳ ಮೂರು ದಶಕಗಳ ಜಿಲ್ಲಾರಂಗ ಮಂದಿರ ಕನಸು ಸಾಕಾರಗೊಳ್ಳುವ ಸಮಯ ಇನ್ನೂ ಸನ್ನಿಹಿತವಾದಂತಿಲ್ಲ. ಈ ಯೋಜನೆಗೆ ಡಿಪಿಆರ್‌ ಸಿದ್ಧಗೊಂಡಿದ್ದರೂ, ಈ ಜಾಗದಲ್ಲಿ ಬೇರೆ ಯೋಜನೆಗಳಿಗೆ ತೆರೆಮರೆಯ ಕಸರತ್ತು ನಡೆಯುತ್ತಿದ್ದು, ಇದು ಕಲಾವಿದರ ಆಕ್ರೋಶಕ್ಕೆ ಕಾರಣವಾಗಿದೆ. ಬೊಂದೇಲ್‌ನ ಮಹಿಳಾ ಪಾಲಿಟೆಕ್ನಿಕ್‌ ಸಮೀಪ ಲಭ್ಯವಿರುವ 8 ಎಕರೆ ಸರಕಾರಿ ಭೂಮಿಯಲ್ಲಿಸುಮಾರು 3.35 ಎಕರೆ ಸರಕಾರಿ ಸ್ಥಳ ರಂಗಮಂದಿರಕ್ಕಾಗಿ ಮೀಸಲಿಡಲಾಗಿದೆ. ಇದಕ್ಕಾಗಿ 17.5ಕೋಟಿ ರೂ. ಸಮಗ್ರ ಯೋಜನಾ ವರದಿ (ಡಿಪಿಆರ್‌) ರಚಿಸಲಾಗಿದ್ದು, ವರದಿಯನ್ನು ರಾಜ್ಯ ಗೃಹ ಮಂಡಳಿಗೂ ಸಲ್ಲಿಸಲಾಗಿದೆ. ಮೊದಲ ಹಂತದಲ್ಲಿ 5ಕೋಟಿ ರೂ. ಮಂಜೂರಾಗಿದ್ದು, ಇದರಲ್ಲಿ 2ಕೋಟಿ ರೂ. ಡಿಪಿಆರ್‌ ಸೇರಿದಂತೆ ನಾನಾ ಉದ್ದೇಶಕ್ಕೆ ಖರ್ಚು ಮಾಡಲಾಗಿದೆ. ಉಳಿದ 3ಕೋಟಿ ರೂ. ಅನುದಾನದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿಂದಿನ ಸಚಿವ ಸಿ.ಟಿ. ರವಿ ಹೆಚ್ಚುವರಿ 6ಕೋಟಿ ರೂ. ಮಂಜೂರು ಮಾಡಿದ್ದಾರೆ. ರಂಗ ಮಂದಿರದ ಡಿಪಿಆರ್‌ನಲ್ಲಿ ಮುಖ್ಯ ಸಭಾಂಗಣ (1200 ಪ್ಲಸ್‌ ಸಾಮರ್ಥ್ಯ), ಸಣ್ಣ ಸಭಾಂಗಣ (500ಮಂದಿ ಸಾಮರ್ಥ್ಯ)ಗಳಿರುತ್ತವೆ. ಜತೆಗೆ ನಾಟಕ ಇತ್ಯಾದಿಗಳನ್ನು ಅಭ್ಯಾಸ ಮಾಡುವ ಕೊಠಡಿ, ಕೊಂಕಣಿ, ಬ್ಯಾರಿ ಸಾಹಿತ್ಯ ಅಕಾಡೆಮಿಗಳ ಕಚೇರಿಗಳು, ಕನ್ನಡ ಸಾಹಿತ್ಯ ಪರಿಷತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಗಳು, ಕ್ಯಾಂಟೀನ್‌ ಇರುತ್ತವೆ. ಲೈಬ್ರೈರಿ, ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಿಸುವ ರಂಗಮಂದಿರದಲ್ಲಿ ಆಕರ್ಷಕ ರೀತಿಯ ಒಳವಿನ್ಯಾಸಗಳಿವೆ. ಆಡಳಿತಾತ್ಮಕ ಅನುಮೋದನೆ ಸಿಕ್ಕಿಲ್ಲ ರಂಗಮಂದಿರಕ್ಕೆ ಶಿಲಾನ್ಯಾಸವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೆರವೇರಿಸಿದ್ದಾರೆ. ಈ ಯೋಜನೆಗೆ 9 ಕೋಟಿ ರೂ. ಅನುದಾನ ರೆಡಿಯಿದ್ದರೂ ಇನ್ನೂ ಸರಕಾರದಿಂದ ಆಡಳಿತಾತ್ಮಕ ಅನುಮೋದನೆ ಸಿಕ್ಕಿಲ್ಲ. ಇದು ಕಲಾವಿದರು, ಹೋರಾಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ರೀತಿ ನಿರ್ಲಕ್ಷ್ಯ ಮತ್ತೆ ಹೋರಾಟ ಹಾದಿ ತುಳಿಯಬೇಕಾಗಬಹುದು ಎನ್ನುತ್ತಾರೆ ರಂಗಭೂಮಿ ಹೋರಾಟ ಸಮಿತಿ ಶಶಿರಾಜ್‌ ಕಾವೂರು. ಜಿಲ್ಲಾರಂಗ ಮಂದಿರಕ್ಕೆ 35ವರ್ಷದಿಂದ ಹೋರಾಟ ನಡೆಯುತ್ತಿದ್ದು, 3.35 ಎಕರೆ ಜಾಗ ಮೀಸಲಿರಿಸಿ 17.5ಕೋಟಿ ರೂ. ವೆಚ್ಚದ ಡಿಪಿಆರ್‌ ರಚಿಸಲಾಗಿದೆ. ಸರಕಾರದಿಂದ 11 ಕೋಟಿ ರೂ. ಅನುದಾನವೂ ಮಂಜೂರಾಗಿದ್ದರೂ, ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಮಾತ್ರವಲ್ಲದೆ ಈ ವ್ಯಾಪ್ತಿಯಲ್ಲಿ ಬೇರೆ ಯೋಜನೆಗೆ ಚಿಂತನೆ ನಡೆಸುವ ಮಾಹಿತಿ ಲಭಿಸಿದ್ದು, ಇದು ಖಂಡನೀಯ. ಶಶಿರಾಜ್‌ ಕಾವೂರು, ಅಧ್ಯಕ್ಷರು, ಮಂಗಳೂರು ರಂಗಭೂಮಿ ಮತ್ತು ರಂಗಭೂಮಿ ಹೋರಾಟ ಸಮಿತಿ ಬೋಂದೇಲ್‌ನಲ್ಲಿ ಸುಮಾರು 11ಎಕರೆ ಜಾಗವಿದ್ದು, ಅದರಲ್ಲಿ 3.35 ಎಕರೆ , 1 ಎಕರೆ ಎನ್‌ಸಿಸಿ ಸೇರಿದಂತೆ ನಾನಾ ಯೋಜನೆಗೆ ಮೀಸಲಿರಿಸಲಾಗಿದೆ. ರಂಗಮಂದಿರಕ್ಕೆ 17.5ಕೋಟಿ ಡಿಪಿಆರ್‌ ರಚಿಸಲಾಗಿದ್ದು, 9ಕೋಟಿ ರೂ. ಮಾತ್ರ ಮಂಜೂರಾಗಿದೆ. ಸರಕಾರದಿಂದ ಆಡಳಿತಾತ್ಮಕ ಅನುಮೋದನೆ ಸಿಗದೆ ಕಾಮಗಾರಿ ಆರಂಭಿಸಲು ಸಾಧ್ಯವಿಲ್ಲ. ಡಾ.ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿಗಳು, ದ.ಕ.


from India & World News in Kannada | VK Polls https://ift.tt/31BJXlY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...