ಭಾರತೀಯ ಕ್ರಿಕೆಟ್‌ಗೆ ಯುವಿ ನೀಡಿದ ಕೊಡುಗೆಯನ್ನು ಅಷ್ಟು ಬೇಗ ಮರೆತು ಬಿಟ್ರಾ?

ಹೊಸದಿಲ್ಲಿ: ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಮಾಜಿ ಕ್ರಿಕೆಟಿಗನಿಗೆ ಬೆಂಬಲ ಸೂಚಿಸಿದ ಏಕೈಕ ಕಾರಣಕ್ಕಾಗಿ ಭಾರತೀಯ ಕ್ರಿಕೆಟ್ ದಿಗ್ಗಜ ಮಾಜಿ ಆಲ್‌ರೌಂಡರ್ ವಿರುದ್ಧ ಭಾರಿ ಟೀಕಾ ಪ್ರಹಾರವನ್ನೇ ಮಾಡಲಾಗುತ್ತಿದೆ. ಯುವಿ ಮಾಡಿರುವ ಒಂದೇ ಒಂದು ಟ್ವೀಟ್‌ ಕಾರಣಕ್ಕಾಗಿ ಅವರು ಭಾರತೀಯ ಕ್ರಿಕೆಟ್‌ಗೆ ಮಾಡಿರುವ ಸೇವೆಯನ್ನು ಅಭಿಮಾನಿಗಳು ಮರೆತಿದ್ದಾರೆ. ಇಲ್ಲಿ ನಿಜಾಂಶವೆಂದರೆ ಯುವರಾಜ್ ಸಿಂಗ್ ಮಾನವೀಯತೆಯ ದೃಷ್ಟಿಕೋನದಲ್ಲಿ ಶಾಹೀದ್ ಆಫ್ರಿದಿಗೆ ಬೆಂಬಲ ಸೂಚಿಸಿದ್ದರು. ಏನಿದು ಘಟನೆ? ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟಲು ಇಡೀ ವಿಶ್ವವೇ ಸಮರೋಪಾದಿಯಲ್ಲಿ ಹೋರಾಟ ನಡೆಸುತ್ತಿದೆ. ಕೊರೊನಾ ವೈರಸ್ ಸರಪಳಿಯನ್ನು ಮುರಿಯುವ ನಿಟ್ಟಿನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದಕೊಳ್ಳಲು ಮನವಿ ಮಾಡಲಾಗಿದ್ದು, ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಪಾಕಿಸ್ತಾನದಲ್ಲೂ ಕೋವಿಡ್ 19 ವೈರಸ್‌ನಿಂದಾಗಿ ಜನರು ಒಂದು ತುತ್ತಿನ ಆಹಾರಕ್ಕಾಗಿ ಪರಿತಪಿಸುವಂತಾಗಿದೆ. ಹಾಗಿರಬೇಕೆಂದರೆ ಪಾಕ್ ಮಾಜಿ ನಾಯಕ ಹಾಗೂ ಆಲ್‌ರೌಂಡರ್ , ತಮ್ಮ ಸಹಾಯಾರ್ಥ ಸಂಸ್ಥೆಯ ಮೂಲಕ ಬಡ ಜನರ ನೆರವಿಗೆ ಧಾವಿಸಿದ್ದಾರೆ. ಇದಕ್ಕಾಗಿ ಡೋನೆಟ್ ಕರೋನಾ ಎಂಬ ವೆಬ್‌ಸೈಟ್ ಪ್ರಾರಂಭಿಸಿದ್ದಾರೆ. ಇದಕ್ಕೆ ಬೆಂಬಲ ಸೂಚಿಸಿದ ಭಾರತೀಯ ಆಫ್ ಸ್ಪಿನ್ನರ್ , ಶಾಹೀದ್ ಆಫ್ರಿದಿ ಫೌಂಡೇಷನ್‌ಗೆ ದೇಣಿಗೆ ನೀಡುವಂತೆ ಕರೆ ಮಾಡಿದ್ದರು. ಈ ಸಂದರ್ಭದಲ್ಲಿ ಶಾಹೀದ್ ಆಫ್ರಿದಿ ಅಭಿಯಾನಕ್ಕೆ ಬೆಂಬಲ ಸೂಚಿಸುವಂತೆ ಯುವರಾಜ್ ಸಿಂಗ್‌ ಅವರಿಗೂ ಮನವಿ ಮಾಡಿದ್ದರು. ಭಜ್ಜಿ ಕರೆಗೆ ಓ ಗೊಟ್ಟಿರುವ ಯುವಿ, ಪಾಕಿಸ್ತಾನದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಶಾಹೀದ್ ಆಫ್ರಿದಿ ಸಹಾಯಾರ್ಥ ಸಂಸ್ಥೆಗೆ ದೇಣಿಗೆ ನೀಡುವಂತೆ ಮನವಿ ಮಾಡಿದ್ದರು. #ShameOnYuviBhajji ಶಾಹೀದ್ ಆಫ್ರಿದಿಗೆ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಬೆಂಬಲ ನೀಡಿದ್ದೆ ತಡ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯರಿಂದ ವ್ಯಾಪಕ ಪ್ರತಿಭಟನೆಗೆ ಗ್ರಾಸವಾಯಿತು. ಅಲ್ಲದೆ #ShameOnYuviBhajji ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಯುವಿ ಹಾಗೂ ಭಜ್ಜಿ ವಿರುದ್ಧ ಭಾರಿ ಟೀಕಾಪ್ರಹಾರ ಮಾಡಲಾಯಿತು. ಶಾಹೀದ್ ಆಫ್ರಿದಿ ಫೌಂಡೇಷನ್ ಬದಲು ಭಾರತೀಯ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಲು ಯುವಿ ಹಾಗೂ ಭಜ್ಜಿ ಮನವಿ ಮಾಡಿಕೊಳ್ಳಬೇಕಿತ್ತು ಎಂದು ನೆಟ್ಟಿಗರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಕ್ಯಾನ್ಸರ್ ರೋಗದಿಂದ ಗೆದ್ದು ಬಂದು ಭಾರತೀಯ ಕ್ರಿಕೆಟ್‌ಗೆ ವಿಶ್ವಕಪ್ ವಿಜೇತ ಹೀರೊ ಯುವಿ ನೀಡಿರುವ ಕೊಡುಗೆಗಳನ್ನು ಮರೆತುಬಿಟ್ಟರು. ಆಫ್ರಿದಿ ವಿರುದ್ಧ ಭಾರತೀಯರು ಕೆಂಡಾಮಂಡಲ ಏಕೆ? ಕೆಲವು ತಿಂಗಳುಗಳ ಹಿಂದೆಯಷ್ಟೇ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನದ ಸಂವಿಧಾನದ 379ನೇ ವಿಧಿಯನ್ನು ಭಾರತೀಯ ಸರಕಾರ ರದ್ದುಗೊಳಿಸಿತ್ತು. ಇದರ ವಿರುದ್ಧ ಬಹಿರಂಗ ಹೇಳಿಕೆ ನೀಡಿರುವ ಶಾಹೀದ್ ಆಫ್ರಿದಿ, ಭಾರತದ ವಿರುದ್ಧ ಪ್ರತಿಭಟನೆ ಸಾರಿದ್ದರು. ಅಲ್ಲದೆ ಕಾಶ್ಮೀರ ಪಾಕಿಸ್ತಾನದ ಭಾಗ ಎಂದಿದ್ದರು. ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸಿದ್ದ ಶಾಹೀದ್ ಆಫ್ರಿದಿ, ಕಾಶ್ಮೀರ ವಿಷಯದಲ್ಲಿ ವಿಶ್ವಸಂಸ್ಥೆ ಹಾಗೂ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಧ್ಯ ಪ್ರವೇಶ ಮಾಡಬೇಕೆಂದು ಮನವಿ ಮಾಡಿದ್ದರು. ಅಲ್ಲದೆ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಹಮ್ಮಿಕೊಂಡಿದ್ದ ಪ್ರತಿಭಟನೆಗೂ ಸಾಥ್ ನೀಡಿದ್ದರು. ಕೇವಲ ಅಷ್ಟೇ ಅಲ್ಲ. ಹಿಂದೊಮ್ಮೆ ಸಂದರ್ಶನದಲ್ಲಿ ತಮ್ಮ ಮಗಳು ಭಾರತೀಯ ಹಿಂದೂ ಸಂಪ್ರದಾಯದಂತೆ ಆರತಿ ಮಾಡುತ್ತಿರುವುದನ್ನು ಗಮನಿಸಿದ ಶಾಹೀದ್ ಆಫ್ರಿದಿ ಟಿವಿಯನ್ನೇ ಒಡೆದು ಹಾಕಿರುವುದಾಗಿ ನುಡಿದಿದ್ದರು. ಈ ಮೂಲಕ ಭಾರತೀಯ ಹಿಂದೂ ಸಂಪ್ರದಾಯವನ್ನು ಅಣಕಿಸಿದ್ದರು. ಕೆಲವು ದಿನಗಳಷ್ಟೇ ಪಾಕಿಸ್ತಾನದ ಕರಾಚಿಯಲ್ಲಿ ಹಿಂದೂಗಳಿಗೆ ರೇಷನ್ ನಿರಾಕರಿಸಲಾಗಿದೆ ಎಂಬ ಬಗ್ಗೆಯೂ ಮಾಹಿತಿಗಳು ಬಂದಿದ್ದವು. ಇವೆಲ್ಲವೂ ಪಾಕಿಸ್ತಾನದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಲು ಕಾರಣವಾಗಿತ್ತು. ಪುಲ್ವಾಮಾದಲ್ಲಿ ದಾಳಿ ನಡೆದಾಗ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವಶಕ್ಕೆ ಪಡೆದ ಪಾಕಿಸ್ತಾನ ಕೆಟ್ಟ ರೀತಿಯಲ್ಲಿ ನಡೆಸಿಕೊಂಡಿತ್ತು ಎಂಬುದು ವರದಿಯಾಗಿತ್ತು. ಇದು ಕೂಡಾ ಪಾಕ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಇವೆಲ್ಲದಕ್ಕೂ ಮಿಗಿಲಾಗಿ ಪಾಕಿಸ್ತಾನ ಸದಾ ಗಡಿಯಾಚೆಗಿನ ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಲೇ ಬಂದಿದೆ. #IStandWithYuvi ಇದೇ ಸಂದರ್ಭದಲ್ಲಿ ಮಾನವೀಯತೆಯ ದೃಷ್ಟಿಕೋನದಲ್ಲಿ ಪಾಕಿಸ್ತಾನದ ಶಾಹೀದ್ ಆಫ್ರಿದಿಗೆ ಬೆಂಬಲ ಸೂಚಿಸಿರುವ ಯುವಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ #IStandWithYuvi ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಯುವಿ ಭಾರತೀಯ ಕ್ರಿಕೆಟ್‌ಗೆ ನೀಡಿರುವ ಸೇವೆಯನ್ನು ಮೆಲುಕು ಹಾಕಲಾಗುತ್ತಿದೆ. ಕ್ಯಾನ್ಸರ್ ರೋಗದ ನಡುವೆಯೂ ಯುವಿ ಭಾರತಕ್ಕಾಗಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ತದಾ ಬಳಿಕ ಯೂವಿ ಕ್ಯಾನ್ ಮೂಲಕ ಕ್ಯಾನ್ಸರ್ ರೋಗಿಗಳಿಗೆ ನೆರವಾಗುತ್ತಿದ್ದಾರೆ. ಇದೀಗ ಕೊರೊನಾ ವೈರಸ್ ವಿರುದ್ಧವೂ ತಮ್ಮ ಸಹಾಯಾರ್ಥ ಸಂಸ್ಥೆಯ ಮೂಲಕ ಹೋರಾಟವನ್ನು ಸಾರಿದ್ದಾರೆ. ಮಾನವೀಯತೆ ಮೊದಲು ಯೂವಿ ಕ್ಯಾನ್ ಸಂಸ್ಥೆಯ ಮೂಲಕ ಭಾರತೀಯ ಕ್ಯಾನ್ಸರ್ ರೋಗಿಗಳಿಗೆ ನೆರವಾಗುತ್ತಿದ್ದಾರೆ. ಯುವಿ ದೂರುವ ಮುನ್ನ ಎರಡು ಬಾರಿ ಯೋಚಿಸಿ ಯುವಿ ಮಾನವೀಯತೆಗೆ ಇದುವೇ ಸಾಕ್ಷಿ ಯುವರಾಜನಿಗೆ ಬೆಂಬಲ ಕೊರೊನಾ ವೈರಸ್ ವಿರುದ್ಧವೂ ಹೋರಾಟ ಸಾರಿದ ಯುವಿ


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3bI7BfM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...