ಇಂದು ವೈಕುಂಠ ಏಕಾದಶಿ, ವಿಷ್ಣುವಿನ ದರ್ಶನ ಪಡೆದರೆ ಮೋಕ್ಷ ಪ್ರಾಪ್ತಿ!

ಬೆಂಗಳೂರು ಗ್ರಾಮಾಂತರ: ಪ್ರತಿ ಏಕಾದಶಿಗಳಿಗಿಂತಲೂ ವಿಶೇಷವಾದದ್ದು. ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದಂದು ಬರುವ ಏಕಾದಶಿ ಅತ್ಯಂತ ವಿಶೇಷವಾದದ್ದು. ಈ ದಿನದಂದು ವೈಕುಂಠ ಬಾಗಿಲು ತೆರೆದಿರುವ ದಿನ ಎಂಬ ಪ್ರತೀತಿ ಇರುವುದರಿಂದ ಅಂದು ವಿಷ್ಣು/ ವೆಂಕಟೇಶ್ವರ ದೇವಾಲಯ ದರ್ಶನ ಅತ್ಯಂತ ಮಹತ್ವ ಪಡೆದುಕೊಂಡಿದೆ. ಈ ದಿನ ದೇವಾಲಯಗಳಲ್ಲಿ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ತಾಲೂಕಿನ ನಂದಿಬೆಟ್ಟದ ತಪ್ಪಲಿನ ಹೆಗ್ಗಡಿಹಳ್ಳಿಯಲ್ಲಿನ ಶ್ರೀತಿರುಮಲ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಗೆ ಅನೇಕ ತಯಾರಿಗಳನ್ನು ಕೈಗೊಳ್ಳಲಾಗಿದೆ. ದೇವಾಲಯಕ್ಕೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ. 959ವರ್ಷ ಹಳೆಯ ಚೋಳರ ಕಾಲದ ದೇವಾಲಯದ ಸ್ಥಳ ಪುರಾಣವು ಅಮೋಘವಾದುದು ಉಮಲ್‌ ಶೆಟ್ರು ಎಂಬ ವ್ಯಕ್ತಿ ತನ್ನ ಹಣ ಒಡವೆಗಳೊಂದಿಗೆ ತಿರುಪತಿಗೆ ತೆರಳುವಾಗ ದಾರಿ ಮಧ್ಯದಲ್ಲಿ ಸಿಕ್ಕ ನಂದಿಬೆಟ್ಟದ ತಪ್ಪಲಿನ ಹೆಗ್ಗಡಿಹಳ್ಳಿಯಲ್ಲಿ ರಾತ್ರಿಗಳಲ್ಲಿ ಮಲಗಿದ್ದಾಗ ಕನಸಿನಲ್ಲಿ ದೇವರು ಪ್ರತ್ಯಕ್ಷವಾಗಿ ಇಲ್ಲಿ ಒಂದು ದೇವಾಲಯ ನಿರ್ಮಿಸುವಂತೆ ಹೇಳುತ್ತಾನೆ. ಇದ್ದರಿಂದಾಗಿ ಉಮಲ್‌ ಶೆಟ್ರು ಹೆಗ್ಗಡೆಹಳ್ಳಿ ದೇವಾಲಯವನ್ನು ನಿರ್ಮಿಸಿ ನಂತರ ಸಮೀಪದಲ್ಲಿಯೇ ಕಲ್ಯಾಣಿಯೊಂದನ್ನು ನಿರ್ಮಿಸುತ್ತಾರೆ. ಈ ಕಲ್ಯಾಣಿಯನ್ನು ಉಮಲ್‌ ಶೆಟ್ರು ಕಲ್ಯಾಣಿ ಎಂದು ಕೂಡಾ ಕರೆಯುತ್ತಾರೆ. ಕಲ್ಯಾಣಿ ಸಮೀಪದಲ್ಲಿರುವ ಬನ್ನಿ ಮರಕ್ಕೂ ವರ್ಷಕೊಮ್ಮೆ ದಸರಾ ಸಮಯದಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ. ವೈಕುಂಠ ಏಕಾದಶಿ ವಿಶೇಷವೇನು? ತಾಲೂಕಿನ ಹೆಗ್ಗಡೆಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ತಿರುಮಲ ವೆಂಕಟರಮಣ ಸ್ವಾಮಿದೇವಾಲಯ ಅದ್ಬುತವಾಗಿ ಪುನಶ್ಚೇತನಗೊಂಡಿದ್ದು ಇದೀಗ ವೈಕುಂಠ ಏಕಾದಶಿಗೆ ಸಿದ್ಧವಾಗಿದೆ. ಬೆಳಗ್ಗೆ 6ರಿಂದ ಮಹಾಗಣಪತಿ ಪೂಜೆಯೊಂದಿಗೆ ಆರಂಭವಾಗುವ ಪೂಜಾಕೈಂಕರ್ಯಗಳು ನಂತರ ಪಂಚಾಮೃತಾಭಿಷೇಕ ಹಾಗೂ ವೈಕುಂಠ ದರ್ಶನ ಹಾಗೂ ಶ್ರೀದೇವಿ ಭೂದೇವಿ ಸಮೇತನಾದ ತಿರುಮಲ ವೆಂಕಟರಮಣ ಸ್ವಾಮಿ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗುತ್ತದೆ. ಬೆಳಗ್ಗೆಯಿಂದಲೇ ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರಸಾದ‌ ವಿನಿಯೋಗವಿರಲಿದ್ದು ರಾತ್ರಿ 8 .30ಕ್ಕೆ ಮಹಾಮಂಗಳಾರತಿ ಹಾಗೂ ಅದ್ಧೂರಿಯಾಗಿ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಸಂಭ್ರಮ ಕಾಣಬಹುದಾಗಿದೆ. ದೇವಸ್ಥಾನ ಈ ಬಾರಿ ಪುನಶ್ಚೇತನಗೊಂಡಿದ್ದು ವೈಕುಂಠ ಏಕಾದಶಿಯನ್ನು ಸರಳ ಸುಂದರವಾಗಿ ಆಚರಿಸಲಾಗುತ್ತದೆ. ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು ಮಾಸ್ಕ್‌ ಹಾಗೂ ಸಾಮಾಜಿಕ ಅಂತರದ ಬಗ್ಗೆ ಆದಷ್ಟು ನಿಗಾ ವಹಿಸಬೇಕು. ಸುರೇಶ್‌ ಶಾಸ್ತಿ, ಅರ್ಚಕ


from India & World News in Kannada | VK Polls https://ift.tt/2WLGECs

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...