
ಹೊಸದಿಲ್ಲಿ: ಬಗ್ಗೆ ವಿಡಿಯೋ ಸಂದೇಶ ನೀಡಿದ , ದೇಶದ 130 ಕೋಟಿ ಜನತೆಗೆ ಟಾಸ್ಕ್ ಒಂದನ್ನು ನೀಡಿದ್ದಾರೆ. ಕೊರೊನಾ ವೈರಸ್ ವಿರುದ್ಧ ಎಲ್ಲರೂ ಹೋರಾಡಲು ಅಂಧಕಾರವನ್ನು ತೊಲಗಿಸಿ ಬೆಳಕನ್ನು ತೋರಿಸಿ ಎಂದು ಮೋದಿ ಕರೆ ನೀಡಿದ್ದಾರೆ. ಏಪ್ರಿಲ್ 5ರಂದು ಭಾನುವಾರ ರಾತ್ರಿ 9 ಗಂಟೆಗೆ, ಮನೆಯ ಎಲ್ಲ ದೀಪಗಳನ್ನು ಬಂದ್ ಮಾಡಿ, ಮನೆ ಬಾಗಿಲಿನ ಬಳಿ ಅಥವಾ ಬಾಲ್ಕನಿಯಲ್ಲಿ ಮೋಂಬತ್ತಿ, ದೀಪ, ಟಾರ್ಚ್ ಅಥವಾ ಮೊಬೈಲ್ ಫ್ಲ್ಯಾಷ್ ಲೈಟ್ ಅನ್ನು ಬೆಳಗಿಸಿ ಎಂದು ಪ್ರಧಾನಿ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ. ಅಲ್ಲದೆ, ಈ ಸಮಯದಲ್ಲಿ ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದೂ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ನಮ್ಮ ಉತ್ಸಾಹಕ್ಕಿಂತ ದೊಡ್ಡದಾದ ಶಕ್ತಿ ಯಾವುದೂ ಇರುವುದಿಲ್ಲ. ಇಡೀ ವಿಶ್ವದಲ್ಲಿ ನಮ್ಮ ಈ ಶಕ್ತಿಯನ್ನು ಮಣಿಸಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲರೂ ಸೇರಿ ಕೊರೊನಾವನ್ನು ಸೋಲಿಸೋಣ ಎಂದು ಮೋದಿ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಈ ಲಾಕ್ಡೌನ್ ಸಮಯದಲ್ಲಿ, ಭಾರತದ ಜನರು ಶಿಸ್ತು ಮತ್ತು ಸೇವೆಯನ್ನು ತೋರಿಸಿದ ರೀತಿ ಅದ್ಭುತವಾಗಿದೆ ಎಂದೂ ದೇಶದ ಜನತೆಯನ್ನು ಶ್ಲಾಘಿಸಿದ್ದಾರೆ.
ಜನತಾ ಕರ್ಫ್ಯೂ ದಿನದಂದು ಚಪ್ಪಾಳೆ, ಏಪ್ರಿಲ್ 5 ರಂದು ದೀಪದ ಬೆಳಕು ಮಾರ್ಚ್ 22ರಂದು ಜನತಾ ಕರ್ಫ್ಯೂಗೆ ಕರೆ ನೀಡಿದ್ದ ಪ್ರಧಾನಿ ಮೋದಿ, ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೆ ಸಂಜೆ 5 ಗಂಟೆ ವೇಳೆಗೆ ಚಪ್ಪಾಳೆ ಹೊಡೆಯಲು ಹೇಳಿದ್ದರು. ಈ ವೇಳೆ ಪ್ರಧಾನಿ ಮನವಿಗೆ ದೇಶದ ಜನತೆ ಜನತಾ ಕರ್ಫ್ಯೂಗೆ ಅಭೂತಪೂರ್ವ ರೀತಿಯಲ್ಲಿ ಸ್ಪಂದಿಸಿದ್ದರು. ಅಲ್ಲದೆ, ಸಂಜೆ 5 ಗಂಟೆಗೆ ಚಪ್ಪಾಳೆ, ಜಾಗಟೆ, ಶಂಖ ಮುಂತಾದ ರೀತಿಯಲ್ಲಿ ಶಬ್ದ ಮಾಡಿದ್ದರು. ಆದರೆ, ಚಪ್ಪಾಳೆ ಹೊಡೆಯುವ ವೇಳೆ ಹಲವರು ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಈ ಹಿನ್ನೆಲೆ ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮನೆಯ ಎಲ್ಲ ದೀಪಗಳನ್ನು ಬಂದ್ ಮಾಡಿ ಮನೆ ಬಾಗಿಲಿನ ಬಳಿ ಅಥವಾ ಬಾಲ್ಕನಿಯಲ್ಲಿ ಮೋಂಬತ್ತಿ, ದೀಪ, ಟಾರ್ಚ್ ಅಥವಾ ಮೊಬೈಲ್ ಫ್ಲ್ಯಾಷ್ ಲೈಟ್ ಅನ್ನು ಬೆಳಗಿಸಿ. ಈ ವೇಳೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ನಿಮ್ಮ ಮನೆಯಿಂದ ಹೊರಗೆ, ಬೀದಿಗೆ ಬರುವುದು ಬೇಡ, ನಿಮ್ಮ ಮನೆಯ ಬಾಗಿಲಿನ ಬಳಿ, ಬಾಲ್ಕನಿಯಲ್ಲಿ ಬೆಳಕು ತೋರಿಸಿ ಎಂದು ಮೋದಿ ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದಾರೆ.
from India & World News in Kannada | VK Polls https://ift.tt/2wP05kL