ಬನ್ನಿ ಎಲ್ಲರೂ ರಾತ್ರಿ 9 ಗಂಟೆಗೆ ದೀಪ ಹಚ್ಚೋಣ: ಮೋದಿ ಕರೆಗೆ ಹಲವು ಗಣ್ಯರ ಬೆಂಬಲ..

ಹೊಸದಿಲ್ಲಿ: ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವಂತೆ, ವೈರಸ್‌ ವಿರುದ್ಧ ಹೋರಾಡಲು ಒಗ್ಗಟ್ಟು ಪ್ರದರ್ಶನಕ್ಕೆ ದೇಶದ ಜನತೆಗೆ ಭಾನುವಾರ ರಾತ್ರಿ 9 ಗಂಟೆಗೆ ದೀಪ ಹಚ್ಚಲು ಕರೆ ನೀಡಿದ್ದಾರೆ. ಇದಕ್ಕೆ ಹಲವು ಸೆಲೆಬ್ರಿಟಿಗಳು, ಉದ್ಯಮಿಗಳು ಬೆಂಬಲ ನೀಡಿದ್ದಾರೆ. ಕೊರೊನಾ ವೈರಸ್‌ ಸೋಂಕು ಹರಡುವ ಹಿನ್ನೆಲೆ ದೇಶಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದೆ. ಈ ನಡುವೆ ಪ್ರಧಾನಿ ಮೋದಿ ಏಪ್ರಿಲ್‌ 5ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮನೆಯ ವಿದ್ಯುತ್‌ ದೀಪಗಳನ್ನು ಆರಿಸಿ ಮೊಂಬತ್ತಿ, ದೀಪ, ಮೊಬೈಲ್‌ ಫ್ಲ್ಯಾಷ್‌ಲೈಟ್‌, ಟಾರ್ಚ್ - ಇವುಗಳಲ್ಲಿ ಯಾವುದಾದರೂ ಒಂದನ್ನು ಬೆಳಗಲು ಪ್ರಧಾನಿ ಕರೆ ನೀಡಿದ್ದಾರೆ. ಇದು ಕೊರೊನಾ ವೈರಸ್‌ ವಿರುದ್ಧ ಹೋರಾಡಲು ದೇಶದ ಜನತೆ ಒಗ್ಗಟ್ಟಿನತ್ತ ಸಾಗಿದಂತೆ. ಮೋದಿ ನೀಡಿದ ಈ ಟಾಸ್ಕ್‌ಗೆ ಹಲವರು ಬೆಂಬಲ ನೀಡಿದ್ದು, ತಮ್ಮ ಮನೆಯಲ್ಲಿ ದೀಪ ಹಚ್ಚುವುದಾಗಿ ಕರೆ ನೀಡಿದ್ದು, ಇತರರಿಗೂ ಮನವಿ ಮಾಡಿಕೊಂಡಿದ್ದಾರೆ. ನಟಿ ರವೀನಾ ಟಂಡನ್‌ ನಮ್ಮ ಮನೆಯಲ್ಲಿ ನಿತ್ಯ ದೀಪ ಬೆಳಗುತ್ತೇವೆ. ಪ್ರಧಾನಿಯ ಕರೆಯಂತೆ, ಕೊರೊನಾ ವೈರಸ್‌ ವಿರುದ್ಧ ಏಕತೆ ಪ್ರದರ್ಶಿಸಲು, ವೈದ್ಯಕೀಯ ಸಿಬ್ಬಂದಿ ಸೇರಿ ಕೊರೊನಾ ವಾರಿಯರ್ಸ್‌ಗೆ ಬೆಂಬಲ ನೀಡಲು ಭಾನುವಾರ ರಾತ್ರಿ 9 ಗಂಟೆಗೆ ದೀಪ ಬೆಳಗುವುದಾಗಿ ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ, ನಟ ರಾಮ್‌ಚರಣ್‌ ತೇಜ್‌ ಸಹ ಭಾನುವಾರ ರಾತ್ರಿ 9 ಗಂಟೆಗೆ ದೀಪಗಳನ್ನು ಬೆಳಗೋಣ ಎಂದು ಟ್ವೀಟ್‌ ಮೂಲಕ ಕರೆ ನೀಡಿದ್ದಾರೆ. ಈ ಟ್ವೀಟ್‌ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಜತೆಗೆ, ಶೇಖರ್‌ ಕಪೂರ್‌, ಪ್ರಸೂನ್‌ ಜೋಷಿ, ಉದ್ಯಮಿ ಡಾ. ಪ್ರವೀಣ್‌ ಪಾಟೀಲ್‌, ಸಿದ್ಧಾರ್ಥ್ ಕಣ್ಣನ್‌, ಜುಬಿನ್‌ ನೌಟಿಯಾಲ್‌ ಮುಂತಾದವರು ರಾತ್ರಿ 9 ಗಂಟೆಯ ವೇಳೆಗೆ ದೀಪ ಬೆಳಗುವ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಂಧ್ರ ಪ್ರದೇಶದ ಜನತೆಗೆ ದೀಪ ಹಚ್ಚಲು ಕರೆ ನೀಡಿದ ಸಿಎಂ ಜನನ್ಮೋಹನ್‌ ರೆಡ್ಡಿ ಅಂಧಕಾರವನ್ನು ತೊಲಗಿಸಿ ಬೆಳಕು ಮೂಡಿಸುವ ಮೋದಿ ಅಭಿಯಾನಕ್ಕೆ ಆಂಧ್ರಪ್ರದೇಶ ಸಿಎಂ ವೈ.ಎಸ್‌. ಜಗನ್ಮೋಹನ್‌ ರೆಡ್ಡಿ ಬೆಂಬಲ ವ್ಯಕ್ತಪಡಿಸಿದ್ದು, ಆಂಧ್ರದ ಜನತೆ ಇದನ್ನು ಪಾಲಿಸುವಂತೆ ಟ್ವೀಟ್‌ ಮೂಲಕ ಮನವಿ ಮಾಡಿಕೊಂಡಿದ್ದರು. ಜಗನ್ಮೋಹನ್‌ ರೆಡ್ಡಿ ಬೆಂಬಲಕ್ಕೆ ಮೋದಿ ಧನ್ಯವಾದ ತಿಳಿಸಿದ್ದಾರೆ.


from India & World News in Kannada | VK Polls https://ift.tt/3bPAQgS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...