ಕ್ಯಾಪ್ಟನ್ ರಹಾನೆ ಫಿಫ್ಟಿ, ಇನಿಂಗ್ಸ್‌ ಮುನ್ನಡೆಯತ್ತ ಟೀಮ್ ಇಂಡಿಯಾ!

ಮೆಲ್ಬೋರ್ನ್: ಭಾರತದ ಪಾಲಿಗೆ ಅದೃಷ್ಟದ ಅಂಗಣವಾಗಿರುವ ಮೆಲ್ಬೋರ್ನ್ ಕ್ರಿಕೆಟ್‌ ಗ್ರೌಂಡ್‌ ಕ್ರೀಡಾಂಗಣದಲ್ಲಿ ಆತಿಥೇಯ ಎದುರು ಇನಿಂಗ್ಸ್‌ ಮುನ್ನಡೆಯನ್ನು ಎದುರು ನೋಡುತ್ತಿರುವ ಪರ ನಾಯಕ ಮನಮೋಹಕ ಅರ್ಧಶತಕ ಬಾರಿಸಿದ್ದಾರೆ. ಪಂದ್ಯದ ಮೊದಲ ದಿನದಾಟದಲ್ಲಿ ಆತಿಥೇಯರನ್ನು 195 ರನ್‌ಗಳಿಗೆ ಆಲ್‌ಔಟ್‌ ಮಾಡಿ ಬಳಿಕ ಮೊದಲ ಇನಿಂಗ್ಸ್‌ನಲ್ಲಿ ಒಂದು ವಿಕೆಟ್‌ಗೆ 36 ರನ್‌ ಗಳಿಸುವ ಮೂಲಕ ಉತ್ತಮ ಆರಂಭ ಪಡೆದಿದ್ದ ಟೀಮ್ ಇಂಡಿಯಾ, ಎರಡನೇ ದಿನದಾಟದ ಆರಂಭದಲ್ಲೇ ಸ್ಟಾರ್‌ ಬ್ಯಾಟ್ಸ್‌ಮನ್‌ ಚೇತೇಶ್ವರ್ ಪೂಜಾರ (17) ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇನ್ನು ಪದಾರ್ಪಣೆಯ ಪಂದ್ಯದಲ್ಲೇ ಆಸೀಸ್‌ ಬೌಲರ್‌ಗಳ ಎದುರು ದಿಟ್ಟವಾಗಿ ಬ್ಯಾಟ್‌ ಬೀಸಿ ಗಮನ ಸೆಳೆದಿದ್ದ ಯುವ ಓಪನರ್‌ ಶುಭಮನ್ ಗಿಲ್ ಚೊಚ್ಚಲ ಅರ್ಧಶತಕ ಬಾರಿಸುವ ಅವಕಾಶ ಕೈಚೆಲ್ಲಿದರು. 65 ಎಸೆತಗಳನ್ನು ಎದುರಿಸಿದ ಗಿಲ್‌ 8 ಫೋರ್‌ಗಳನ್ನು ಒಳಗೊಂಡ 45 ರನ್‌ ಗಳಿಸಿ ಪ್ಯಾಟ್‌ ಕಮಿನ್ಸ್‌ ಬೌಲಿಂಗ್‌ನಲ್ಲಿ ಔಟಾದರು. ಕಮಿನ್ಸ್‌ ಇದಕ್ಕೂ ಮುನ್ನ ಪೂಜಾರ ವಿಕೆಟ್‌ ಪಡೆದಿದ್ದರು. ಭಾರತ vs ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್‌ ಪಂದ್ಯದ ನಾಯಕನ ಆಟವಾಡಿದ ಅಜಿಂಕ್ಯವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವ ಜವಾಬ್ದಾರಿ ಹೊತ್ತಿರುವ ಅಜಿಂಕ್ಯ ರಹಾನೆ, ತಮ್ಮ ಅನುಭವವನ್ನೆಲ್ಲಾ ಧಾರೆಯೆರೆದು ಆಸರೆಯಾಗಿ ನಿಂತರು. ಎರಡನೇ ದಿನದಾಟದ ಆರಂಭದಲ್ಲೇ ಇಬ್ಬರು ಸ್ಟಾರ್‌ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದ ತಂಡಕ್ಕೆ ಆಸರೆಯಾಗಿ ನಿಂತ ರಹಾನೆ ನಿಧಾನವಾಗಿ ರನ್‌ ಹೆಕ್ಕಿದರು. ಅಲ್ಲದೆ 4ನೇ ವಿಕೆಟ್‌ಗೆ ಹನುಮ ವಿಹಾರಿ (21) ಮತ್ತು (29) ಜೊತೆಗೆ ಅರ್ಧಶತಕ ಜೊತೆಯಾಟಗಳನ್ನು ಕಟ್ಟಿದರು. ತಾವು ಎದುರಿಸಿದ 111ನೇ ಎಸೆತದಲ್ಲಿ ಫೈನ್‌ ಲೆಗ್‌ ಕಡೆಗೆ ಬೌಂಡರಿ ಬಾರಿಸಿದ ರಹಾನೆ ತಮ್ಮ ಟೆಸ್ಟ್‌ ಕ್ರಿಕೆಟ್‌ ವೃತ್ತಿ ಬದುಕಿನ 23ನೇ ಅರ್ಧಶತಕ ಬಾರಿಸಿದರು. ಈ ಸಲುವಾಗಿ ಅವರು ಒಟ್ಟು 4 ಫೋರ್‌ಗಳನ್ನು ಬಾರಿಸಿದ್ದರು. ಇದಕ್ಕೂ ಮುನ್ನ ಉತ್ತಮವಾಗಿ ಬ್ಯಾಟ್‌ ಮಾಡುತ್ತಿದ್ದ ಹನುಮ ವಿಹಾರಿ ಅವರನ್ನು ಆಫ್‌ ಸ್ಪಿನ್ನರ್‌ ನೇಥನ್ ಲಯಾನ್‌ ತಮ್ಮ ಸ್ಪಿನ್‌ ಬಲೆಯಲ್ಲಿ ಸೆರೆ ಹಿಡಿದರೆ, ಎಡಗೈ ವೇಗಿ ಮಿಚೆಲ್‌ ಸ್ಟಾರ್ಕ್‌ ಅವರ ಎಸೆತದಲ್ಲಿ ಹೊಡ್ಡ ಹೊಡೆತಕ್ಕೆ ಕೈಹಾಕಿದ ರಿಷಭ್ ಪಂತ್‌ ಕೀಪರ್‌ ಟಿಮ್ ಪೇಯ್ನ್‌ಗೆ ಕ್ಯಾಚ್‌ ಒಪ್ಪಿಸಿದರು. ಅಡಿಲೇಡ್‌ ಆಘಾತ ಮರೆತಂತೆ ಆಡಿದ ಭಾರತಅಡಿಲೇಡ್‌ ಓವಲ್‌ನಲ್ಲಿ ಸರಣಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್‌ ಮುನ್ನಡೆ ಪಡೆದರೂ 2ನೇ ಇನಿಂಗ್ಸ್‌ನಲ್ಲಿ 36 ರನ್‌ಗಳಿಗೆ ಕುಸಿಯುವ ಮೂಲಕ 8 ವಿಕೆಟ್‌ಗಳ ಹೀನಾಯ ಸೋಲಿಗೆ ತುತ್ತಾಗಿತ್ತು. ಆದರೆ, ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಈ ಹಿಂದಿನ ಆಘಾತವನ್ನು ಮರೆತು ಆತ್ಮವಿಶ್ವಾಸ ಆಟವನ್ನಾಡಿತು. ಟಾಸ್‌ ಸೋತು ಬೌಲಿಂಗ್ ಮಾಡುವಂತಾದರೂ ಬಲಿಷ್ಠ ಬ್ಯಾಟಿಂಗ್ ವಿಭಾಗ ಹೊಂದಿರುವ ಕಾಂಗರೂ ಪಡೆಯನ್ನು 195ಕ್ಕೆ ಆಲ್‌ಔಟ್‌ ಮಾಡಿ ಇದೀಗ ಬ್ಯಾಟಿಂಗ್‌ನಲ್ಲಿ ಭರ್ಜರಿ ಆಟದೊಂದಿಗೆ ಇನಿಂಗ್ಸ್‌ ಮುನ್ನಡೆಯನ್ನು ಎದುರು ನೋಡುತ್ತಿದೆ. ಮಳೆ ಕಾರಣ ಅವಧಿಗು ಮೊದಲೇ ತೆಗೆದುಕೊಂಡ ಚಹ ವಿರಾಮದ ಹೊತ್ತಿಗೆ ಟೀಮ್ ಇಂಡಿಯಾ 5 ವಿಕೆಟ್‌ ನಷ್ಟದಲ್ಲಿ 185 ರನ್‌ಗಳನ್ನು ಗಳಿಸಿತ್ತು. ಈ ಮೂಲಕ ಇನಿಂಗ್ಸ್‌ ಮುನ್ನಡೆ ಪಡೆಯಲು ಇನ್ನು 10 ರನ್‌ ಮಾತ್ರವೇ ಗಳಿಸುವ ಅಗತ್ಯವಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2JqJKJg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...