ನ್ಯೂಜಿಲೆಂಡ್‌ಗಿಂತಲೂ ಹೀನಾಯ ಪ್ರದರ್ಶನದ ಬಗ್ಗೆ ಮನ ಬಿಚ್ಚಿದ ವಿರಾಟ್ ಕೊಹ್ಲಿ!

ಹೊಸದಿಲ್ಲಿ: ವರ್ಷಾರಂಭದಲ್ಲಿ ನಡೆದ ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ನಾಯಕ ಸಂಪೂರ್ಣ ವೈಫಲ್ಯವನ್ನು ಅನುಭವಿಸಿದ್ದರು. ಟ್ವೆಂಟಿ-20, ಏಕದಿನ ಹಾಗೂ ಟೆಸ್ಟ್ ಸೇರಿದಂತೆ ಎಲ್ಲ ಪ್ರಕಾರದಲ್ಲೂ ಸತತ ವೈಫಲ್ಯವನ್ನು ಅನುಭವಿಸಿದ್ದರು. ಟೆಸ್ಟ್ ಕ್ರಿಕೆಟ್‌ ತಮ್ಮ ಪಾಲಿಗೆ ಶ್ರೇಷ್ಠ ಎಂದು ಹೇಳಿಕೊಂಡು ಬರುತ್ತಿರುವ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬರಿ 38 ರನ್ ಮಾತ್ರ ಗಳಿಸಲು ಯಶಸ್ವಿಯಾಗಿದ್ದರು. ಈ ಮಧ್ಯೆ ತಮ್ಮ ಕ್ರೀಡಾ ಜೀವನದಲ್ಲಿ ಎದುರಾದ ಅತ್ಯಂತ ಹೀನಾಯ ಪ್ರದರ್ಶನದ ಬಗ್ಗೆ ವಿರಾಟ್ ಕೊಹ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ. ಇದು ನ್ಯೂಜಿಲೆಂಡ್ ಅಲ್ಲ. ಬದಲಾಗಿ ನೀವು ಅಂದುಕೊಂಡಂತೆ 2014ರ ಇಂಗ್ಲೆಂಡ್ ಪ್ರವಾಸವಾಗಿದೆ. 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸಿದ ವಿರಾಟ್ ಕೊಹ್ಲಿ ಆಡಿದ 10 ಇನ್ನಿಂಗ್ಸ್‌ಗಳಲ್ಲಿ 134 ರನ್ ಮಾತ್ರ ಗಳಿಸಲು ಸಾಧ್ಯವಾಗಿದ್ದರು. ಇಲ್ಲಿ ರನ್ ಮೆಶಿನ್ ವಿರಾಟ್ ಕೊಹ್ಲಿಗೆ ಒಂದೇ ಒಂದು ಅರ್ಧಶತಕ ಬಾರಿಸಲು ಸಾಧ್ಯವಾಗಿರಲಿಲ್ಲ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕ್ವಾರಂಟೈನ್ ಸಮಯವನ್ನು ಮನೆಯಲ್ಲಿ ಕಳೆಯುತ್ತಿರುವ ವಿರಾಟ್ ಕೊಹ್ಲಿ, ಇನ್‌ಸ್ಟಾಗ್ರಾಂ ಲೈವ್ ಪುಟದಲ್ಲಿ ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್ಸ್ ಜೊತೆಗೆ ನಡೆಸಿದ ಮಾತುಕತೆಯ ವೇಳೆಯಲ್ಲಿ ಈ ವಿವರಗಳನ್ನು ಬಿಚ್ಚಿಟ್ಟಿದ್ದಾರೆ. "2014ರ ಇಂಗ್ಲೆಂಡ್ ಪ್ರವಾಸ ನನ್ನ ವೃತ್ತಿ ಜೀವನದ ಅತ್ಯಂತ ಹೀನಾಯವಾದ ಪ್ರದರ್ಶನವಾಗಿದೆ. ಬ್ಯಾಟ್ಸ್‌ಮನ್ ಆಗಿ ಔಟಾಗಲಿದ್ದೇನೆ ಎಂದು ತಿಳಿದಿರುವ ಹಂತ ಅದಾಗಿತ್ತು. ನನಗೆ ರನ್ ಗಳಿಸಲು ಸಾಧ್ಯವಿಲ್ಲ ಎಂಬುದು ಗೊತ್ತಿತ್ತು. ಅಷ್ಟಾದರೂ ಪದೇ ಪದೇ ವೈಫಲ್ಯಗೊಳ್ಳಲು ಮಾತ್ರ ಸಿದ್ಧರಾಗಬೇಕಿತ್ತು. ಅದು ನನ್ನ ವೃತ್ತಿಜೀವನದ ಅತ್ಯಂತ ಕೆಟ್ಟ ಹಂತವಾಗಿದೆ. ಮುಂದೆಂದೂ ಈ ರೀತಿಯಾಗಿ ಆಡಲು ಬಿಡಲಾರೆ ಎಂದು ನನಗೆ ನಾನೇ ಭರವಸೆ ಕೊಟ್ಟೆ" ಎಂದು ಕೊಹ್ಲಿ ಕರಾಳ ದಿನಗಳನ್ನು ನೆನಪಿಸಿದರು. ಮಾತು ಮುಂದುವರಿಸಿದ ವಿರಾಟ್ ಕೊಹ್ಲಿ ಇವೆಲ್ಲವೂ ನಾನು ಹೆಚ್ಚು ಸ್ವಾರ್ಥಿಯಾಗಿದ್ದರಿಂದ ಸಂಭವಿಸಿದೆ. ಹಾಗಾಗಿ ನನ್ನನ್ನು ಕಾಡುತ್ತಿದೆ ಎಂದರು. 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಜೇಮ್ಸ್ ಆ್ಯಂಡ್ರೆಸನ್ ಸ್ವಿಂಗ್ ದಾಳಿಯಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ಸಂಕಷ್ಟವನ್ನು ಎದುರಿಸಿದ್ದರು. ಅಲ್ಲದೆ 13.40ರ ಸರಾಸರಿ ಕಾಪಾಡಿಕೊಂಡಿದ್ದರಲ್ಲದೆ ಅತಿ ಹೆಚ್ಚಿನ ಮುಖಭಂಗಕ್ಕೊಳಗಾಗಿದ್ದರು. ಅಲ್ಲಿಂದ ಬಳಿಕ ಎಚ್ಚೆತ್ತುಕೊಂಡ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರನ್ ಹೊಳೆಯನ್ನೇ ಹರಿಸಿದ್ದರು. ಆದರೆ ಇತ್ತೀಚಿನ ನ್ಯೂಜಿಲೆಂಡ್ ಪ್ರವಾಸದಲ್ಲಿ ಅಪರೂಪದ ವೈಫಲ್ಯ ಅನುಭವಿಸಿದ್ದರು. ಟಿ20, ಏಕದಿನ ಹಾಗೂ ಟೆಸ್ಟ್ ಸೇರಿದಂತೆ ಕಿವೀಸ್ ಪ್ರವಾಸದಲ್ಲಿ 218 ರನ್ ಮಾತ್ರ ಗಳಿಸಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3aDi63W

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...