ಕ್ರಿಸ್ಮಸ್ ಸಂಭ್ರಮ: ಯೇಸುಕ್ರಿಸ್ತನ ಜನ್ಮದಿನದಂದು ಕ್ರೈಸ್ತರಿಂದ ವಿಶೇಷ ಪೂಜೆ, ಗಣ್ಯರ ಶುಭಾಶಯ

ಬೆಂಗಳೂರು: ನಾಡಿನಾದ್ಯಂತ ಕಿಸ್ಮಸ್ ಹಬ್ಬದ ಸಂಭ್ರಮ ಜೋರಾಗಿದೆ. ಯೇಸುಕ್ರಿಸ್ತ ಹುಟ್ಟಿದ ಈ ದಿನವನ್ನು ಕ್ರೈಸ್ತ ಸಮುದಾಯದ ಜನರು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಕೋವಿಡ್‌ ಕಾರಣದಿಂದಾಗಿ ಕ್ರಿಸ್ಮಸ್ ವಿಶೇಷ ಪ್ರಾರ್ಥನೆ ವೇಳೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಗಾಸ್ಪೆಲ್‌ ಪ್ರಕಾರ ಯೇಸುಕ್ರಿಸ್ತನು ಮೇರಿ ಹಾಗೂ ಜೋಸೆಫರ ಮಗನಾಗಿ ಈ ದಿನದಂದು ಹುಟ್ಟಿದ ಎಂಬುವುದು ಕ್ರೈಸ್ತರ ನಂಬಿಕೆಯಾಗಿದೆ. ಈ ದಿನದಂದು ಕ್ರೈಸ್ತ ಸಮುದಾಯದವರು ತಮ್ಮ ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ ಗೊಂಬೆಗಳನ್ನಿಡುತ್ತಾರೆ, ಅಲ್ಲದೆ ಕ್ರಿಸ್ಮಸ್ ವೃಕ್ಷವಿಟ್ಟು ಅಲಂಕರಿಸುತ್ತಾರೆ, ಅಷ್ಟೇ ಅಲ್ಲದೆ ಕ್ರಿಸ್ಮಸ್ಸಿಗೆಂದೇ ತಯಾರಿಸಿದ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುತ್ತಾರೆ. ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ 24 ರಂದು ರಾತ್ರಿ ಚರ್ಚ್‌ಗಳಲ್ಲಿ ಮಾಸ್‌ ಪ್ರೇಯರ್ ಇರುತ್ತದೆ. ಕೋವಿಡ್‌ ಹಿನ್ಮಲೆಯಲ್ಲಿ ಕೆಲವೊಂದು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಾಸ್ ಆಚರಣೆಯನ್ನು ಕ್ರೈಸ್ತರು ಮಾಡಿದ್ದಾರೆ. ಇನ್ನು ಕ್ರಿಸ್‌ಮಸ್‌ ಹಬ್ಬಕ್ಕೆ ರಾಜಕಾರಣಿಗಳು, ಗಣ್ಯರು ಶುಭಕೋರಿದ್ದಾರೆ. ಎಲ್ಲ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಕೊರೋನಾ ಪರಿಸ್ಥಿತಿ ಹಿನ್ನಲೆಯಲ್ಲಿ ಈ ಬಾರಿ ಸೀಮಿತ ಆಚರಣೆಗಳಿರಲಿ, ಮಾಸ್ಕ್ ಧರಿಸಿ, ಭೌತಿಕ ಅಂತರ ಕಡ್ಡಾಯ ಪಾಲಿಸಿ. ಆದಷ್ಟೂ ಮನೆಗಳಲ್ಲಿಯೇ ದೇವರನ್ನು ಆರಾಧಿಸಿ. ನಾಡಿನಲ್ಲಿ ಆರೋಗ್ಯ, ಶಾಂತಿ, ಸಮೃದ್ಧಿಗಳು ನೆಲೆಸಲಿ ಎಂದು ವಿಶೇಷವಾಗಿ ಪ್ರಾರ್ಥಿಸೋಣ ಎಂದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಶುಭಹಾರೈಸಿದ್ದಾರೆ. ಇನ್ನು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕ್ರೈಸ್ತ ಸಮುದಾಯದವರಿಗೆ ಕ್ರಿಸ್ಮಸ್ ಶುಭಾಶಯ ಕೋರಿದ್ದಾರೆ. ತ್ಯಾಗ, ಕರುಣೆ, ಪ್ರೀತಿ ಮತ್ತು ಕ್ಷಮಾ ಗುಣಗಳಿಂದ ಮಾತ್ರವೇ ಮನುಷ್ಯನ ಬದುಕು ಸಾರ್ಥಕ ಎಂಬ ಮಹೋನ್ನತ ಬೆಳಕ ತೋರಿದ ಏಸುಕ್ರಿಸ್ತನಿಗೆ ನಮನಗಳು ಎಂದು ಶುಭಹಾರೈಸಿದ್ದಾರೆ. ವಿಶ್ವಕ್ಕೆ ಶಾಂತಿ ಮತ್ತು ಪ್ರೀತಿಯ ಸಂದೇಶವನ್ನು ಸಾರುವ ಯೇಸುಕ್ರಿಸ್ತರು ಎಲ್ಲಾ ಭಾರತೀಯರಿಗೆ ಅನುಗ್ರಹ ನೀಡಲೆಂದು ಹಾರೈಸುತ್ತೇನೆ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಶುಭಕೋರಿದ್ದಾರೆ.


from India & World News in Kannada | VK Polls https://ift.tt/3aHcTLu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...