ಬೆಂಗಳೂರು ಸುತ್ತಮುತ್ತ ಯಾವ ಬೆಳೆ ಬೆಳೆದರೆ ಉತ್ತಮ? ಇಲ್ಲಿದೆ ಲಾಭ ನೀಡುವ ಸಣ್ಣ ಕೃಷಿಯ ಮಾಹಿತಿ!

ಬೆಂಗಳೂರು: ಮತ್ತು ಸುತ್ತಮುತ್ತ ಭೂಮಿ ಬೆಲೆ ಗಗನಕ್ಕೇರಿದೆ. ಹೀಗಾಗಿ ಇಲ್ಲಿನ ಜಾಗವನ್ನು ಖಾಲಿ ಬಿಡದೆ ಹೆಚ್ಚು ಮೌಲ್ಯದ ಪೋಷಕಾಂಶಗಳುಳ್ಳ ಆಯ್ದ ಬೆಳೆಗಳನ್ನು ಬೆಳೆಯಬಹುದು. ಪಾಲಕ್‌ ಸೊಪ್ಪು, ನುಗ್ಗೆ, ಐಐಎಚ್‌ಆರ್‌ನ ಸುಧಾರಿತ(ಮಲ್ಟಿ ಕಟ್‌) ಬಹು ಕಟಾವಿನ ಕೊತ್ತಂಬರಿ ಸೊಪ್ಪು, ಚೆಂಡು ಹೂವುಗಳನ್ನು ಸುಲಭವಾಗಿ ಬೆಳೆಯಬಹುದು. ಜತೆಗೆ ಜರ್ಬೆರಾ, ಕ್ಯಾಪ್ಸಿಕಂ, ಮಿಡಿಸೌತೆ ಇತ್ಯಾದಿಗಳನ್ನು ಸಂರಕ್ಷಿತ ಬೇಸಾಯ ಪದ್ಧತಿ(ಪಾಲಿಹೌಸ್‌)ಯಡಿ ಬೆಳೆಯಬಹುದು. ಜತೆಗೆ ಬೆಟ್ಟದ ನೆಲ್ಲಿಗೆ ತುಂಬಾ ಬೇಡಿಕೆಯಿದ್ದು, ಬೆಳೆಗಾರರಿಗೆ ಹೆಚ್ಚು ಅವಕಾಶಗಳಿವೆ. ಸಣ್ಣ ಪ್ರಮಾಣದಲ್ಲಿ ಬೆಳೆದು, ಒಳ್ಳೆಯ ಲಾಭವನ್ನು ಕಾಣಬಹುದು. ಬೆಂಗಳೂರಿನಲ್ಲಿ ಮಾರುಕಟ್ಟೆ ವ್ಯವಸ್ಥೆಯಿರುವುದರಿಂದ ಪಪ್ಪಾಯ ಮತ್ತು ಸೀಬೆ ಬೆಳೆಗಳನ್ನು ಕೂಡ ಸುಲಭವಾಗಿ ಬೆಳೆಯಬಹುದು. ಐಐಎಚ್‌ಆರ್‌ ಆವಿಷ್ಕರಿಸಿರುವ ಕಡಿಮೆ ಖರ್ಚಿನ ಸಾವಯವ ಉತ್ಪನ್ನ (ಅರ್ಕಾ ಜೀವಾಣು ಗೊಬ್ಬರ, ತ್ಯಾಜ್ಯಗಳನ್ನು ಕೊಳೆಸುವ ಅರ್ಕಾ ಡಿ ಕಾಂಪೋಸ್ಟರ್‌)ಗಳನ್ನು ಬಳಸಿಕೊಂಡು ಬೆಳೆ ಬೆಳೆದರೆ, ಭೂಮಿಯೂ ಫಲವತ್ತಾಗಿರುತ್ತದೆ. ಗ್ರಾಹಕರಿಗೂ ಗುಣಮಟ್ಟದ ಹಾಗೂ ರಾಸಾಯನಿಕ ಮುಕ್ತ ತಾಜಾ ಹಣ್ಣು, ತರಕಾರಿ ಮತ್ತು ಸೊಪ್ಪುಗಳನ್ನು ನೀಡಬಹುದು. ಇದರಿಂದ ಬೆಂಗಳೂರಿನ ಪರಿಸರಕ್ಕೂ ಉತ್ತಮ ಕೊಡುಗೆ ನೀಡಿದಂತಾಗುತ್ತದೆ. ಸೀಬೆ, ಬದನೆ, ಬೆಂಡೆ, ಮೆಣಸಿನಕಾಯಿಗಳನ್ನು ಪುನಃಶ್ಚೇತನಗೊಳಿಸಿ(ಟ್ರಿಮ್‌) ಬೆಳೆಯುವ ಸಾಧ್ಯತೆಗಳೂ ಇರುವುದರಿಂದ ರೈತರು ಹೆಚ್ಚು ಲಾಭನ್ನು ಹೊಂದಬಹುದು. ಮತ್ತೊಂದು ಸಂಗತಿಯಿಂದರೆ ಏಕ ಬೆಳೆಗೆ ಜೋತು ಬೀಳದೆ ಋುತುಮಾನ ಆಧಾರಿತವಾಗಿ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಬೇಕು. ಪಾಲಿಹೌಸ್‌ ಮತ್ತು ತೆರೆದ ಪ್ರದೇಶ ಎರಡರಲ್ಲೂಉತ್ತಮ ಇಳುವರಿಯೊಂದಿಗೆ ಹೆಚ್ಚು ಲಾಭವನ್ನು ಕಾಣಬಹುದು. ಆನೇಕಲ್‌ನ ರೈತರು ಹೂವಿನ ಬೆಳೆಯಲ್ಲಿ ಸಾಕಷ್ಟು ಲಾಭ ಕಾಣುತ್ತಿದ್ದಾರೆ. - ಮಾಹಿತಿ : ಡಾ. ಬಿ.ನಾರಾಯಣಸ್ವಾಮಿ, ಪ್ರಧಾನ ವಿಜ್ಞಾನಿ, ಐಐಎಚ್‌ಆರ್‌, ಹೆಸರಘಟ್ಟ


from India & World News in Kannada | VK Polls https://ift.tt/37Jl3Ru

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...