ಹೊಸದಿಲ್ಲಿ: ಜಾಗತಿಕವಾಗಿ ಶ್ರೇಷ್ಠವಾದುದು ಭಾರತದಲ್ಲೇ ತಯಾರಾಗಬೇಕು ಎಂಬುದು ಕೇಂದ್ರ ಸರ್ಕಾರದ ನಿಲುವಾಗಿದ್ದು, ಇದು ಭಾರತವನ್ನು ಆತ್ಮನಿರ್ಭರವನ್ನಾಗಿ ಮಾಡುವ ಕನಸನ್ನು ಈಡೇರಿಸಲಿದೆ ಎಂದು ಹೇಳಿದ್ದಾರೆ. ತಮ್ಮ 72ನೇ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಆತ್ಮನಿರ್ಭರ ಭಾರತಕ್ಕಾಗಿ ಸಂಕ್ಲಪ ತೊಡುವಂತೆ ಮತ್ತೊಮ್ಮೆ ದೇಶವಾಸಿಗಳಲ್ಲಿ ಮನವಿ ಮಾಡಿದರು. ಪ್ರಧಾನಿ ಮನ್ ಕಿ ಬಾತ್ ಕಾರ್ಯಕ್ರಮದ ಪ್ರಮುಖ ಅಂಶಗಳು: * ಜಾಗತಿಕವಾಗಿ ಶ್ರೇಷ್ಠವಾದುದು ಭಾರತದಲ್ಲೂ ತಯಾರಾಗಬೇಕು ಎಂಬುದು ನನ್ನ ಕನಸು ಎಂದ ಪ್ರಧಾನಿ. *ಭಾರತೀರು ದೇಶಿ ವಸ್ತುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದನ್ನು ನೋಡಲು ಕಾತರನಾಗಿದ್ದೇನೆ ಎಂದ ಮೋದಿ. * 2020ರ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲು ಸಂತಸವಾಗುತ್ತಿದೆ ಎಂದ ಪ್ರಧಾನಿ. * ಮೇಡ್ ಇನ್ ಇಂಡಿಯಾ ಆಟಿಕೆ ವಸ್ತುಗಳನ್ನು ಕೊಳ್ಳಲು ಜನ ಮುಂದಾಗುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. *ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ನಿಜಕ್ಕೂಅದ್ಭುತ ಜನಸ್ಪಂದನೆ ಸಿಗುತ್ತಿದೆ ಎಂದ ಪ್ರಧಾನಿ. *ಭಾರತದ ವಸ್ತುಗಳು ಜಾಗತಿಕ ಮಾರುಕಟ್ಟೆಯಲ್ಲಿ ವಿಜೃಂಭಿಸುವ ದಿನಗಳು ದೂರವಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ ಮೋದಿ. *2014-18ರ ಅವಧಿಯಲ್ಲಿ ಭಾರತದಲ್ಲಿ ಚಿರತೆಗಳ ಸಂಖ್ತೆ ಶೇ.60ರಷ್ಟು ಹೆಚ್ಚಿರುವುದು ಸಂತಸದ ಸಂಗತಿ. *ಭಾರತದ ಯುವ ಜನತೆ ದೇಶದ ದಿಕ್ಕನ್ನೇ ಬದಲಿಸಬಲ್ಲ ಶಕ್ತಿಯನ್ನು ಹೊಂದಿದ್ದು, ದೇಶದ ಭವಿಷ್ಯ ಯುವ ಜನಾಂಗದ ಕೈಯಲ್ಲಿ ಸುರಕ್ಷಿತಾಗಿದೆ. ಹೀಗೆ ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮ ಉದ್ದೇಶೀಸಿ ಈ ಬಾರಿ ಸುದೀರ್ಘ ಭಾಷಣ ಮಾಡಿದ್ದು, ಹಲವು ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲಿದ್ದಾರೆ.
from India & World News in Kannada | VK Polls https://ift.tt/34MuNIT