ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಆರಾಧ್ಯ ದೈವ ಆರನೇ ಹಾಗೂ ಕೊನೆಯ ಪ್ರಯತ್ನದಲ್ಲಿ ವಿಶ್ವಕಪ್ ಟ್ರೋಫಿಯನ್ನು ಗೆದ್ದಿದ್ದರು. 2011ರ ಏಕದಿನ ವಿಶ್ವಕಪ್ ಗೆಲುವನ್ನು ಭಾರತೀಯ ತಂಡವು ಕ್ರಿಕೆಟ್ ದೇವರಿಗೆ ಅರ್ಪಿಸಿತ್ತು. ಭಾರತೀಯ ಕ್ರಿಕೆಟ್ಗೆ ಸಚಿನ್ ನೀಡಿರುವ ಕೊಡುಗೆ ಅಷ್ಟಿಷ್ಟಲ್ಲ. ಹಾಗಿರಬೇಕೆಂದರೆ ಸಚಿನ್ ತೆಂಡೂಲ್ಕರ್ ಜೊತೆಗೆ ಡ್ರೆಸ್ಸಿಂಗ್ ಕೊಠಡಿ ಹಂಚಿಕೊಂಡಿರುವ ಭಾರತೀಯ ಆಲ್ರೌಂಡರ್ , ಭಾರತೀಯ ಬೌಲಿಂಗ್ ವಿಭಾಗದ ಸಚಿನ್ ತೆಂಡೂಲ್ಕರ್ ಅವರನ್ನು ಹೆಸರಿಸಿದ್ದಾರೆ. "ಎಲ್ಲ ಆಟಗಾರನ ಸರ್ವಾಂಗೀಣ ಆಟದ ಬೆಂಬಲದೊಂದಿಗೆ ಭಾರತ ವಿಶ್ವಕಪ್ ಗೆಲ್ಲಲು ಯಶಸ್ವಿಯಾಗಿತ್ತು. ಇದರಲ್ಲಿ ಬೌಲಿಂಗ್ ವಿಭಾಗದ ಕೊಡುಗೆ ನಿರ್ಣಾಯಕವೆನಿಸಿತ್ತು. ಈ ನಿಟ್ಟಿನಲ್ಲಿ ಮಾಜಿ ವೇಗದ ಬೌಲರ್ , ಭಾರತೀಯ ತಂಡದ ಪಾಲಿಗೆ ಬೌಲಿಂಗ್ ವಿಭಾಗದ ಸಚಿನ್ ತೆಂಡೂಲ್ಕರ್ ಎಂದೆನಿಸಿದ್ದರು" ಎಂದು ರೈನಾ ಗುಣಗಾನ ಮಾಡಿದ್ದಾರೆ. ಏಪ್ರಿಲ್ 2ರಂದು ಭಾರತದ ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ ಒಂಬತ್ತು ವರ್ಷ ಭರ್ತಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ರೈನಾ, "ದೀಪಾವಳಿ, ಹೋಳಿ ಹಬ್ಬದಂತೆ ಪ್ರತಿ ವರ್ಷವೂ ವಿಶ್ವಕಪಕ್ ಗೆಲುವನ್ನು ಸಂಭ್ರಮಿಸುತ್ತೇವೆ" ಎಂದಿದ್ದಾರೆ. ಈ ಸಂದರ್ಭದಲ್ಲಿ ವಿಶ್ವಕಪ್ನಲ್ಲಿ ಅನುಭವಿ ವೇಗದ ಬೌಲರ್ ಜಹೀರ್ ಖಾನ್ ಪ್ರದರ್ಶನವನ್ನು ವಿಶೇಷವಾಗಿ ಉಲ್ಲೇಖಿಸಿದರು. "ನಾವು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ನಮ್ಮ ಪರವಾಗಿ ಸಾಗುತ್ತಿತ್ತು. ಬೌಲಿಂಗ್ ವಿಭಾಗವನ್ನು ಜಹೀರ್ ಭಾಯ್ ಮುನ್ನಡೆಸಿದರು. ಎಲ್ಲರೂ ನಮ್ಮ ಬಲಾಢ್ಯ ಬ್ಯಾಟಿಂಗ್ ವಿಭಾಗದ ಬಗ್ಗೆ ಮಾತನಾಡುತ್ತಿದ್ದರು. ಆದರೆ ಜಹೀರ್ ಖಾನ್ ಬೌಲಿಂಗ್ ವಿಭಾಗದ ಸಚಿನ್ ತೆಂಡೂಲ್ಕರ್ ಎಂದು ಹೇಳಲು ಬಯಸುತ್ತೇನೆ. ಪ್ರತಿ ಬಾರಿಯೂ ವಿಕೆಟ್ ಪಡೆದು ಬ್ರೇಕ್ ನೀಡುತ್ತಿದ್ದರು" ಎಂದು ವಿವರಿಸಿದರು. ಜಹೀರ್ ಖಾನ್ ಬಳಿಕ ವಿಶ್ವಕಪ್ ಹೀರೊ ಯುವರಾಜ್ ಸಿಂಗ್ ಕೊಡುಗೆಯನ್ನು ರೈನಾ ಸ್ಮರಿಸಿದರು. "ಯುವರಾಜ್ ಸಿಂಗ್ ಕೂಡಾ ವಿಕೆಟ್ಗಳನ್ನು ಪಡೆದರು. ಪಂದ್ಯವನ್ನು ಫಿನಿಶ್ ಮಾಡಿದರು" ಎಂದು ರೈನಾ ಸೇರಿಸಿದರು. ಏಕದಿನ ವಿಶ್ವಕಪ್ನಲ್ಲಿ ಜಹೀರ್ ಖಾನ್ ಒಟ್ಟು 21 ವಿಕೆಟ್ಗಳನ್ನು ಕಬಳಿಸಿದ್ದರು. ಈ ಮೂಲಕ ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಆಫ್ರಿದಿ ಜೊತೆಗೆ ಜಂಟಿ ಅಗ್ರಸ್ಥಾನವನ್ನು ಹಂಚಿದ್ದರು. ಒಂಬತ್ತು ಪಂದ್ಯಗಳಲ್ಲಿ ಜಹೀರ್ ಖಾನ್ ಅತ್ಯಂತ ಪರಿಣಾಮಕಾರಿ 18.76ರ ಸರಾಸರಿಯನ್ನು ಕಾಪಾಡಿದ್ದರು. ಅದೇ ಹೊತ್ತಿಗೆ ಫೈನಲ್ನಲ್ಲಿ ಶ್ರೀಲಂಕಾ ಸವಾಲಿನ ಮೊತ್ತ ಪೇರಿಸಿದಾಗಲೂ ಡ್ರೆಸ್ಸಿಂಗ್ ಕೊಠಡಿಯಲ್ಲಿ ಎಲ್ಲರೂ ಶಾಂತವಾಗಿದ್ದರು ಎಂದು ರೈನಾ ತಿಳಿಸಿದರು. "ಯಾರೋ ಶವರ್ನಲ್ಲಿದ್ದರು. ಇನ್ನೊಬ್ಬರು ಐಸ್ ಬಾತ್ ಮಾಡುತ್ತಿದ್ದರು, ಮತ್ತೊಬ್ಬರು ಆಹಾರ ಸ್ವೀಕರಿಸುತ್ತಿದ್ದರು. ಆದೆರೆ ಎಲ್ಲರೂ ಟ್ರೋಫಿ ಬಗ್ಗೆ ಯೋಚಿಸುತ್ತಿದ್ದರು. ಎಲ್ಲರೂ ಅವರವರ ವಲಯದಲ್ಲಿದ್ದರು. ಯಾರೂ ಪರಸ್ಪರ ಮಾತನಾಡುತ್ತಿರಲಿಲ್ಲ" ಎಂದು ನೆನಪಿಸಿದರು. "ವಿಶ್ವಕಪ್ ಗೆಲುವೊಂದೇ ಪ್ರತಿಯೊಬ್ಬರ ಗುರಿಯಾಗಿತ್ತು. ಸಚಿನ್ ಔಟಾದಾಗ ಮೌನ ಆವರಿಸಿತ್ತು. ಸೆಹ್ವಾಗ್ ಔಟಾದಾಗ ಗೌತಮ್ ಗಂಭೀರ್ ಹೇಗೆ ಮೈದಾನಕ್ಕಿಳಿದರು ಎಂಬುದನ್ನು ನೀವೆಲ್ಲ ನೋಡಿರಬಹುದು. ಅವರು ಅಷ್ಟೊಂದು ಆತ್ಮವಿಶ್ವಾಸ ಭರಿತವಾಗಿದ್ದರು. ಅವರ ದೇಹ ಭಾಷೆ ನೋಡಿದಾಗಲೇ ನಮಗಾಗಿ ವಿಶ್ವಕಪ್ ಗೆಲ್ಲಿಸಲಿದ್ದಾರೆ ಎಂದು ಅಂದುಕೊಂಡಿದ್ದೆ" ಎಂದು ರೈನಾ ಹಳೆಯ ನೆನಪುಗಳನ್ನು ತಾಜಾಗೊಳಿಸಿದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದಿದ್ದ ಮಹೇಂದ್ರ ಸಿಂಗ್ ಧೋನಿ, ಇನ್ ಫಾರ್ಮ್ ಆಟಗಾರ ಯುವರಾಜ್ ಸಿಂಗ್ ಅವರಿಗಿಂತಲೂ ಮುಂಚಿತವಾಗಿ ಕ್ರೀಸಿಗಿಳಿದಿದ್ದರು. ಮುತ್ತಯ್ಯ ಮುರಳೀಧರನ್ ವಿರುದ್ಧ ಚೆನ್ನಾಗಿ ಆಡುವುದರಿಂದ ಈ ಬಗ್ಗೆ ಕೋಚ್ ಗ್ಯಾರಿ ಕರ್ಸ್ಟನ್ಗೆ ತಿಳಿಸಿದ್ದರು. ಈ ಎಲ್ಲ ನೆನಪುಗಳು ಶಾಶ್ವತವಾಗಿದೆ ಎಂದು ರೈನಾ ವಿವರಿಸಿದರು. ಅಂತಿಮವಾಗಿ ಗೌತಮ್ ಗಂಭೀರ್ (97) ಹಾಗೂ ಮಹೇಂದ್ರ ಸಿಂಗ್ ಧೋನಿ (91*) ನಿರ್ಣಾಯಕ ಜೊತೆಯಾಟದ ನೆರವಿನಿಂದ ಭಾರತ 28 ವರ್ಷಗಳ ಬಳಿಕ ವಿಶ್ವಕಪ್ ಜಯಿಸಿತ್ತು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Xfsg6S