ಕೆ.ಆರ್.ಪೇಟೆ: ದೇಶಕಟ್ಟಲು ಬೇಕಾಗಿರುವುದು ನಿಸ್ವಾರ್ಥವಾಗಿ ಮಾಡುವ ಜನಸೇವೆ ಹಾಗೂ ವೃತ್ತಿ ಕೌಶಲ್ಯ ಎಂದು ಮಂಡ್ಯ ಜಿಲ್ಲಾಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಹೇಳಿದರು.ತಾಲೂಕಿನ ಹಿರಿಕಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಮನಹಳ್ಳಿ ಗ್ರಾಮದಲ್ಲಿ ರೈತ ವಿಜ್ಞಾನಿಯಾದ ರೋಬೋ ಮಂಜೇಗೌಡ ಅವರು ಅನುಷ್ಠಾನಗೊಳಿಸಿರುವ ಜಲವಿದ್ಯುತ್ನ ಕಿರುಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಒಬ್ಬ ಸಾಮಾನ್ಯ ರೈತರಾದ ರೋಬೋ ಮಂಜೇಗೌಡ ಅವರು ತಮ್ಮಲ್ಲಿನ ವೈಜ್ಞಾನಿಕ ಮನೋಭಾವದಿಂದ ವ್ಯರ್ಥವಾಗಿ ಹರಿದು ಹಳ್ಳವನ್ನು ಸೇರುತ್ತಿದ್ದ ನೀರಿನಿಂದ ವಿದ್ಯುತ್ ಉತ್ಪಾದಿಸಿ ತನ್ನ ಹುಟ್ಟೂರಿನ ಮನೆಗಳು, ದೇವಸ್ಥಾನ ಹಾಗೂ ಶಾಲೆಗೆ ವಿದ್ಯುತ್ ನೀಡುವ ಮೂಲಕ ಇಡೀ ಗ್ರಾಮಕ್ಕೆ ಬೆಳಕಾಗಿದ್ದಾರೆ. ಹೆಚ್ಚಿನ ವ್ಯಾಸಂಗ ಮಾಡದಿದ್ದರೂ ತನ್ನಲ್ಲಿನ ಜ್ಞಾನದ ಶಕ್ತಿಯಿಂದ ಗಡಿ ಸಂರಕ್ಷಣೆ ಮಾಡುವ ರೋಬೋಟ್, ನೀರಿನಲ್ಲಿ ಮುಳುಗಿರುವ ವಸ್ತುಗಳನ್ನು ಪತ್ತೆ ಹಚ್ಚುವ ಅನ್ವೇಷಕ, ಕೊಳವೆ ಬಾವಿಯಲ್ಲಿ ಬಿದ್ದ ಮಗುವನ್ನು ಸಂರಕ್ಷಣೆ ಮಾಡುವ ರೋಬೋ, ರೈಲ್ವೆ ಲೆವೆಲ್ ಕ್ರಾಸಿಂಗ್ ಮಾಡುವ ಸಂದರ್ಭದಲ್ಲಿ ವಾಹನಗಳ ಅಪಘಾತ ತಪ್ಪಿಸುವ ಆಟೋಮೆಟಿಕ್ ಗೇಟ್ ಸಿಸ್ಟಂ ಹೀಗೆ ಹತ್ತು ಹಲವಾರು ಸಂಶೋಧನೆಗಳನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ನಾರಾಯಣಗೌಡ ಹೇಳಿದರು.ರೋಬೋಟ್ ಸಂಶೋಧಿಸಿ ಈ ಹಿಂದೆ ಮಂಜೇಗೌಡ ಅವರು ಇಡೀ ಮಂಡ್ಯ ಜಿಲ್ಲೆಯಲ್ಲೇ ಹೆಸರುವಾಸಿಯಾಗಿದ್ದರು. ರೋಬೋಟ್ನ್ನು ತಯಾರಿಸಿದ್ದ ಇವರು ಇದನ್ನು ಜಮೀನಿನ ಗಡಿ ಸಂರಕ್ಷಣೆ, ನೀರಿನಲ್ಲಿ ಮುಳುಗಿರುವ ವಸ್ತುಗಳನ್ನು ಪತ್ತೆ ಹಚ್ಚುವ ಅನ್ವೇಷಕ, ಕೊಳವೆ ಬಾವಿಯಲ್ಲಿ ಬಿದ್ದ ಮಗುವನ್ನು ಸಂರಕ್ಷಣೆ ಮಾಡುವ ರೋಬೋಟ್ಗಳನ್ನು ಸಂಶೋಧಿಸಿದ್ದರು, ಅಲ್ಲದೆ ರೈಲ್ವೆ ಲೆವೆಲ್ ಕ್ರಾಸಿಂಗ್ ಮಾಡುವ ಸಂದರ್ಭದಲ್ಲಿ ವಾಹನಗಳ ಅಪಘಾತ ತಪ್ಪಿಸುವ ಆಟೋಮೆಟಿಕ್ ಗೇಟ್ ಸಿಸ್ಟಂ ಹೀಗೆ ಹತ್ತು ಹಲವಾರು ಸಂಶೋಧನೆಗಳನ್ನು ಇವರು ಮಾಡಿದ್ದರು.

ಕೆ.ಆರ್.ಪೇಟೆ:
ದೇಶಕಟ್ಟಲು ಬೇಕಾಗಿರುವುದು ನಿಸ್ವಾರ್ಥವಾಗಿ ಮಾಡುವ ಜನಸೇವೆ ಹಾಗೂ ವೃತ್ತಿ ಕೌಶಲ್ಯ ಎಂದು ಮಂಡ್ಯ ಜಿಲ್ಲಾಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಹೇಳಿದರು.ತಾಲೂಕಿನ ಹಿರಿಕಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಮನಹಳ್ಳಿ ಗ್ರಾಮದಲ್ಲಿ ರೈತ ವಿಜ್ಞಾನಿಯಾದ ರೋಬೋ ಮಂಜೇಗೌಡ ಅವರು ಅನುಷ್ಠಾನಗೊಳಿಸಿರುವ ಜಲವಿದ್ಯುತ್ನ ಕಿರುಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಒಬ್ಬ ಸಾಮಾನ್ಯ ರೈತರಾದ ರೋಬೋ ಮಂಜೇಗೌಡ ಅವರು ತಮ್ಮಲ್ಲಿನ ವೈಜ್ಞಾನಿಕ ಮನೋಭಾವದಿಂದ ವ್ಯರ್ಥವಾಗಿ ಹರಿದು ಹಳ್ಳವನ್ನು ಸೇರುತ್ತಿದ್ದ ನೀರಿನಿಂದ ವಿದ್ಯುತ್ ಉತ್ಪಾದಿಸಿ ತನ್ನ ಹುಟ್ಟೂರಿನ ಮನೆಗಳು, ದೇವಸ್ಥಾನ ಹಾಗೂ ಶಾಲೆಗೆ ವಿದ್ಯುತ್ ನೀಡುವ ಮೂಲಕ ಇಡೀ ಗ್ರಾಮಕ್ಕೆ ಬೆಳಕಾಗಿದ್ದಾರೆ. ಹೆಚ್ಚಿನ ವ್ಯಾಸಂಗ ಮಾಡದಿದ್ದರೂ ತನ್ನಲ್ಲಿನ ಜ್ಞಾನದ ಶಕ್ತಿಯಿಂದ ಗಡಿ ಸಂರಕ್ಷಣೆ ಮಾಡುವ ರೋಬೋಟ್, ನೀರಿನಲ್ಲಿ ಮುಳುಗಿರುವ ವಸ್ತುಗಳನ್ನು ಪತ್ತೆ ಹಚ್ಚುವ ಅನ್ವೇಷಕ, ಕೊಳವೆ ಬಾವಿಯಲ್ಲಿ ಬಿದ್ದ ಮಗುವನ್ನು ಸಂರಕ್ಷಣೆ ಮಾಡುವ ರೋಬೋ, ರೈಲ್ವೆ ಲೆವೆಲ್ ಕ್ರಾಸಿಂಗ್ ಮಾಡುವ ಸಂದರ್ಭದಲ್ಲಿ ವಾಹನಗಳ ಅಪಘಾತ ತಪ್ಪಿಸುವ ಆಟೋಮೆಟಿಕ್ ಗೇಟ್ ಸಿಸ್ಟಂ ಹೀಗೆ ಹತ್ತು ಹಲವಾರು ಸಂಶೋಧನೆಗಳನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ನಾರಾಯಣಗೌಡ ಹೇಳಿದರು.
ರೋಬೋ ಮಂಜೇಗೌಡ ಈ ಬಾರಿ ಮಾಡಿದ್ದೇನು?

8ನೇ ತರಗತಿ ಓದಿರುವ ಮಂಜೇಗೌಡ ತಮಗಿರುವ ಜಮೀನಿನಲ್ಲೇ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಸಂಶೋಧನೆಯ ಆಸಕ್ತಿ ಹೊಂದಿರುವ ಇವರು ಸಮಯ ಸಿಕ್ಕಾಗಲೆಲ್ಲಾ ಕೃಷಿಗೆ ಸಂಬಂಧಪಟ್ಟ ಏನಾದರೂ ಸಂಶೋಧನೆಯನ್ನು ಮಾಡುತ್ತಲೇ ಇರುತ್ತಾರೆ. ಇದೀಗ ಮಳೆಯಾಗಿ ಕೆರೆ ತುಂಬಿ ಹರಿಯುತ್ತಿದ್ದು ವೇಸ್ಟೇಜ್ ನೀರಿನಿಂದ ವಿದ್ಯುತ್ ಉತ್ಪಾದನೆ ಮಾಡಿದ್ದಾರೆ. ಸ್ಥಳೀಯವಾಗಿಯೇ ಸಿಗುವ ವಸ್ತು ಬಳಕೆ ಮಾಡಿ ಸಣ್ಣ ಪ್ರಮಾಣದ ವಿದ್ಯುತ್ ಘಟಕವನ್ನೇ ಸ್ಥಾಪಿಸಿದ್ದಾರೆ. ಇನ್ನು ಇದರಿಂದ ಉತ್ಪಾದನೆಯಾಗುವ ವಿದ್ಯುತನ್ನು ಊರಿನ 10 ಬಡಕುಟುಂಬಗಳಿಗೆ ಉಚಿತವಾಗಿ ನೀಡುತ್ತಿದ್ದಾರೆ. ಜೊತೆಗೆ ಶಾಲೆ, ಹಾಲಿನ ಡೈರಿ ಹಾಗೂ ದೇವಾಲಯಕ್ಕೂ ಇವರು ಉಚಿತವಾಗಿ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ. ವಾರದಲ್ಲಿ 1 ದಿನ ಪೂರ್ತಿ ಅಂದರೆ ದಿನದ 24 ಗಂಟೆ ಕಾಲ ವಿದ್ಯುತ್ ಬಳಸಿ ನೀರು ಪಂಪ್ ಮಾಡ್ತಾರೆ. ಸರ್ಕಾರ ರೈತರ ಪಂಪ್ ಸೆಟ್ ಗಳಿಗೆ ದಿನಕ್ಕೆ 3 ಗಂಟೆ ವಿದ್ಯುತ್ ನೀಡುತ್ತಿದ್ದು, ಇವರು ತಮ್ಮದೇ ವಿದ್ಯುತ್ ಬಳಸಿ ದಿನದ 24 ಗಂಟೆಗಳ ಕಾಲ ಫ್ರೀಯಾಗಿ ವಿದ್ಯುತ್ ಪಡೆಯುತ್ತಿದ್ದಾರೆ.
ಎಂ.ಶೆಟ್ಟಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರದ ಫ್ಲೆಕ್ಸ್ಗೆ ಕಿಡಿಗೇಡಿಗಳಿಂದ ಬೆಂಕಿ
ಈ ಹಿಂದೆ ರೋಬೋಟ್ ಸಂಶೋಧಿಸಿದ್ದರು!

ಮಂಜೇಗೌಡ ಅವರಿಗೆ ರೋಬೋ ಎಂದು ಹೆಸರು ಬರಲು ಕಾರಣವಿದೆ. ಹೌದು, ರೋಬೋಟ್ ಸಂಶೋಧಿಸಿ ಈ ಹಿಂದೆ ಮಂಜೇಗೌಡ ಅವರು ಇಡೀ ಮಂಡ್ಯ ಜಿಲ್ಲೆಯಲ್ಲೇ ಹೆಸರುವಾಸಿಯಾಗಿದ್ದರು. ರೋಬೋಟ್ನ್ನು ತಯಾರಿಸಿದ್ದ ಇವರು ಇದನ್ನು ಜಮೀನಿನ ಗಡಿ ಸಂರಕ್ಷಣೆ, ನೀರಿನಲ್ಲಿ ಮುಳುಗಿರುವ ವಸ್ತುಗಳನ್ನು ಪತ್ತೆ ಹಚ್ಚುವ ಅನ್ವೇಷಕ, ಕೊಳವೆ ಬಾವಿಯಲ್ಲಿ ಬಿದ್ದ ಮಗುವನ್ನು ಸಂರಕ್ಷಣೆ ಮಾಡುವ ರೋಬೋಟ್ಗಳನ್ನು ಸಂಶೋಧಿಸಿದ್ದರು, ಅಲ್ಲದೆ ರೈಲ್ವೆ ಲೆವೆಲ್ ಕ್ರಾಸಿಂಗ್ ಮಾಡುವ ಸಂದರ್ಭದಲ್ಲಿ ವಾಹನಗಳ ಅಪಘಾತ ತಪ್ಪಿಸುವ ಆಟೋಮೆಟಿಕ್ ಗೇಟ್ ಸಿಸ್ಟಂ ಹೀಗೆ ಹತ್ತು ಹಲವಾರು ಸಂಶೋಧನೆಗಳನ್ನು ಇವರು ಮಾಡಿದ್ದರು. ಹೀಗಾಗಿ ಇವರು ರೈತ ವಿಜ್ಞಾನಿ ಎಂದೇ ಖ್ಯಾತಿ ಪಡೆದಿದ್ದಾರೆ.
ಸೀರೆ ಉದ್ಯಮದ ಕೋಡು ಶ್ರೀರಂಗಪಟ್ಟಣದ ಕೊಡಿಯಾಲ, ಸೀರೆಯೇ ಊರಿನ ಹೆಸರು!
ಎಲ್ಲೆಡೆಯಿಂದ ಶ್ಲಾಘನೆ!

ಮಂಜೇಗೌಡರ ಸಾಧನೆ ಬಗ್ಗೆ ಇಡೀ ಜಿಲ್ಲೆಯೇ ಇದೀಗ ಸಂತೋಷಗೊಂಡಿದೆ. ಶಿಕ್ಷಣ ಹೆಚ್ಚೇನು ಪಡೆಯದ ಮಂಜೇಗೌಡರ ಸಂಶೋಧನೆಗೆ ಜನರು ಮಾರು ಹೋಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಡ್ಯ ಜಿಲ್ಲೆಯ ಸೆಸ್ಕ್ ವಿಭಾಗದ ಅಧೀಕ್ಷಕ ಎಂಜಿನಿಯರ್ ಶ್ರೀನಿವಾಸಮೂರ್ತಿ, ಅಗತ್ಯವಾಗಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮಂಜೇಗೌಡರು ವ್ಯರ್ಥವಾಗಿ ಹರಿಯುತ್ತಿದ್ದ ಕಾಲುವೆಯ ಹಳ್ಳದ ನೀರನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಮೂಲಕ ತಾಲೂಕಿನಲ್ಲಿ ಹೊಸ ವೈಜ್ಞಾನಿಕ ಆವಿಷ್ಕಾರಕ್ಕೆ ಮುಂದಾಗಿದ್ದಾರೆ. ರೈತ ದೇಶದ ಬೆನ್ನೆಲುಬು ರೈತನೆ ಉಚಿತವಾಗಿ ಸರಕಾರಕ್ಕೆ ಹಾಗೂ ಸಮಾಜಕ್ಕೆ ವಿದ್ಯುತ್ ಉತ್ಪಾದನೆ ಮಾಡಿಕೊಡುವುದು ಸಣ್ಣ ವಿಷಯವೇನಲ್ಲ. ಮಂಜೇಗೌಡರಲ್ಲಿ ಸುಪ್ತವಾಗಿರುವ ವೈಜ್ಞಾನಿಕ ಮನೋಧರ್ಮವು ಯಾವುದೇ ವಿಜ್ಞಾನಿಗಳಿಗಿಂತಲೂ ಕಡಿಮೆಯೇನಲ್ಲಎಂದು ಶ್ಲಾಘಿಘಿಸಿದರು. ಇನ್ನು, ಕೆಆರ್ ಪೇಟೆ ಜಾನಪದ ಪರಿಷತ್ ಅಧ್ಯಕ್ಷ ಕೆಎ.ಸ್.ಸೋಮಶೇಖರ್ ಮಾತನಾಡಿ, ರೋಬೋ ಮಂಜೇಗೌಡರ ಮನೆಯೇ ಒಂದು ಪ್ರಯೋಗ ಶಾಲೆಯಂತಿದೆ. ಗುಜರಿಯಲ್ಲಿ ದೊರೆಯುವ ಅನುಪಯುಕ್ತ ವಸ್ತುಗಳನ್ನು ಖರೀದಿಸಿ ತನ್ನ ವೈಜ್ಞಾನಿಕ ಆವಿಷ್ಕಾರಗಳಿಗೆ ತಕ್ಕಂತೆ ತಾನೇ ಉಪಕರಣಗಳನ್ನು ಸಿದ್ಧಪಡಿಸಿಕೊಳ್ಳುವ ಮಂಜೇಗೌಡರು ಕಡಿಮೆ ಖರ್ಚಿನಲ್ಲಿ ಸಮಾಜಕ್ಕೆ ಅನುಕೂಲವಾಗುವ ಹತ್ತು ಹಲವು ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ ಎಂದಿದ್ದಾರೆ.
from India & World News in Kannada | VK Polls https://ift.tt/3mK3nth