ಪಾಟ್ನಾ: ಎಂಬ ಭ್ರಮೆ ದೇಶದಲ್ಲಿ ಪರಸ್ಪರ ಅಪನಂಬಿಕೆ, ದ್ವೇಷ ಹಾಗೂ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದು, ಈ ಕೂಡಲೇ ಈ ಭ್ರಮೆಯನ್ನು ತೊಡೆದು ಹಾಕುವ ಕೆಲಸ ಮಾಡಬೇಕಿದೆ ಂದು ಬಿಜೆಪಿ ಮಿತ್ರಪಕ್ಷ ಜೆಡಿಯು ಆಗ್ರಹಿಸಿದೆ. ಈ ಕುರಿತು ಮಾತನಾಡಿರುವ ಜೆಡಿಯು ಹಿರಿಯ ನಾಯಕ ಕೆಸಿ ತ್ಯಾಗಿ, ಲವ್ ಜಿಹಾದ್ ನೆಪದಲ್ಲಿ ಜನರ ಆಯ್ಕೆಯ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಯಾವುದೇ ವಯಸ್ಕ ಜೋಡಿ ತಮಗೆ ಇಷ್ಟ ಬಂದ ಬಾಳಸಂಗಾತಿಯನ್ನಯ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಸಂವಿಧಾನವೇ ನಮಗೆ ನೀಢಿದೆ. ಆದರೆ ಈ ಸ್ವಾತಂತ್ರ್ಯವನ್ನು ಕಸಿದುಕೊಂಡು ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೆಸಿ ಆತ್ಯಾಗಿ ಗುಡುಗಿದ್ದಾರೆ. ಜೆಡಿಯು ಆಕ್ರೋಶಕ್ಕೆ ಕಾರಣ?: ಅರುಣಾಚಲ ಪ್ರದೇಶದಲ್ಲಿ ತನ್ನ ಆರು ಶಾಸಕರನ್ನು ಆಪೋಷಣ ಪಡೆದ ಬಿಜೆಪಿ ವಿರುದ್ಧ ಜೆಡಿಯು ಇದೀಗ ತಿರುಗಿ ಬಿದ್ದಿದೆ. ಅರುಣಾಚಲ ಪ್ರದೇಶದ ಬೆಳವಣಿಗೆಯಿಂದಾಗಿ ಜೆಡಿಯು ರಾಷ್ಟ್ರ ಮಟ್ಟದಲ್ಲಿ ಮುಜುಗರಕ್ಕೀಡಾಗಿದೆ. ಈಗಾಗಲೇ ಬಿಹಾರದಲ್ಲಿ ಜ್ಯೂನಿಯರ್ ಪಾರ್ಟನರ್ ಪಟ್ಟ ಪಡೆದಿರುವ ಜೆಡಿಯು, ಬಿಜೆಪಿ ಕೃಪಾಕಟಾಕ್ಷದಿಂದಲೇ ಮುಖ್ಯಮಂತ್ರಿ ಪದವಿ ಪಡೆದಿದೆ. ಆದರೆ ಅರುಣಾಚಲ ಪ್ರದೇಶದಲ್ಲಿ ಆದ ಮುಜುಗರ ಮುಖ್ಯಮಂತ್ರಿ ತಂಡದಲ್ಲಿ ಆಕ್ರೋಶದ ಅಲೆ ಎಬ್ಬಿಸಿದೆ. ಇದೇ ಕಾರಣಕ್ಕೆ ಬಿಜೆಪಿಯ ಲವ್ ಜಿಹಾದ್ ನೀತಿಯನ್ನು ಟೀಕಿಸುವ ಮೂಲಕ ಮೊದಲ ಎಚ್ಚರಿಕೆಯ ಸಂದೇಶ ರವಾನಿಸುವುದು ಜೆಡಿಯು ಉದ್ದೇವಾಗಿದೆ ಎನ್ನಲಾಗಿದೆ. ನಿನ್ನೆ(ಡಿ.27-ಭಾನುವಾರ) ನಡೆದ ಜೆಡಿಯು ಸಭೆಯಲ್ಲಿ ರಾಮಚಂದ್ರ ಪ್ರಸಾದ್ ಸಿಂಗ್ ಅವರನ್ನು ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅಂದರೆ ಪಕ್ಷದ ಜವಾಬ್ದಾರಿ ಸಿಂಗ್ ಅವರ ಹೆಗಲಿಗೂ ಹಾಗೂ ಸರ್ಕಾರದ ಜವಾಬ್ದಾರಿ ನಿತೀಶ್ ಕುಮಾರ್ ಅವರ ಹೆಗಲಿಗೂ ಹೊರಿಸಲಾಗಿದೆ. ಮಿಯತ್ರಪಕ್ಷ ಬಿಜೆಪಿ ನಡುವಳಿಕೆಯಿಂದ ಜೆಡಿಯುನಲ್ಲಿ ಆಕ್ರೋಶ ಕಂಡುಬರುತ್ತಿದ್ದು, ಇದೀಗ ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಬಿಜೆಪಿಯನ್ನು ಹದ್ದುಬಸ್ತಿನಲ್ಲಿಡುವುದು ಜೆಡಿಯು ಯೋಜನೆ ಎನ್ನಲಾಗಿದೆ.
from India & World News in Kannada | VK Polls https://ift.tt/34QXiFs