ನಾನು ವಾಜಪೇಯಿ ಕಾಲದಲ್ಲಿ ಕೇಂದ್ರ ಸಚಿವನಾಗಿದ್ದೆ, ಡಿವಿಎಸ್‌ ಈಗ ಮಂತ್ರಿಯಾಗಿದ್ದಾರೆ: ಯತ್ನಾಳ್‌ ತಿರುಗೇಟು

ವಿಜಯಪುರ: ಯತ್ನಾಳ್ ಒಬ್ಬ ಆರ್ಡಿನರಿ ಶಾಸಕ ಎಂದು ಹೇಳಿದ್ದ ಕೇಂದ್ರ ಸಚಿವ ಡಿವಿ ಸದಾನಂದ ಗೌಡಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಸದಾನಂದ ಗೌಡ ರಾಜ್ಯಾಧ್ಯಕ್ಷರಾಗಿದ್ದ ವೇಳೆ ನನ್ನನ್ನ 6 ವರ್ಷ ಪಕ್ಷದಿಂದ ಅಮಾನತು ಮಾಡಿದ್ದರು. ಅವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿಯಿದೆ. ಆದರೆ, ‌ನಾನು ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ವೇಳೆ ಕೇಂದ್ರ ಸಚಿವನಾಗಿದ್ದೆ. ಈಗ ಸದಾನಂದಗೌಡರು ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಹಾಗಾಗಿ, ಯಾರು ಸೀನಿಯರ್ ಎಂದು ನೀವೇ ತಿಳಿದುಕೊಳ್ಳಿ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರು. ಯತ್ನಾಳ್ ಒಬ್ಬ ಆರ್ಡಿನರಿ ಶಾಸಕ ಎಂದು ಹೇಳಿದ್ದ ಡಿವಿ ಸದಾನಂದ ಗೌಡರು ಹೇಳಿದ್ದು ನೂರಕ್ಕೆ ನೂರು ಸತ್ಯವಾಗಿದೆ. ಅವರು ಒಳ್ಳೇ ಸಲಹೆ ಕೊಟ್ಟಿದ್ದಾರೆ. ನಮ್ಮ ಪ್ರಧಾನಿ ಮೋದಿ ಅವರೇ ತಾವು ಪ್ರಧಾನಿಯಲ್ಲ ಸಾಮಾನ್ಯ ಸೇವಕನೆಂದು‌ ಹೇಳಿದ್ದಾರೆ. ಹಾಗಿದ್ದಾಗ, ನಾನೂ ಸಾಮಾನ್ಯ ಕಾರ್ಯಕರ್ತನೇ ಎಂದು ಹೇಳಿದರು. ಇನ್ನು ನಾನು ರಾಷ್ಟ್ರೀಯ ನಾಯಕನೆಂದು ‌ಎಲ್ಲಿಯೂ ಹೇಳಿಲ್ಲ ಎಂದ ಯತ್ನಾಳ್, ನಾನು ಓರ್ವ ಸಾಮಾನ್ಯ ಶಾಸಕ. ಆದರೆ, ನಾನು ವಾಜಪೇಯಿ ಅವಧಿಯಲ್ಲಿ ಕೇಂದ್ರ ಸಚಿವನಾಗಿದ್ದೆ. ಡಿ.ವಿ.ಸದಾನಂದಗೌಡರು ಈಗ ಸಚಿವರಾಗಿದ್ದಾರೆ ಎಂದರು. ಇನ್ನ ಸದಾನಂದಗೌಡರು ಇಷ್ಟೊಂದು ಜ್ಞಾನ ಕೊಟ್ಟಿದ್ದಕ್ಕೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ‌ನಾನು ಸ್ಚಯಂ ಘೋಷಿತ ರಾಷ್ಟೀಯ, ರಾಜ್ಯ, ಜಿಲ್ಲಾ ನಾಯಕ ಅಲ್ಲ. ಜನರಿಂದ ಜನರಿಗಾಗಿ ಆಯ್ಕೆಯಾಗಿದ್ದೇನೆ. ಸದಾನಂದಗೌಡ ಸಿಎಂ ಆಗಿ ಕೆಲಸ ಮಾಡಿದ್ದಾರೆ. ಕೇಂದ್ರ ರೇಲ್ವೆ ಖಾತೆ ಸಚಿವರಾಗಿ ಯಶಸ್ವಿಯಾಗಿ ಈಗ ರಸಗೊಬ್ಬರ ಖಾತೆ ಸಚಿವರಾಗಿದ್ದಾರೆ. ಅವರು ನಾವು ಒಂದೇ ಕಾಲಘಟ್ಟದವರು. ನಾವು ಒಂದೇ ಕಾಲದಲ್ಲಿ ಶಾಸಕರಾಗಿ ಆಯ್ಕೆಯಾದವರು. ಅವರು ನನಗಿಂತ ಹಿರಿಯರಲ್ಲ ಎಂದು ಯತ್ನಾಳ್ ಹೇಳಿದರು.


from India & World News in Kannada | VK Polls https://ift.tt/2M9yd1W

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...