ಗುಜರಾತ್‌: ಮದುವೆಯ ವೇಳೆ ಮುಟ್ಟಾದ ಬಗ್ಗೆ ಮಾಹಿತಿ ನೀಡಿಲ್ಲ ಎನ್ನುವ ಕಾರಣಕ್ಕೆ ವಿಚ್ಛೇದನಕ್ಕೆ ಮುಂದಾದ ಗಂಡ

ವಡೋದರ: ಮದುವೆಯ ದಿನ ಮುಟ್ಟಾದ ಬಗ್ಗೆ ತನಗೆ ಮಾಹಿತಿ ನೀಡಲಿಲ್ಲ ಎನ್ನುವ ಕಾರಣಕ್ಕೆ ಗುಜರಾತಿನ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದು, ಈಗ ಮುಟ್ಟಿನ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ವಡೋದರ ಜಿಲ್ಲೆಯ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ವ್ಯಕ್ತಿ ಇಂತಹದ್ದೊಂದು 'ಅಪನಂಬಿಕೆ'ಯ ಕೆಲಸ ಮಾಡಿ ಸುದ್ದಿಯಾಗಿದ್ದಾನೆ. ''ಹಸೆಮಣೆ ಏರಿ ತಾಳಿಕಟ್ಟುವಾಗಲೂ ಪತ್ನಿ ತಾನು ಮುಟ್ಟಾದ ವಿಷಯವನ್ನು ನನಗೆ ಹೇಳಲೇ ಇಲ್ಲ. ಎಲ್ಲವೂ ಮುಗಿದು ದೇವರ ದರ್ಶನಕ್ಕೆ ಹೋಗುವಾಗ ಆ ವಿಷಯ ನನ್ನ ಕಿವಿಯಲ್ಲಿ ಉಸುರಿದಳು. ಅದನ್ನು ಕೇಳಿ ನಾನು ಆಘಾತಗೊಂಡೆ. ನನ್ನ ತಾಯಿಗೆ ತಿಳಿಸಿದಾಗ ಅವರೂ ಬೆಚ್ಚಿ ಬಿದ್ದರು. ಆದರೂ ಇರಲಿ ಎಂದು ಎಲ್ಲವನ್ನು ಸಹಿಸಿಕೊಂಡು, ಪೂಜೆಪುನಸ್ಕಾರಗಳ ಮೂಲಕ ಸರಿದೂಗಿಸಿಕೊಂಡು ಬಂದೆ. ಆದರೆ ಈಗ ಯಾವುದೇ ಹೊಂದಾಣಿಕೆಯಾಗುತ್ತಿಲ್ಲ,''ಎಂದು ವಿಚ್ಛೇದನ ಅರ್ಜಿಯಲ್ಲಿ ವ್ಯಕ್ತಿ ಅಲವತ್ತುಕೊಂಡಿದ್ದಾನೆ. ಸದ್ಯ ಮಹಿಳಾ ಸಬಲೀಕರಣದ ಎನ್‌ಜಿಒಗಳು ಮುಟ್ಟಿನ ಬಗ್ಗೆ ಜನ ಜಾಗೃತಿ ಮೂಡಿಸಿ, ಆ ಅಪನಂಬಿಕೆಯಿಂದ ಜನರನ್ನು ಹೊರತರಬೇಕು ಎನ್ನುವ ಪ್ರಯತ್ನದಲ್ಲಿರುವಾಗಲೇ ಗುಜರಾತಿನ ಈ ಘಟನೆ ನಡೆದಿದೆ.


from India & World News in Kannada | VK Polls https://ift.tt/2KAfzzN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...