ಹೈದರಾಬಾದ್: ಒಂದೇ ಒಂದು ಇಲಿಯಿಂದಾಗಿ ಸುಮಾರು ಒಂದು ಕೋಟಿ ಮೌಲ್ಯದ ಆಸ್ತಿ ಪಾಸ್ತಿ ನಷ್ಟ ಆಗಿದೆ ಅಂದ್ರೆ ನಂಬ್ತೀರಾ?. ನಂಬಲೇ ಬೇಕು. ಇದೊಂಥರಾ ಪರಿಸ್ಥತಿ ಕೆಟ್ಟಾಗ ಹೂವಿನ ಹಾರವೂ ಹಾವಾಗಿ ಪರಿಣಮಿಸುತ್ತೆ ಅಂತಾರಲ್ಲ ಅದೇ ಥರ. ಹೈದರಾಬಾದ್ನ ಮುಶೀರಾಬಾದ್ನಲ್ಲಿರೋ ಕಾರ್ ಸರ್ವಿಸ್ ಸೆಂಟರ್ನಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ಅಗ್ನಿ ಅನಾಹುತವೊಂದು ಸಂಭವಿಸಿತ್ತು. ಈ ಅಗ್ನಿ ಅವಘಡದಲ್ಲಿ ಮೂರು ಕಾರ್ಗಳು ಭಸ್ಮವಾಗಿ ಸುಟ್ಟು ಕರಕಲಾಗಿತ್ತು. ಸರ್ವಿಸ್ ಸೆಂಟರ್ ಕೂಡ ಭಾಗಶಃ ಅಗ್ನಿಗಾಹುತಿಯಾಗಿತ್ತು. ಈ ಘಟನೆ ನಡೆದ ನಂತರ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಆದರೆ ಇದೀಗ ಆರು ತಿಂಗಳ ಹಿಂದೆ ನಡೆದ ಘಟನೆಗೆ ಕಾರಣ ಒಂದು ಅನ್ನೋದು ಈಗ ಬಹಿರಂಗಗೊಂಡಿದೆ. ಘಟನೆಯ ತನಿಖೆ ನಡೆಸಿದ ಪೊಲೀಸರು ಈ ಅನಾಹುತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಕೇಸ್ ಕ್ಲೋಸ್ ಮಾಡಿದ್ದರು. ಆದರೆ ಇದೇ ಪ್ರಕರಣದ ತನಿಖೆಯನ್ನು ನಡೆಸಿದ್ದ ಖಾಸಗಿ ಫೊರೆನಿಕ್ಸ್ ಏಜೆನ್ಸಿ ಕಚೇರಿಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿತ್ತು. ಈ ವೇಳೆ ಇಲಿಯೊಂದು ಮಾಡಿದ ಅನಾಹುತದಿಂದಲೇ ಅನಾಹುತ ಸಂಭವಿಸಿದೆ ಎಂಬ ನಿಜಾಂಶ ಬಯಲಾಗಿದೆ. ಘಟನೆ ನಡೆದ ದಿನ ಕಚೇರಿಯಲ್ಲಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಚೇರಿಯ ಸಿಬ್ಬಂದಿಯೊಬ್ಬರು ದೀಪಯವನ್ನು ಉರಿಸಿದ್ದರು. ದೀಪ ಉರಿಸಿದ್ದ ಕೋಣೆಗೆ ಗಾಳಿಯೇನು ಅಷ್ಟು ರಭಸವಾಗಿ ಬರದ ಕಾರಣ ರಾತ್ರಿಯತನಕ ದೀಪ ಉರಿಯುತ್ತಲೇ ಇತ್ತು. ಈ ವೇಳೆ ಇಲಿಯೊಂದು ಬಂದು ಆ ದೀಪವನ್ನು ಕೆಳಕ್ಕೆ ಬೀಳಿಸಿದ್ದು, ಪರಿಣಾಮ ಅಲ್ಲೇ ಇದ್ದ ಚೆಯರ್ಗೆ ಬೆಂಕಿ ಹತ್ತಿಕೊಂಡು ಕಚೇರಿಗೆ ಬೆಂಕಿ ವ್ಯಾಪಿಸಿಕೊಂಡಿದೆ. ಘಟನೆಯಲ್ಲಿ ಮೂರು ಕಾರ್ಗಳು ಭಸ್ಮವಾಗಿವೆ. ಕಚೇರಿ ಕೂಡ ಬೆಂಕಿಗೆ ಆಹುತಿಯಾಗಿದೆ. ಈ ದೃಶ್ಯ ಸಿಸಿಡವಿಯಲ್ಲಿ ಸೆರೆಯಾಗಿದೆ.
from India & World News in Kannada | VK Polls https://ift.tt/2EsdhiE