ವಿಜಯಪುರ: ಬಾಡಿಗೆ ನೀಡದೆ ಅಂಗವಿಕಲ ರೈತನಿಗೆ ಏರ್‌ಸೆಲ್‌ ವಂಚನೆ

ವಿಜಯಪುರ: ಕೇಂದ್ರ ಸರಕಾರದ ಕೃಷಿ ಕಾಯಿದೆ ಜಾರಿಗೆ ಬರುವ ಮೊದಲೇ ಬಂಡವಾಳಶಾಹಿ ಕಂಪನಿಯೊಂದಿಗಿನ ಒಪ್ಪಂದದಿಂದ ಹೊರಬರಲಾರದೆ ತನ್ನ ಜಮೀನಿನಲ್ಲಿ ಏನು ಬೆಳೆಯದೆ ಅಂಗವಿಕಲ ರೈತನೊಬ್ಬ ನಲುಗುತ್ತಿದ್ದಾನೆ. ಪಟ್ಟಣ ಸಮೀಪದ ಹೋಬಳಿಯ ವೆಂಕಟಗಿರಿಕೋಟೆ ಬಳಿಯ ಹೊಸಹುಡ್ಯದ ನಾಗರಾಜು ಸರ್ವೇ ನಂಬರ್‌ 22/3ರ ತನ್ನ ಜಮೀನಿನಲ್ಲಿ 2008 ರಲ್ಲಿ'ಏರ್‌ಸೆಲ್‌' ಕಂಪನಿಗೆ ತಿಂಗಳಿಗೆ 5,000 ರೂ. ಆಧಾರದಲ್ಲಿ 15 ವರ್ಷಕ್ಕೆ ತನ್ನ 37 ಕುಂಟೆ ಕೃಷಿ ಭೂಮಿ ಗುತ್ತಿಗೆ ನೀಡಿದ್ದ. ಆದರೆ ಏರ್‌ಸೆಲ್‌ ಕಂಪನಿ ನಷ್ಟ ಅನುಭವಿಸಿ, ಕಾರ್ಯಾಚರಣೆಯಲ್ಲಿಲ್ಲದ ಕಾರಣ ಇದೀಗ ಕಳೆದ 3 ವರ್ಷಗಳಿಂದ ಬಾಡಿಗೆಯೂ ದೊರೆಯುತ್ತಿಲ್ಲ. ಏನಾದರೂ ಬೆಳೆ ಬೆಳೆಯಲು ಟವರ್‌ನ ಜನರೇಟರ್‌ ಮತ್ತಿತರೆ ಯಂತ್ರೋಪಕರಣಗಳನ್ನು ತೆರವು ಮಾಡಿಲ್ಲ. ಇದರ ಬಗ್ಗೆ ಟವರ್‌ ನಿರ್ಮಿಸಿದ ವ್ಯಕ್ತಿಗಳನ್ನು ಸಂಪರ್ಕಿಸಿ, ಕೇಳಿದರೆ ಎಲ್ಲವನ್ನೂ ತೆರವು ಮಾಡಿ, ಮಾರಾಟ ಮಾಡುವಂತೆ ಹೇಳುತ್ತಾರೆ. ಅಂಗವಿಕಲ ವ್ಯಕ್ತಿ ನಾಗರಾಜು ಕಂಪನಿಯ ವಿರುದ್ಧ ಕಾನೂನು ಹೋರಾಟ ನಡೆಸಲಾಗದೆ, ಯಾರೋ ಹೇಳಿದರೆಂದು, ತನ್ನ ಜಮೀನಿನಲ್ಲಿರುವ ಏರ್‌ಸೆಲ್‌ ಕಂಪನಿಯ ಬೆಲೆ ಬಾಳುವ ಪರಿಕರಗಳನ್ನು ಮಾರಲೂ ಆಗದೆ, ಮತ್ತೊಂದೆಡೆ ಬಾಡಿಗೆಯೂ ಇಲ್ಲದೆ, ಪರಿತಪಿಸುತ್ತಿದ್ದಾನೆ. ಜಮೀನಿನಲ್ಲಿರುವ ಏರ್‌ಸೆಲ್‌ ಕಂಪನಿಯ ಟವರ್‌ ಹಾಗೂ ಜನರೇಟರ್‌ ರೂಂಗಳಲ್ಲಿ ಬೆಲೆ ಬಾಳುವ ಪರಿಕರಗಳು ತುಕ್ಕು ಹಿಡಿದು, ಹಾಳಾಗುತ್ತಿರುವುದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಾಗದಂತಾಗಿದೆ. ವ್ಯವಸಾಯ ಮಾಡಲು ಕೈಲಾಗದೆ ನಾಗರಾಜು ಬಾಡಿಗೆ ಆಸೆಯಿಂದ ತನ್ನ ಜಮೀನನ್ನು ಬಾಡಿಗೆಗೆ ಕೊಟ್ಟು, ಸಮಸ್ಯೆಗಳ ಸರಮಾಲೆ ಎದುರಿಸುತ್ತಿದ್ದಾನೆ.


from India & World News in Kannada | VK Polls https://ift.tt/34FzJ29

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...