ಆನ್‌ಲೈನ್ ಲೋನ್‌ ವಂಚನೆಗೆ ಬೆಂಗಳೂರೇ ಕೇಂದ್ರ..! ಪೊಲೀಸರ ತನಿಖೆಯಲ್ಲಿ ಬಹಿರಂಗ

ಬೆಂಗಳೂರು: ಹೈದರಾಬಾದ್‌, ಗುರುಗ್ರಾಮ, ಸೇರಿದಂತೆ ದೇಶದ ಹಲವೆಡೆ ಕಿರು ಅವಧಿಯ ಸಾಲ ನೀಡುವ ಆ್ಯಪ್‌ಗಳ ಅಭಿವೃದ್ಧಿಯ ಕಾರ್ಯಸ್ಥಾನ ಬೆಂಗಳೂರು ನಗರವೇ ಆಗಿದೆ ಎಂಬ ಮಾಹಿತಿ ಪೊಲೀಸ್‌ ತನಿಖೆಯಲ್ಲಿ ಬೆಳಕಿಗೆ ಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ಹೈದರಾಬಾದ್‌ ಪೊಲೀಸರು ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಎರಡು ಕಾಲ್‌ ಸೆಂಟರ್‌ಗಳ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಎರಡು ಕಾಲ್‌ ಸೆಂಟರ್‌ಗಳಲ್ಲಿ ಸುಮಾರು 350 ಜನ ಕೆಲಸ ಮಾಡುತ್ತಿದ್ದರು. ಸಾಲಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸುವುದು, ವಿಳಂಬವಾದರೆ ಕರೆ ಮಾಡುವುದು ಮತ್ತು ವಾಟ್ಸ್‌ಆ್ಯಪ್‌ ಸೇರಿದಂತೆ ಇನ್ನಿತರ ಜಾಲತಾಣಗಳ ಮೂಲಕ ಕಿರುಕುಳ ನೀಡುವುದು, ಅವಮಾನ ಮಾಡುವುದನ್ನು ಮಾಡುತ್ತಿದ್ದರು ಎಂದು ಹೈದರಾಬಾದ್‌ ಪೊಲೀಸರು ತಿಳಿಸಿದ್ದಾರೆ. ಸಾಫ್ಟ್‌ವೇರ್‌ ಕಂಪನಿ, ಉದ್ದಿಮೆ, ಸ್ಟಾರ್ಟ್‌ಅಪ್‌ಗಳ ನಗರವಾಗಿರುವ ಬೆಂಗಳೂರಿನಲ್ಲೇ ನೂರಾರು ಲೋನ್‌ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿ ಗೂಗಲ್‌ ಪ್ಲೇಸ್ಟೋರ್‌ಗೆ ಹಾಕಲಾಗಿದೆ. ಎನ್‌ಬಿಎಫ್‌ಸಿ, ಮೈಕ್ರೋಫೈನಾನ್ಸ್‌ ಕಂಪನಿಗಳು ಇಂತಹ ಲೋನ್‌ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಲು ನಗರದ ಸಾಫ್ಟ್‌ವೇರ್‌ ಕಂಪನಿಗಳು, ಆ್ಯಪ್‌ ಡೆವಲಪರ್‌ಗಳಿಗೆ ಬೇಡಿಕೆ ಇಡುತ್ತಾರೆ. ಕೆಲವೊಮ್ಮೆ ಸಾಫ್ಟ್‌ವೇರ್‌ ಕಂಪನಿಗಳೇ ಈ ರೀತಿಯ ಉದ್ಯಮ ನಡೆಸಬಹುದು ಎಂದು ಐಡಿಯಾ ನೀಡುತ್ತವೆ. ಅದಕ್ಕೆ ಕಾನೂನುಬಾಹಿರವಾಗಿ ಕೆಲವರು ನೇರವಾಗಿ ಸಾಲ ವ್ಯವಹಾರ ನಡೆಸಿದರೆ, ಮತ್ತೆ ಕೆಲವು ಎನ್‌ಬಿಎಫ್‌ಸಿ ಮತ್ತು ಮೈಕ್ರೋಫೈನಾನ್ಸ್‌ಗಳ ಜತೆ ಒಪ್ಪಂದ ಮಾಡಿಕೊಂಡು ಸಾಲ ಒದಗಿಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.


from India & World News in Kannada | VK Polls https://ift.tt/2WR83TQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...