ರಾಮನಗರ: ಮಾಗಡಿ ತೆಂಗಿನ ಕಾಯಿಗೆ ನೆರೆ ರಾಜ್ಯಗಳಲ್ಲಿ ಭಾರೀ ಡಿಮ್ಯಾಂಡ್‌, ನಿತ್ಯ ತಮಿಳುನಾಡಿಗೆ 30 ಕ್ವಿಂಟಲ್‌ ರಫ್ತು!

ಎಂ.ಎಸ್‌ ಅಭಿಷೇಕ್‌ ಕುದೂರು ರಾಮನಗರ: ರೇಷ್ಮನಗರಿ ರಾಮನಗರ ಜಿಲ್ಲೆಯ ನಾಟಿ ತೆಂಗಿನಕಾಯಿಗೆ ನೆರೆಯ ರಾಜ್ಯಗಳಾದ ಆಂಧ್ರ ತಮಿಳುನಾಡಿನಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಮಾಗಡಿ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಾಪನೆಗೊಂಡಿರುವ ತೆಂಗಿನಕಾಯಿ ಮಂಡಿಗಳಿಂದ ದಿನವೂ ಲೋಡುಗಟ್ಟಲೆ ತೆಂಗಿನ ಕಾಯಿ ಹೊರ ರಾಜ್ಯಗಳಿಗೆ ರವಾನೆಯಾಗುತ್ತಿದೆ. ಮಾಗಡಿ ಮುಂದು! ಜಿಲ್ಲೆಯಲ್ಲಿ ಹೆಚ್ಚು ತೆಂಗು ಉತ್ಪಾದನೆ ಮಾಡುವ ಪಟ್ಟಿಯಲ್ಲಿ ಮಾಗಡಿ ತಾಲೂಕಿನ ಗ್ರಾಮಾಂತರ ಪ್ರದೇಶವೂ ಮುಂಚೂಣಿಯಲ್ಲಿದೆ ತಾಲೂಕಿನಲ್ಲಿ ಎಪಿಎಂಸಿ ಮಾರುಟ್ಟೆಯಿಲ್ಲದೆ ಈ ಭಾಗದ ರೈತರು ತಾವು ಬೆಳೆದ ತೆಂಗಿನ ಕಾಯಿಯನ್ನು ಬೆಂಗಳೂರು, ಕುಣಿಗಲ್‌, ತುಮಕೂರಿಗೆ ಕೊಂಡುಹೋಗುವ ಅನಿವಾರ್ಯತೆ ಇತ್ತು. ಆದರೆ ಇಂದು ಕುದೂರು ಹೋಬಳಿಯ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿಯ ಮರೂರು ಹ್ಯಾಂಡ್‌ಪೋಸ್ಟ್‌ ನಲ್ಲಿ ಸ್ಥಾಪನೆಯಾಗಿರುವ ತೆಂಗಿನಕಾಯಿ ಮಂಡಿಗಳು ಗ್ರಾಮೀಣ ಭಾಗದ ರೈತರಿಗೆ ವರವಾಗಿ ಪರಿಣಮಿಸಿವೆ. ಕಲ್ಪತರು ನಾಡಿನಿಂದಲೂ ಆಗಮನ! ಮರೂರು ತೆಂಗಿನಕಾಯಿ ಮಂಡಿಗೆ ಕೇವಲ ಮಾಗಡಿ ತಾಲೂಕಿನ ಗ್ರಾಮಂತರ ಭಾಗಗಳಿಂದಲ್ಲದೇ ತೆಂಗಿನ ಕಾಯಿ ಬೆಳೆಗೆ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ಶಿರಾ, ಕುಣಿಗಲ್‌, ಚಿಕ್ಕನಾಯಕನಹಳ್ಳಿ ಮತ್ತು ದಾವಣಗೆರೆ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಯ ತೆಂಗು ಇಲ್ಲಿನ ಮಂಡಿಗೆ ಆಗಮಿಸುತ್ತಿದೆ. ಹಾಗೂ ಮಾಗಡಿ ತಾಲೂಕಿನ 150ಕ್ಕೂ ಹೆಚ್ಚು ಹಳ್ಳಿಗಳು ತಮ್ಮ ತೋಟವನ್ನು ನೊಂದಾಯಿಸಿಕೊಂಡು ಇಲ್ಲಿನ ಮಂಡಿಗೆ ತೆಂಗಿನ ಕಾಯಿಯನ್ನು ತಂದು ಹಾಕುತ್ತಿವೆ. ಆಂಧ್ರ ತಮಿಳುನಾಡಿಗೆ ರಫ್ತು! ಇಲ್ಲಿನ ನಾಟಿ ತೆಂಗಿನ ಕಾಯಿಗೆ ಆಂಧ್ರ, ತಮಿಳುನಾಡಿನಲ್ಲಿ ಬೇಡಿಕೆ ಹೆಚ್ಚಿದೆ. ಅಡುಗೆಗೆ ತೆಂಗಿನಕಾಯಿ ಪುಡಿ, ಎಣ್ಣೆ ಮಾಡಲು ಹೆಚ್ಚಿನದಾಗಿ ಮರೂರು ತೆಂಗಿನ ಕಾಯಿ ಮಂಡಿಯಿಂದ ಇಲ್ಲಿಂದ ತೆಂಗನ್ನು ಖರೀದಿಸಿ ಬೇರೆ ಬೇರೆ ರಾಜ್ಯಗಳಿಗೂ ರವಾನಿಸುತ್ತಿದ್ದಾರೆ. ಹಾಗೂ ನಿತ್ಯ 30 ಕ್ವಿಂಟಾಲ್‌ ತೆಂಗು ತಮಿಳುನಾಡಿನ ಕಾಂಗಾಯ್‌ ಪ್ರದೇಶಕ್ಕೆ ರಫ್ತಾಗುತ್ತಿದೆ. ಅಷ್ಟೇ ಅಲ್ಲದೇ ಈ ಮಂಡಿಯ ತೆಂಗಿನಕಾಯಿಗಳಿಗೆ ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿರುವ ಅಂಗಡಿಗಳಿಂದ, ಹೋಟಲ್‌ಗಳು, ಮದುವೆ, ನಾಮಕರಣ ನಡೆಯುವ ಕಲ್ಯಾಣಮಂಟಪಗಳಿಂದ ಹೆಚ್ಚಿನ ಬೇಡಿಕೆ ಇದೆ ಹಾಗೂ ರೈತರಿಂದ ಖರೀದಿಸುವ ತೆಂಗಿನ ಕಾಯಿಗೆಗಳಿಗೆ ನಮ್ಮಲ್ಲಿ ಕಮೀಷನ್‌ ತೆಗೆದುಕೊಳ್ಳದಿರುವುದು ಮತ್ತು ಹಣವನ್ನು ತಕ್ಷಣವೇ ರೈತರಿಗೆ ನೀಡುವುರಿಂದ ನಮ್ಮ ಮಂಡಿಗೆ ತಮಕೂರು ಹಾಗೂ ಇತರೆ ಜಿಲ್ಲೆಗಳಿಂದಲೂ ತೆಂಗಿನಕಾಯಿಗಳು ಬರಲಿವೆ ಎನ್ನುತ್ತಾರೆ ಮಂಡಿ ಮುಖ್ಯಸ್ಥರಾದ ಸತೀಶ್‌. ರುಚಿಯಿಂದ ಹೆಚ್ಚಿದ ಬೇಡಿಕೆ! ಆಂಧ್ರದ ತೆಂಗಿಕಾಯಿಗಳು ರುಚಿ ಕಡಿಮೆ. ಅಡುಗೆ ರುಚಿಗೆ ಕರುನಾಡಿನ ಕಾಯಿಯನ್ನು ಹೆಚ್ಚು ಬಳಸುತ್ತಾರೆ. ಈ ಭಾರಿ ತಮಿಳುನಾಡಿನಲ್ಲಿ ಇಳುವರಿ ತೀರ ಕಡಿಮೆ ಇರುವ ಕಾರಣ ದೇವಾಲಯಗಳಲ್ಲಿ ಪೂಜೆಗೆ ಹಾಗೂ ಅಡುಗೆಗೆ ಇಲ್ಲಿನ ಕಾಯಿಯನ್ನು ಬಳಸುವುದರಿಂದ ಈ ಭಾಗದ ಕಾಯಿಗೆ ಡಿಮ್ಯಾಂಡ್‌ ಹೆಚ್ಚಿದೆ. ಉದ್ಯೋಗ ಸೃಷ್ಟಿ ಕುದೂರು ಹೋಬಳಿ ಮರೂರಿನಲ್ಲಿಆರಂಭವಾಗಿರುವ ಮೂರ್ನಾಲ್ಕು ತೆಂಗಿನಕಾಯಿ ಮಂಡಿಗಳಿಂದ ಮೂರು ವರ್ಷಗಳಲ್ಲಿ ಇಲ್ಲಿನ ಸ್ಥಳೀಯ 50 ಜನಗಳಿಗೆ ಉದ್ಯೋಗ ದೊರೆತಿದೆ ಅಲ್ಲದೇ ಕೊರೊನಾದಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸ್ಥಳೀಯರಿಗೆ ನಿರುದ್ಯೋಗವನ್ನು ನಿವಾರಣೆ ಮಾಡಿವೆ. ಕೆಜಿ 50ರೂ. ದಾಟುವ ನಿರೀಕ್ಷೆ ಈ ಭಾರಿ ರೈತರಿಂದ ಕೆಜಿಗೆ 40 ರೂಗಳಂತೆ ತೆಂಗನ್ನು ಕೊಳ್ಳಲ್ಲಾಗುತ್ತಿದೆ. 42 ರೂ.ಗಳಿಗೆ ಗ್ರಾಹಕರಿಗೆ ಮಾಟಾಟ ಮಾಡುತ್ತಿದ್ದಾರೆ. ಸಿಪ್ಪೆ ಸುಲಿಯದ ತೆಂಗಿನಕಾಯಿ ಒಂದಕ್ಕೆ ಗಾತ್ರದ ಆದಾರದ ಮೇಲೆ 10 ರಿಂದ 20 ರೂ ನಿಗದಿ ಮಾಡಿದ್ದಾರೆ. ಮಧ್ಯವರ್ತಿಗಳ ಹಾವಳಿ ಇಲ್ಲದಿರುವುದರಿಂದ ರೈತರು ಈ ಮಂಡಿಯ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ತಿಂಗಳಾಂತ್ಯಕ್ಕೆ ಕೆಜಿಗೆ 50ರೂ. ದಾಟುವ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಮಂಡಿಯ ಮಾಲೀಕರು. ಮೂರು ವರ್ಷಗಳಿಂದ ಈ ಭಾಗದ ರೈತರಿಗೆ ಉತ್ತಮ ಸೇವೆ ನೀಡುತ್ತಿದ್ದೇವೆ. ಇಲ್ಲಿನ ತೆಂಗನ್ನು ಹೆಚ್ಚಾಗಿ ಆಂಧ್ರ ಮತ್ತು ತಮಿಳುನಾಡಿಗೆ ರಫ್ತು ಮಾಡುತ್ತಿದ್ದೇವೆ. ಸದ್ಯ ಕೆಜಿಗೆ 42 ರೂ. ಬೆಲೆಯಿದೆ ಮುಂದೆ ಕೆಜಿಗೆ 50ರೂ. ಗಡಿದಾಟುವ ನಿರೀಕ್ಷೆಯಲ್ಲಿದ್ದೇವೆ.-ಸತೀಶ್‌ ಮಂಡಿಮಾಲೀಕರು ಮರೂರುಹ್ಯಾಂಡ್‌ ಪೋಸ್ಟ್‌. ನಮ್ಮ ಭಾಗದಲ್ಲಿ ತೆಂಗಿನಕಾಯಿ ಮಂಡಿಗಳು ಇರುವುದರಿಂದ ಮಾರಾಟಕ್ಕಾಗಿ ದೂರದ ಊರಿಗೆ ಅಲೆಯುವುದು ತಪ್ಪಿದೆ. ಅಲ್ಲದೇ ಕಮೀಷನ್‌ ಏಜೆಂಟ್‌ಗಳ ಹಾವಳಿಯೂ ರೈತರಿಗೆ ಇಲ್ಲ.-ರಂಗನಾಥ್‌ ಕುದೂರು


from India & World News in Kannada | VK Polls https://ift.tt/3qka20s

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...