ಕೊರೊನಾ ಸೋಂಕಿತ ವೃದ್ಧ ಸಾವಿನ ಹಿನ್ನೆಲೆ, ಬಾಗಲಕೋಟೆಯಲ್ಲಿ ಹೈ ಅಲರ್ಟ್‌

ಬಾಗಲಕೋಟೆ: ಕೊರೊನಾ ಸೋಂಕಿನಿಂದ ವೃದ್ದ ಮೃತಪಟ್ಟ ಬೆನ್ನಲ್ಲೆ ಜಿಲ್ಲೆಯಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದೆ. ಆರೋಗ್ಯ ಅಧಿಕಾರಿಗಳು ಸರ್ವೆ ಕಾರ್ಯ, ಶಂಕಿತರ ಸ್ಯಾಂಪಲ್‌ ಕಳುಹಿಸುವ ಕೆಲಸಗಳಲ್ಲಿ ಬಿರುಸಿನಿಂದ ತೊಡಗಿಸಿಕೊಂಡಿದ್ದಾರೆ. ಆರೋಗ್ಯ ಇಲಾಖೆಯಿಂದ ಹಳೇ ನಗರದಾದ್ಯಂತ ಸವೆ೯ ಕಾರ್ಯ ಭರದಿಂದ ಸಾಗಿದೆ. ಒಂದೇ ದಿನಕ್ಕೆ 6,300 ಜನರನ್ನು ಆರೋಗ್ಯ ಇಲಾಖೆ ಸಿಬ್ಬಂದಿಗಳು ಸರ್ವೆ ಮಾಡಿದ್ದಾರೆ. 50 ತಂಡಗಳ ಮೂಲಕ ನಗರದಾದ್ಯಂತ ಸರ್ವೆ ಕಾರ್ಯ ನಡೆಯುತ್ತಿದೆ. ಸರ್ವೆ ಕಾರ್ಯದ ವೇಳೆ ಪತ್ತೆಯಾದ ಅನಾರೋಗ್ಯ ಪೀಡಿತ 9 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. ಇವರ ಪೈಕಿ ಮೂರು ಜನರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇಬ್ಬರು ಸದಸ್ಯರ ಒಟ್ಟು ತಂಡಗಳು ಸರ್ವೆ ನಡೆಸುತ್ತಿದ್ದರೆ, ಈ ತಂಡಗಳ ಉಸ್ತುವಾರಿಗೆ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಎಪ್ರಿಲ್ 15ರವರೆಗೂ ಈ ಸರ್ವೆ ಕಾರ್ಯವನ್ನು ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ. ಇಂದು ಮತ್ತೆ 7 ಜನರ ಗಂಟಲು ದ್ರವವನ್ನುಆರೋಗ್ಯ ಇಲಾಖೆ ಪರೀಕ್ಷೆಗೆ ಕಳುಹಿಸಿದೆ. ಇವರಲ್ಲಿ ಮೂರು ಜನರು ಮೃತ ಸೋಂಕಿತ ವೃದ್ಧರ ಸಂಪರ್ಕದಲ್ಲಿ ಇದ್ದವರಾಗಿದ್ದಾರೆ. ಇವರ ಜೊತೆಗೆ ಇನ್ನೂ ನಾಲ್ವರ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಇಲ್ಲಿಯವರೆಗೆ ಬಾಗಲಕೋಟೆ ಜಿಲ್ಲೆಯಿಂದ 28 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇವುಗಳಲ್ಲಿ 17 ಜನರ ರಿಪೋರ್ಟ್‌ ನೆಗೆಟಿವ್‌ ಬಂದಿದೆ. ಸಾವಿಗೀಡಾದ ವೃದ್ಧರೊಬ್ಬರ ವರದಿ ಮಾತ್ರ ಪಾಸಿಟಿವ್‌ ಬಂದಿತ್ತು. ಆದರೆ ಇನ್ನೂ 9 ಜನರ ವರದಿ ಬರಬೇಕಿದೆ. ಇನ್ನು ಒಬ್ಬರ ಸ್ಯಾಂಪಲ್‌ ರಿಜೆಕ್ಟ್‌ ಆಗಿದೆ.


from India & World News in Kannada | VK Polls https://ift.tt/2x1ZFYe

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...