ಎಲೆಕ್ಷನ್‌ಗೆ ಮದ್ಯದೋಕುಳಿ ಕಲೆಕ್ಷನ್‌: ಬೆಂ.ಗ್ರಾ.ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಕೇಸ್ ದಾಖಲು!

ನಾಗರಾಜು ಅಶ್ವತ್‌, ಬೆಂಗಳೂರು ಗ್ರಾಮಾಂತರ: ಪಂಚಾಯ್ತಿ ಚುನಾವಣೆಯ ಮೊದಲ ಹಂತ ಮುಕ್ತಾಯ ಕಂಡಿದ್ದು, 2ನೇ ಹಂತದ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿದೆ. ಈ ಮಧ್ಯೆ ಮೊದಲ ಹಂತದ ಚುನಾವಣೆಯಲ್ಲಿ ಅಬಕಾರಿ ಇಲಾಖೆಯಿಂದ ಅಬ್ಬರದ ಭೇಟೆಯಾಗಿದ್ದು, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 400ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮದ್ಯೋಪಚಾರ ಘೋರ ಪ್ರಕರಣಗಳು 24, ಅನಧಿಕೃತ ಮದ್ಯಸೇವನೆ 96, ಸನ್ನದುಗಳಲ್ಲಿ ಷರತ್ತು ಉಲ್ಲಂಘನೆ 14 ಪ್ರಕರಣ ಸೇರಿದಂತೆ 134ಪ್ರಕರಣಗಳನ್ನು ದಾಖಲಿಸಲಾಗಿದೆ. ಅಬಕಾರಿ ದಾಳಿಗಳಲ್ಲಿ 1,15,000ರೂ. ಮೌಲ್ಯದ 322.245ಲೀ. ಮದ್ಯ, 89.500ಲೀ. ಬಿಯರ್‌, 16.500ಲೀ. ವೈನ್‌(ಹೋಮ್‌ಮೇಡ್‌), 1.320ಲೀ. ರಕ್ಷಣಾ ಇಲಾಖೆ ಉಪಯೋಗದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಅಕ್ರಮ ಮದ್ಯಸಾಗಾಟದ ಆರೋಪದ ಮೇಲೆ 4ಲಕ್ಷ ಮೌಲ್ಯದ 16ದ್ವಿಚಕ್ರ ವಾಹನಗಳನ್ನು, 109ಮಂದಿಯನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಅಬಕಾರಿ ಇಲಾಖೆ ತಿಳಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ 6 ತಾಲೂಕುಗಳಲ್ಲಿ 19 ಘೋರ ಪ್ರಕರಣಗಳು, 105 ಅನಧಿಕೃತ ಮದ್ಯಸೇವನೆ, ಸನ್ನದುಗಳ ಷರತ್ತು ಉಲ್ಲಂಘನೆ 8 ಸೇರಿದಂತೆ ಒಟ್ಟು 132 ಅಬಕಾರಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ದಾಳಿಯಲ್ಲಿ ಒಟ್ಟು 1,62,362ರೂ. ಮೌಲ್ಯದ 400ಲೀ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, ಅಕ್ರಮ ಮದ್ಯ ಸಾಗಾಟದ ಆರೋಪದ ಮೇಲೆ 4,06,000 ಮೌಲ್ಯದ 15 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ. ಪ್ರಮುಖಾಂಶಗಳು ಬೆಂಗಳೂರು ಗ್ರಾಮಾಂತರ
  • 134ಪ್ರಕರಣಗಳು
  • 1.15ಲಕ್ಷ ಮೌಲ್ಯದ ಮದ್ಯ ವಶ
  • 16ದ್ವಿಚಕ್ರ ವಾಹನ ವಶ
ಚಿಕ್ಕಬಳ್ಳಾಪುರ
  • 132 ಪ್ರಕರಣ
  • 1.62ಲಕ್ಷ ಮೌಲ್ಯದ ಮದ್ಯ ವಶ
  • 15 ಬೈಕ್‌ ವಶ
ಮತದಾರರ ಓಲೈಕೆ ಎರಡೂ ಜಿಲ್ಲೆಗಳಲ್ಲಿನ ಗ್ರಾಮಾಂತರ ಪ್ರದೇಶಗಳಲ್ಲಿ ಮತದಾರರ ಓಲೈಕೆ ರಾಜಕೀಯ ಮೇರೆ ಮೀರಿದ್ದು, ಸಂಜೆಯಾಗುತ್ತದೆ ತೋಟದ ಮನೆಗಳಲ್ಲಿ ಪಾರ್ಟಿಗಳು ಆಯೋಜನೆಯಾಗುತ್ತಿವೆ. ಪಂಚಾಯ್ತಿ ಅಭ್ಯರ್ಥಿಗಳು ಹೇಗಾದರು ಮಾಡಿ, ಚುನಾವಣೆಯಲ್ಲಿ ಗೆಲ್ಲಲೇಬೇಕೆನ್ನುವ ಗುರಿಯನ್ನು ಹೊಂದಿದ್ದು, ಮತದಾರರು ಕೇಳಿದಷ್ಟು ಮದ್ಯದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ದಿನಪೂರ್ತಿ ಚುನಾವಣಾ ಪ್ರಚಾರಗಳಲ್ಲಿ ತೊಡಗುವ ಮುಖಂಡರು ಸಂಜೆಯಾಗುತ್ತಲೆ, ಹಳ್ಳಿತೋಟಗಳಲ್ಲಿ ಠಿಕಾಣಿ ಹೂಡುತ್ತಿದ್ದಾರೆ. ಮುಖಂಡರ ದುಡ್ಡಲ್ಲಿ ಕುಡಿದು, ಕುಪ್ಪಳಿಸುತ್ತಿರುವ ಜನರು ಚುನಾವಣೆಯ ಬಿಸಿಯನ್ನು ಭರ್ಜರಿಯಾಗಿ ಆಚರಿಸುತ್ತಿದ್ದಾರೆ. ನಗರ ಪ್ರದೇಶದ ಬಾರ್‌ಗಳಲ್ಲಿ ಅಕ್ರಮವಾಗಿ ಮದ್ಯ ಖರೀದಿ ಮಾಡಿ, ಸಂಗ್ರಹ ಮಾಡಿಟ್ಟುಕೊಳ್ಳುತ್ತಿದ್ದು, ಹಳ್ಳಿಜನರ ಮದ್ಯದಾಹವನ್ನು ತೀರಿಸಲಾಗುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ತಾಲೂಕುಗಳಾದ ಬಾಗೇಪಲ್ಲಿ, ಗೌರಿಬಿದನೂರು ಪ್ರದೇಶದಲ್ಲಿ ಆಂದ್ರದಿಂದ ಮಧ್ಯವನ್ನು ತರಿಸಲಾಗುತ್ತಿದ್ದು, ಮತದಾರರು ಕೇಳಿದ ಬ್ರಾಂಡ್‌ಗಳನ್ನು ಒದಗಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಚುನಾವಣೆಯ ಹಿನ್ನೆಲೆ ನೀತಿ ಸಂಹಿತೆ ನಿಯಮಗಳಿಗನುಸಾರವಾಗಿ ದಾಳಿಗಳನ್ನು ನಡೆಸುತ್ತಿದ್ದು, ಅಕ್ರಮಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ನಿಯಮಾವಳಿಗಳನ್ನು ಮೀರಿದವರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ನರೇಂದ್ರ ,ಉಪ ಆಯುಕ್ತ, ಅಬಕಾರಿ ಇಲಾಖೆ, ಚಿಕ್ಕಬಳ್ಳಾಪುರ


from India & World News in Kannada | VK Polls https://ift.tt/3rCsv98

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...