ಜಿ.ಪುರುಷೊತ್ತಮ ನರಸಿಂಹರಾಜಪುರ ಚಿಕ್ಕಮಗಳೂರು: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಬಹುತೇಕ ಸರಕಾರಿ ಹಾಸ್ಟೆಲ್ಗಳು ಕಟ್ಟಡದಲ್ಲಿ ನಡೆಲಾಗುತ್ತಿದೆ. ಕಳೆದ 9 ತಿಂಗಳಿಂದ ಶಾಲಾ ಕಾಲೇಜುಗಳಿಲ್ಲವಾದರೂ ಸರಕಾರ ಇಂತಹ ಕಟ್ಟಡಗಳಿಗೆ ಅಧಿಕ ಮೊತ್ತದ ಬಾಡಿಗೆ ಪಾವತಿಸಬೇಕಾಗಿದೆ. ಎರಡು ಹಾಸ್ಟೆಲ್ ಕಾಮಗಾರಿ ನಡೆಯುತ್ತಿದ್ದು, ಶಾಲೆ ಆರಂಭದ ಒಳಗೆ ಆ ಎರಡೂ ಕಟ್ಟಡಗಳನ್ನು ಪೂರ್ಣಗೊಳಿಸಿದರೆ ಸರಕಾರದ ಹಣ ಉಳಿತಾಯವಾಗಿಲಿದೆ. ವಿಶೇಷವೆಂದರೆ ಪಟ್ಟಣದಲ್ಲಿ ಕೆಲವು ಸರಕಾರಿ ಕಟ್ಟಡಗಳು ಇದ್ದರೂ ಅವು ಪಾಳುಬಿದ್ದಿದೆ. ಸರಕಾರ ಮಾತ್ರ ಇವುಗಳತ್ತ ಗಮನ ಹರಿಸುತ್ತಿಲ್ಲ. ಸ್ವಂತ ಕಟ್ಟಡ ಇಟ್ಟುಕೊಂಡು ಅದನ್ನು ಪಾಳು ಬಿಟ್ಟು, ಬಾಡಿಗೆ ಕಟ್ಟಡದಲ್ಲಿ ನಡೆಸುವ ಅವಶ್ಯಕತೆ ಇರುವುದಿಲ್ಲ. ಪಟ್ಟಣದ ಜೈಲ್ ರಸ್ತೆಯ ಬಳಿ ರೇಷ್ಮೆ ಸಾಕಣೆ ಕಟ್ಟಡ ಮತ್ತು ವಿಶಾಲವಾದ ಜಾಗವಿದೆ. ಅದು ಪ್ರಯೋಜನಕ್ಕೆ ಬಾರದೆ ಪಾಳುಬಿದ್ದು ಹಲವಾರು ವರ್ಷಗಳು ಕಳೆಯುತ್ತಾ ಬಂದಿದೆ. ಇತ್ತ ತಾಲೂಕಿನ ಅಗ್ನಿ ಶಾಮಕ ದಳದ ಕಚೇರಿಗೆ ಸ್ವಂತ ಕಟ್ಟಡವಿಲ್ಲದೆ, ವಾಹನ ನಿಲ್ಲಿಸಲು ದೊಡ್ಡ ಜಾಗವಿಲ್ಲದಂತಾಗಿದೆ. ತುರ್ತಾಗಿ ವಾಹನ ತೆಗೆಯಲು ಕಷ್ಟವಾಗುತ್ತದೆ. ಹೀಗಿರುವಾಗ ಜೈಲ್ ಬಿಲ್ಡಿಂಗ್ ಬಳಿ ಇರುವ ರೇಷ್ಮೆ ಸಾಕಣೆ ಕಚೇರಿ ಕಟ್ಟಡ ನೀಡಿದರೆ ಅಗ್ನಿಶಾಮಕ ದಳಕ್ಕೆ ಬಹಳ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಗ್ನಿ ಶಾಮಕ ದಳದವರು ಇಲ್ಲಿ ಸ್ವಲ್ಪ ಸಮಯ ತಮ್ಮ ಕಚೇರಿಯ ಹೆಸರಿನ ನಾಮಫಲಕ ಹಾಕಿದ್ದರು. ಅದರೆ ಇತ್ತಿಚೆಗೆ ಅದನ್ನು ತೆರವುಗೊಳಿಸಲಾಗಿದೆ. ಪಟ್ಟಣದಲ್ಲಿ ಪಿಡಬ್ಲೂಡಿ ಇಲಾಖೆಗೆ ಸೇರಿದ ಮನೆಗಳಲ್ಲಿ ಯಾರೂ ವಾಸವಿಲ್ಲದೆ ಅವು ಭೂತ ಬಂಗಲೆಗಳಂತಾಗಿವೆ. ಈ ಕ್ವಾಟ್ರ್ಸ್ಗಳನ್ನು ದುರಸ್ತಿ ಮಾಡಿಸಿದರೆ, ಬಾಡಿಗೆ ಮನೆಯಲ್ಲಿರುವ ಕೆಲವು ಅಧಿಕಾರಿ, ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ. ಹತ್ತಾರು ಕಡೆ ತೀರದ ಬವಣೆ ಕಿತ್ತೂರು ರಾಣಿ ಚನ್ನಮ್ಮ, ಬಾಲಕರ ಹಾಸ್ಟೆಲ್, ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳ ಹಾಸ್ಟೆಲ್, ಕೆಲವು ಇಲಾಖೆ ಕಚೇರಿಗಳು ಸ್ವಂತ ಕಟ್ಟಡವಿಲ್ಲದೆ ಖಾಸಗಿ ಕಟ್ಟಡದವರಿಗೆ ಬಾಡಿಗೆ ನೀಡಿ ಸರಕಾರಿ ಯಂತ್ರ ನಡೆಸುತ್ತಿರುವುದು ಶೋಚನೀಯವಾಗಿದೆ. ತಾಲೂಕಿನ ಗ್ರಾಮೀಣ ಪ್ರದೇಶದಲ್ಲೂ ಸರಕಾರಿ ಇಲಾಖೆ, ನಿಗಮ ಕಚೇರಿಗಳು ಕಟ್ಟಡ ಸಮಸ್ಯೆ ಎದುರಿಸುತ್ತಿವೆ. ಮೆಸ್ಕಾಂ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕೆಲಸ ಮಾಡುತ್ತಿವೆ. ಸ್ವಂತ ಕಟ್ಟಡವಿಲ್ಲದ ಕಾರಣ ಅನಾಯಾಸವಾಗಿ ಪ್ರತಿ ತಿಂಗಳು ಅಧಿಕ ಮೊತ್ತದ ಬಾಡಿಗೆ ನೀಡಬೇಕಾಗಿದೆ. ಸಿಂಸೆಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ದೇವರಾಜ ಅರಸು ವಸತಿ ಶಾಲೆ, ಹಿಂದುಳಿದ ಬಾಲಕರ ಹಾಸ್ಟೇಲ್, ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್, ಅಗ್ನಿಶಾಮಕ ದಳ ಕಚೇರಿ, ರಬ್ಬರ್ ಆಡಳಿತ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಾಹಿಸುತ್ತಿವೆ. ಸರಕಾರಿ ಕಚೇರಿ ಮತ್ತು ಸರಕಾರಿ ಮನೆಗಳನ್ನು ಪಾಳು ಬಿಳಿಸಿಕೊಂಡು ಖಾಸಗಿಯವರಿಗೆ ಬಾಡಿಗೆ ನೀಡಿ ಕಚೇರಿ, ಹಾಸ್ಟೆಲ್ಗಳನ್ನು ನಡೆಸುತ್ತಿರುವುದರಿಂದ ಜನರ ತೆರಿಗೆ ಹಣಕ್ಕೆ ಬೆಲೆಯಿಲ್ಲದಂತಾಗಿದೆ. ಸರಕಾರದ ಬೊಕ್ಕಸಕ್ಕೆ ನಷ್ಟವಾಗುವ ಜತೆಗೆ ಖಾಸಗಿಯವರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಖಾಸಗಿಯವರಿಗೆ ಬಾಡಿಗೆ ನೀಡುವ ಬದಲು ಅದೇ ಹಣದಲ್ಲಿ ಸರಕಾರಿ ಕಟ್ಟಗಳನ್ನು ನಿರ್ಮಿಸಬಹುದಾಗಿದೆ. ಶೇಖರ್, ನರಸಿಂಹರಾಜಪುರ ನಮ್ಮ ಇಲಾಖೆಗೆ ಸೇರಿದ ಕಟ್ಟಡವನ್ನು ದುರುಸ್ತಿಗೊಳಿಸಿ ಇಲಾಖೆಯ ಸಿಬ್ಬಂದಿಗಳಿಗೆ ನೀಡಲಾಗುವುದು. ಸದ್ಯದಲ್ಲೆ ಕೆಲಸ ಆರಂಭಗೊಳ್ಳಲಿದೆ. ಈಗಾಗಲೆ ಮುಂಭಾಗದಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನು ತೆಗೆಸಿ ಸ್ವಚ್ಛಗೊಳಿಸಲಾಗಿದೆ. ರವೀಚಂದ್ರ, ಪಿಡಬ್ಲ್ಯೂಡಿ ಎಂಜಿನಿಯರ್, ಕೊಪ್ಪ, ನರಸಿಂಹರಾಜಪುರ
from India & World News in Kannada | VK Polls https://ift.tt/2KBaPd7