ನಿವಾರ್ ಚಂಡಮಾರುತ, ಟೊಮೇಟೊಗೆ ಅಂಗಮಾರಿ ಹೊಡೆತ: ರೈತರಿಗೆ ನಷ್ಟದ ಸಂಕಷ್ಟ!

ಎಂ.ಪ್ರಶಾಂತ್‌ ಬೆಂಗಳೂರು ಗ್ರಾಮಾಂತರಬೆಂಗಳೂರು ಗ್ರಾಮಾಂತರ: ರಾಜ್ಯದಲ್ಲಿ ಇತ್ತೀಚೆಗೆ ಸುರಿದ ನಿವಾರ್‌ ಸೈಕ್ಲೋನ್‌ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ ಟೊಮೇಟೊ ಬೆಳೆಯಲ್ಲಿ ಅಂಗಮಾರಿ ರೋಗ ಉಲ್ಬಣಗೊಳ್ಳಲು ಕಾರಣವಾಗಿದ್ದು, ಬೆಳೆಗಾರರನ್ನು ಸಂಕಷ್ಟಕ್ಕೀಡುಮಾಡಿದೆ. ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಧಿಕ ಟೊಮೇಟೊ ಬೆಳೆಗಾರರು ಅಂಗಮಾರಿ ಹೊಡೆತಕ್ಕೆ ನಲುಗಿದ್ದಾರೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ ಸಾಕಷ್ಟು ಹಾನಿಯನ್ನುಂಟು ಮಾಡಿದ ನಿವಾರ್‌ ಚಂಡಮಾರುತ ರಾಜ್ಯದ ತಮಿಳುನಾಡು ಗಡಿ ಭಾಗಗಳ ಜಿಲ್ಲೆಗಳಾದ ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸತತ ಎರಡ್ಮೂರು ದಿನ ಮಳೆ ಜತೆಗೆ ಮೋಡ ಕವಿದ ವಾತಾವರಣವು ಹಲವು ಬೆಳೆಗಳ ಮೇಲೆ ಪ್ರಭಾವ ಬೀರಿದೆ. ಮುಖ್ಯವಾಗಿ ಆಲೂಗಡ್ಡೆ ಮತ್ತು ಟೊಮೇಟೊ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಅಂಗಮಾರಿ ರೋಗ ಹೆಚ್ಚಾಗಲು ಕಾರಣವಾಗಿದೆ.

ನಿವಾರ್‌ ಸೈಕ್ಲೋನ್‌ ನಿಂದಾಗಿ ಟೊಮೇಟೊ ಬೆಳೆಗೆ ಅಂಗಮಾರಿ ರೋಗ ಉಂಟಾಗಿದ್ದು, ರೈತರಿಗೆ ನಷ್ಟದ ಭೀತಿಯ ಸಂಕಷ್ಟ ಎದುರಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವಡೆ ಅಂಗಮಾರಿ ರೋಗ ನಿಯಂತ್ರಣಕ್ಕಾಗಿ ಬಳಸುವ ಆಕ್ರೋಬಿಟ್‌ ಎಂಬ ಔಷಧಕ್ಕಾಗಿ ಬೆಳೆಗಾರರು ಪರದಾಟ ನಡೆಸುತ್ತಿದ್ದಾರೆ. ಅಂಗಡಿಗಳಲ್ಲಿ ಈ ಔಷಧಿಯನ್ನು ಕದ್ದು ಮುಚ್ಚಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಸೈಕ್ಲೋನ್‌ನಿಂದ ಜಿಲ್ಲೆಯಲ್ಲಿ 55 ಹೆಕ್ಟೇರ್‌ನಷ್ಟು ಟೊಮೇಟೊ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 300 ಹೆಕ್ಟೇರ್‌ ಪ್ರದೇಶದಲ್ಲಿ ಟೊಮೇಟೊ ಬೆಳೆಯಿದ್ದು, ರೋಗಗಳ ರಕ್ಷಣೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.


ನಿವಾರ್ ಚಂಡಮಾರುತ, ಟೊಮೇಟೊಗೆ ಅಂಗಮಾರಿ ಹೊಡೆತ: ರೈತರಿಗೆ ನಷ್ಟದ ಸಂಕಷ್ಟ!

ಎಂ.ಪ್ರಶಾಂತ್‌ ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರ:

ರಾಜ್ಯದಲ್ಲಿ ಇತ್ತೀಚೆಗೆ ಸುರಿದ ನಿವಾರ್‌ ಸೈಕ್ಲೋನ್‌ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ ಟೊಮೇಟೊ ಬೆಳೆಯಲ್ಲಿ ಅಂಗಮಾರಿ ರೋಗ ಉಲ್ಬಣಗೊಳ್ಳಲು ಕಾರಣವಾಗಿದ್ದು, ಬೆಳೆಗಾರರನ್ನು ಸಂಕಷ್ಟಕ್ಕೀಡುಮಾಡಿದೆ. ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಧಿಕ ಟೊಮೇಟೊ ಬೆಳೆಗಾರರು ಅಂಗಮಾರಿ ಹೊಡೆತಕ್ಕೆ ನಲುಗಿದ್ದಾರೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ ಸಾಕಷ್ಟು ಹಾನಿಯನ್ನುಂಟು ಮಾಡಿದ ನಿವಾರ್‌ ಚಂಡಮಾರುತ ರಾಜ್ಯದ ತಮಿಳುನಾಡು ಗಡಿ ಭಾಗಗಳ ಜಿಲ್ಲೆಗಳಾದ ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸತತ ಎರಡ್ಮೂರು ದಿನ ಮಳೆ ಜತೆಗೆ ಮೋಡ ಕವಿದ ವಾತಾವರಣವು ಹಲವು ಬೆಳೆಗಳ ಮೇಲೆ ಪ್ರಭಾವ ಬೀರಿದೆ. ಮುಖ್ಯವಾಗಿ ಆಲೂಗಡ್ಡೆ ಮತ್ತು ಟೊಮೇಟೊ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಅಂಗಮಾರಿ ರೋಗ ಹೆಚ್ಚಾಗಲು ಕಾರಣವಾಗಿದೆ.



​ಔಷಧಕ್ಕೆ ಪರದಾಟ
​ಔಷಧಕ್ಕೆ ಪರದಾಟ

ಗ್ರಾಮಾಂತರ ಜಿಲ್ಲೆಯ ಹಲವಡೆ ಅಂಗಮಾರಿ ರೋಗ ನಿಯಂತ್ರಣಕ್ಕಾಗಿ ಬಳಸುವ ಆಕ್ರೋಬಿಟ್‌ ಎಂಬ ಔಷಧಕ್ಕಾಗಿ ಬೆಳೆಗಾರರು ಪರದಾಟ ನಡೆಸುತ್ತಿದ್ದಾರೆ. ಗ್ರಾಮೀಣ ಭಾಗದ ಕೆಲವು ಔಷಧ ಅಂಗಡಿಗಳಲ್ಲಿ ಇವುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ತಮಗೆ ಬೇಕಾದವರಿಗೆ ಮಾತ್ರ ಈ ಔಷಧವನ್ನು ಕದ್ದು ಮುಚ್ಚಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಬೆಳೆಗಾರರಿಂದ ಕೇಳಿ ಬರುತ್ತಿದೆ. ಈ ಔಷಧ 200 ಗ್ರಾಂ 1200 ರೂ. ಬೆಲೆಯಿದೆ.

ಭತ್ತಕ್ಕೆ ನಿವಾರ್‌ ಸೈಕ್ಲೋನ್‌ ಎಫೆಕ್ಟ್: ಆತಂಕದಲ್ಲಿ ದಾವಣಗೆರೆ ರೈತರು!



​ಹೆಚ್ಚು ಬೇಡಿಕೆ
​ಹೆಚ್ಚು ಬೇಡಿಕೆ

15 ಕೆಜಿಯ ಒಂದು ಕ್ರೇಟ್‌ 150 ರಿಂದ 200 ರೂ. ಬೆಲೆಯಿದೆ. ಹೋಟೆಲ್‌, ಮದುವೆ, ಇತ್ಯಾದಿ ಸಮಾರಂಭಗಳಲ್ಲಿ ಮಾಡುವ ಅಡುಗೆ ಪದಾರ್ಥಗಳಲ್ಲಿ ಟೊಮೇಟೊ ಬಹುಮುಖ್ಯವಾಗಿದ್ದು, ರೋಗದಿಂದ ಇಳುವರಿ ಕುಸಿತಗೊಂಡರೆ ಮುಂಬರುವ ದಿನಗಳಲ್ಲಿ ಇದರ ಬೆಲೆ ದುಬಾರಿಯಾಗುವ ಸಾಧ್ಯತೆಯಿದೆ. ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಜನ ಟೊಮೇಟೊ ಮುಂತಾದ ತರಕಾರಿ ಹಾಗೂ ಪುಷ್ಪ ಕೃಷಿ ನಂಬಿ ಜೀವನ ಮಾಡುತ್ತಾರೆ. ಅಷ್ಟೇ ವ್ಯಾಪಕವಾದ ಮಾರುಕಟ್ಟೆಯನ್ನು ಕಂಡುಕೊಂಡಿದ್ದಾರೆ. ಬೆಂಗಳೂರು ಅಲ್ಲದೇ ಗ್ರಾಮಾಂತರ ಜಿಲ್ಲೆಯ ಬೆಳೆಗಾರರು ಅತ್ತ ಕೋಲಾರ, ತಮಿಳುನಾಡಿನ ಹೊಸೂರಿನ ಮಾರುಕಟ್ಟೆಗೆ ರಫ್ತು ಮಾಡುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಿವಾರ್‌ ಸೈಕ್ಲೋನ್‌ ಎಫೆಕ್ಟ್: ಜನ ಜೀವನ ತತ್ತರ!



​ಟೊಮೇಟೊ ಬೆಳೆ
​ಟೊಮೇಟೊ ಬೆಳೆ

ಕೋಲಾರ ಜಿಲ್ಲೆಯಲ್ಲಿ ವಾರ್ಷಿಕ 15ರಿಂದ 20 ಸಾವಿರ ಹೆಕ್ಟೇರ್‌ನಲ್ಲಿ ಟೊಮೇಟೊ ಬೆಳೆಯಲಾಗುತ್ತದೆ. ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಾರಿ 300 ಹೆಕ್ಟೇರ್‌ನಲ್ಲಿ ಟೊಮೇಟೊ ಬೆಳೆ ಬೆಳೆಯಲಾಗಿದೆ.

ಟೊಮೇಟೊ ಬೆಳೆಗಾರರಿಗೆ ಮಳೆ ಸಂಕಷ್ಟ: ತೇವಾಂಶ ಹೆಚ್ಚಳಕ್ಕೆ ಕಾಡುತ್ತಿದೆ ರೋಗ ಬಾಧೆ!



55 ಹೆಕ್ಟೇರ್‌ನಷ್ಟು ಟೊಮೇಟೊ ಬೆಳೆ ನಷ್ಟ!
55 ಹೆಕ್ಟೇರ್‌ನಷ್ಟು ಟೊಮೇಟೊ ಬೆಳೆ ನಷ್ಟ!

ಸೈಕ್ಲೋನ್‌ನಿಂದ ಜಿಲ್ಲೆಯಲ್ಲಿ 55 ಹೆಕ್ಟೇರ್‌ನಷ್ಟು ಟೊಮ್ಯಾಟೊ ಕ್ರಾಪ್‌ ಲಾಸ್‌ ಆಗಿದೆ. ಇದರ ಬಗ್ಗೆ ವರದಿ ಸಲ್ಲಿಸಿದೆ.

ಗಾಯಿತ್ರಿ | ಉಪನಿರ್ದೇಶರು ತೋಟಗಾರಿಕೆ ಇಲಾಖೆ ಕೋಲಾರ

ಗ್ರಾಮಾಂತರ ಜಿಲ್ಲೆಯಲ್ಲಿ 300 ಹೆಕ್ಟೇರ್‌ ಪ್ರದೇಶದಲ್ಲಿ ಟೊಮೇಟೊ ಬೆಳೆಯಿದ್ದು, ರೋಗಗಳ ರಕ್ಷಣೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಮಹಾಂತೇಶ್‌ ಮುರುಗೊಡು | ಉಪನಿರ್ದೇಶಕರು

ಟೊಮೇಟೊ ಹಿತಮಿತವಾಗಿ ತಿನ್ನಿ, ಇಲ್ಲಾಂದ್ರೆ ಈ ಸಮಸ್ಯೆಗಳು ಗ್ಯಾರಂಟಿ !!

ಮುಕ್ಕಾಲು ಎಕರೆಯ ಟೊಮೇಟೊ ಬೆಳೆಗೆ 85 ಸಾವಿರ ಖರ್ಚಾಗಿದೆ. ಸೈಕ್ಲೋನ್‌ನಿಂದ ಅಂಗಮಾರಿ ಜಾಸ್ತಿಯಾಗಿ ಗಿಡದಲ್ಲಿಯೇ ಕಾಯಿಗಳು ಉದುರಿಸುತ್ತಿವೆ. ರೋಗ ನಿಯಂತ್ರಣಕ್ಕೆ ಔಷಧ ಸಿಗುತ್ತಿಲ್ಲ.

ಚನ್ನಕೇಶವ | ರೈತ ಬಾಲೇನಹಳ್ಳಿ





from India & World News in Kannada | VK Polls https://ift.tt/3luASiP

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...