ಆರ್ಮಿ ಕಮಾಂಡರ್‌ಗಳ ವಿಶೇಷ ಸಭೆ: ಚೀನಿ ದುಸ್ಸಾಹಸಕ್ಕೆ ಸೇನೆಯ ಪ್ರತಿತಂತ್ರ ಪೂರ್ಣ?

ಲಡಾಖ್ ಗಡಿಯಲ್ಲಿ ಚೀನಿ ದುಸ್ಸಾಹಸಕ್ಕೆ ಪ್ರತಿತಂತ್ರ ಹೆಣೆಯುವಲ್ಲಿ ಮಗ್ನವಾಗಿರುವ ಭಾರತೀಯ ಸೇನೆ, ಉನ್ನತ ಆರ್ಮಿ ಕಮಾಂಡರ್‌ಗಳ ವಿಶೇಷ ಸಭೆ ನಡೆಸುವ ಮೂಲಕ ಚೀನಾಗೆ ಎದಿರೇಟು ನೀಡಲು ಸಜ್ಜಾಗಿದೆ. ಇದೇ ಆಗಸ್ಟ್ 20-21(ಗುರುವಾರ-ಶುಕ್ರವಾರ) ನವದೆಹಲಿಯಲ್ಲಿ ಸಭೆ ಸೇರಿದ್ದ ಸೇನೆಯ ಉನ್ನತ ಕಮಾಂಡರ್‌ಗಳು, ಚೀನಾ ಸೇನೆಯ ತಂತ್ರಗಳಿಗೆ ಪ್ರತಿತಂತ್ರ ರೂಪಿಸುವುದರ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದು ವಾರ್ಷಿಕವಾಗಿ ಎರಡು ಬಾರಿ ನಡೆಯುವ ಆರ್ಮಿ ಕಮಾಂಡರ್ ಸಮ್ಮೇಳನವಲ್ಲ ಎಂದು ಸ್ಪಷ್ಟಪಡಿಸಿರುವ ಸೇನೆ, ಕೇವಲ ಲಡಾಖ್ ಗಡಿ ಹಾಗೂ ಚೀನಾದ ಆಕ್ರಮಣಕಾರಿ ನೀತಿಯನ್ನು ಹಣಿಯುವ ಕಾರ್ಗೋಪಾಯಗಳ ಕುರಿತು ಚರ್ಚಿಸಲು ಕರೆದಿದ್ದ ಸಭೆ ಎಂದು ಹೇಳಿದೆ. ಭೂಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಲಡಾಖ್‌ ಗಡಿಯ ಪರಿಸ್ಥಿತಿಯ ಕುರಿತು ವಿವರವಾಗಿ ಚರ್ಚೆ ಮಾಡಲಾಗಿದೆ. ಅಲ್ಲದೇ ಗಡಿಯ ಸಂರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತೂ ಈ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಹಾಗಾದರೆ ಎರಡು ದಿನಗಳ ಕಾಲ ನವದೆಹಲಿಯಲ್ಲಿ ನಡೆದ ಉನ್ನತ ಆರ್ಮಿ ಕಮಾಂಡರ್‌ಗಳ ಸಭೆಯ ಕುರಿತು ಗಮನಹರಿಸುವುದಾದರೆ...

ಲಡಾಖ್ ಗಡಿಯಲ್ಲಿ ಚೀನಿ ದುಸ್ಸಾಹಸಕ್ಕೆ ಪ್ರತಿತಂತ್ರ ಹೆಣೆಯುವಲ್ಲಿ ಮಗ್ನವಾಗಿರುವ ಭಾರತೀಯ ಸೇನೆ, ಉನ್ನತ ಆರ್ಮಿ ಕಮಾಂಡರ್‌ಗಳ ವಿಶೇಷ ಸಭೆ ನಡೆಸುವ ಮೂಲಕ ಚೀನಾಗೆ ಎದಿರೇಟು ನೀಡಲು ಸಜ್ಜಾಗಿದೆ.


ಆರ್ಮಿ ಕಮಾಂಡರ್‌ಗಳ ವಿಶೇಷ ಸಭೆ: ಚೀನಿ ದುಸ್ಸಾಹಸಕ್ಕೆ ಸೇನೆಯ ಪ್ರತಿತಂತ್ರ ಪೂರ್ಣ?

ಲಡಾಖ್ ಗಡಿಯಲ್ಲಿ ಚೀನಿ ದುಸ್ಸಾಹಸಕ್ಕೆ ಪ್ರತಿತಂತ್ರ ಹೆಣೆಯುವಲ್ಲಿ ಮಗ್ನವಾಗಿರುವ ಭಾರತೀಯ ಸೇನೆ, ಉನ್ನತ ಆರ್ಮಿ ಕಮಾಂಡರ್‌ಗಳ ವಿಶೇಷ ಸಭೆ ನಡೆಸುವ ಮೂಲಕ ಚೀನಾಗೆ ಎದಿರೇಟು ನೀಡಲು ಸಜ್ಜಾಗಿದೆ. ಇದೇ ಆಗಸ್ಟ್ 20-21(ಗುರುವಾರ-ಶುಕ್ರವಾರ) ನವದೆಹಲಿಯಲ್ಲಿ ಸಭೆ ಸೇರಿದ್ದ ಸೇನೆಯ ಉನ್ನತ ಕಮಾಂಡರ್‌ಗಳು, ಚೀನಾ ಸೇನೆಯ ತಂತ್ರಗಳಿಗೆ ಪ್ರತಿತಂತ್ರ ರೂಪಿಸುವುದರ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದು ವಾರ್ಷಿಕವಾಗಿ ಎರಡು ಬಾರಿ ನಡೆಯುವ ಆರ್ಮಿ ಕಮಾಂಡರ್ ಸಮ್ಮೇಳನವಲ್ಲ ಎಂದು ಸ್ಪಷ್ಟಪಡಿಸಿರುವ ಸೇನೆ, ಕೇವಲ ಲಡಾಖ್ ಗಡಿ ಹಾಗೂ ಚೀನಾದ ಆಕ್ರಮಣಕಾರಿ ನೀತಿಯನ್ನು ಹಣಿಯುವ ಕಾರ್ಗೋಪಾಯಗಳ ಕುರಿತು ಚರ್ಚಿಸಲು ಕರೆದಿದ್ದ ಸಭೆ ಎಂದು ಹೇಳಿದೆ. ಭೂಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಲಡಾಖ್‌ ಗಡಿಯ ಪರಿಸ್ಥಿತಿಯ ಕುರಿತು ವಿವರವಾಗಿ ಚರ್ಚೆ ಮಾಡಲಾಗಿದೆ. ಅಲ್ಲದೇ ಗಡಿಯ ಸಂರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತೂ ಈ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಹಾಗಾದರೆ ಎರಡು ದಿನಗಳ ಕಾಲ ನವದೆಹಲಿಯಲ್ಲಿ ನಡೆದ ಉನ್ನತ ಆರ್ಮಿ ಕಮಾಂಡರ್‌ಗಳ ಸಭೆಯ ಕುರಿತು ಗಮನಹರಿಸುವುದಾದರೆ...



ಗಡಿ ಸಂರಕ್ಷಣೆ ಕುರಿತು ಚರ್ಚೆ!
ಗಡಿ ಸಂರಕ್ಷಣೆ ಕುರಿತು ಚರ್ಚೆ!

ಉತ್ತರ ಮತ್ತು ಪಶ್ಚಿಮ ಫ್ರಂಟ್ಸ್ ಆರ್ಮಿ ಕಮಾಂಡರ್‌ಗಳು ಭಾಗವಹಿಸಿದ್ದ ಈ ಸಭೆಯಲ್ಲಿ, ಚೀನಿ ದುಸ್ಸಾಹಸವನ್ನು ಎದುರಿಸಿ ಗಡಿ ಸಂರಕ್ಷಿಸುವ ಕುರಿತು ವಿವರವಾಗಿ ಚರ್ಚೆ ಮಾಡಲಾಗಿದೆ . ಈ ವೇಳೆ ಭಾರತೀಯ ಭೂಸೇನಾ ಅಧ್ಯಕ್ಷ ಜನರಲ್ ಎಂಎಂ ನರವಣೆ ಅವರಿಗೆ ಸೇನಾ ಕಮಾಂಡರ್‌ಗಳು ಗಡಿಯ ಪ್ರಸಕ್ತ ಪರಿಸ್ಥಿತಿ ಕುರಿತು ಮಾಹಿತಿ ನೀಡಿದ್ದಾರೆ.

ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಒತ್ತು: ಮೋದಿ ಭಾಷಣದ ಬಳಿಕ ಮೆತ್ತಗಾದ ಚೀನಾ!

ಚೀನಾ ದುಸ್ಸಾಹಸವನ್ನು ತಡೆಯುವುದಷ್ಟೇ ಅಲ್ಲದೇ, ಭವಿಷ್ಯದಲ್ಲಿ ಮತ್ತೆ ತಂಡೆ ತಕರಾರು ಉದ್ಭವವಾಗದಂತೆ ನೋಡಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಕೇವಲ ಲಡಾಖ್ ಗಡಿಯ ಪರಿಸ್ಥಿತಿ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆ ಇದಾಗಿತ್ತು.



ತಂತ್ರಕ್ಕೆ ಪ್ರತಿತಂತ್ರವೊಂದೇ ಮದ್ದು!
ತಂತ್ರಕ್ಕೆ ಪ್ರತಿತಂತ್ರವೊಂದೇ ಮದ್ದು!

ಸತತ ಮಿಲಿಟರಿ ಮಾತುಕತೆ ಬಳಿಕವೂ ಚೀನಾ ಲಡಾಖ್ ಗಡಿಯಿಂದ ಕಾಲ್ಕಿಳುವ ಮುನ್ಸೂಚನೆ ಕಾಣುತ್ತಿಲ್ಲ. ಇದಕ್ಕೆ ಪ್ರತಿತಂತ್ರವನ್ನು ಹೆಣೆಯಲು ಸಿದ್ಧವಾಗಿರುವ ಭಾರತ, ಲಡಾಖ್ ಗಡಿಯಲ್ಲಿ ತನ್ನ ಉಪಸ್ಥಿತಿ ಹಾಗೂ ಸೇನಾ ಸಲಕರಣೆಗಳ ಜಮಾವಣೆ ಮಾಡಿ ಚೀನಾಗೆ ಟಕ್ಕರ್ ನೀಡಿದೆ.

ಲಡಾಖ್ ಗಡಿಗೆ ಸಂಬಂಧಿಸಿದಂತೆ ರಾಜತಾಂತ್ರಿಕ ಹಾಗೂ ಮಿಲಿಟರಿ ಎರಡರಲ್ಲೂ ಚೀನಾವನ್ನು ಮಣಿಸುತ್ತಿರುವ ಭಾರತ, ಗಡಿಯಿಂದ ಸಂಪೂರ್ಣವಾಗಿ ಕಾಲ್ಕಿಳುವಂತೆ ಮಾಡದೇ ಬಿಡುವುದಿಲ್ಲ.

ಭಾರತ ಗಡಿ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟು ಮಾಡುವುದಿಲ್ಲ ಎಂಬ ಭರವಸೆ ಇದೆ: ಚೀನಾ ರಾಯಭಾರ ಕಚೇರಿ!

ಇದೇ ಕಾರಣಕ್ಕೆ ಚೀನಾದ ಪ್ರತಿಯೊಂದೂ ತಂತ್ರಕ್ಕೂ ಭಾರತ ಪ್ರತಿತಂತ್ರವನ್ನು ಹೆಣೆಯುತ್ತಿದ್ದು, ಇದೀಗ ಉನ್ನತ ಸೇನಾ ಕಮಾಂಡರ್‌ಗಳ ವಿಶೇಷ ಸಭೆ ಕರೆಯುವ ಮೂಲಕ ಚೀನಾಗೆ ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ರವಾನಿಸಿದೆ.



ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರೊಂದಿಗೆ ರಾಜನಾಥ್ ಸಭೆ!
ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರೊಂದಿಗೆ ರಾಜನಾಥ್ ಸಭೆ!

ಏತನ್ಮಧ್ಯೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು(ಭಾನುವಾರ)ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಮೂರೂ ಸೇನಾ ಪಡೆಗಳ ಮುಖ್ಯಸ್ಥರೊಂದಿಗೆ ಭದ್ರತಾ ಪರಿಶೀಲನಾ ಸಭೆ ನಡೆಸಿದರು.

ಲಡಾಖ್‌ ಗಡಿಯಲ್ಲಿನ ಸಿದ್ಧತೆ ಹಾಗೂ ಚೀನಿ ಸೇನೆಯ ಚಲನವಲಗಳ ಕುರಿತು ಮಾಹಿತಿ ಪಡೆದ ರಾಜನಾಥ್ ಸಿಂಗ್, ಗಡಿ ಸಂರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು.

ಚಳಿಗಾಲ ಎದುರಿಸಿ ಗಡಿ ಕಾಯಲಿದ್ದೇವೆ: ಸಂಸದೀಯ ಸಮಿತಿಗೆ ಸೇನೆಯ ಭರವಸೆ!

ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಭಾಗವಹಿಸಿದ್ದು, ಸೇನಾ ಕಾರ್ಯತಂತ್ರಗಳ ಕುರಿತು ಸೂಕ್ತ ಸಲಹೆಗಳನ್ನು ನೀಡಿದರು ಎನ್ನಲಾಗಿದೆ.



ಚೀನಾಗೆ ತಲೆನೋವು ತಂದಿಟ್ಟ ಭಾರತದ ಸಿದ್ಧತೆ!
ಚೀನಾಗೆ ತಲೆನೋವು ತಂದಿಟ್ಟ ಭಾರತದ ಸಿದ್ಧತೆ!

ಭಾರತದಿಂದ ಅಂತಹ ಆಕ್ರಮಣಕಾರಿ ಪ್ರತಿಕ್ರಿಯೆಯನ್ನೇನು ನಿರೀಕ್ಷಿಸಿರದ ಚೀನಾ, ಗಡಿಯಲ್ಲಿ ಭಾರತೀಯ ಸೇನೆಯ ಸಿದ್ಧತೆ ಕಂಡು ಬೆಚ್ಚಿ ಬಿದ್ದಿದೆ. ಚಳಿಗಾಲದಲ್ಲೂ ಲಡಾಖ್ ಗಡಿಯಲ್ಲಿ ಸೈನ್ಯ ನಿಯೋಜನೆ ಮಾಡುವುದಾಗಿ ಭೂಸೇನೆ ತಿಳಿಸಿದೆ. ಅದರಂತೆ ವಾಯುಸೇನೆ ಕೂಡ ತನ್ನ ಹಲವು ಯುದ್ಧ ವಿಮಾನಗಳನ್ನು ಲಡಾಖ್ ಗಡಿಯಲ್ಲಿ ನಿಯೋಜನೆ ಮಾಡಿದೆ.

ಇಷ್ಟೇ ಅಲ್ಲದೇ ಚೀನಾದ ವಾಯುನೆಲೆಗಳ ಚಲನವಲಗಳ ಮೇಲೂ ಭಾರತ ಕಣ್ಣಿಟ್ಟಿದ್ದು, ಚೀನಾವನ್ನು ಚಿಂತೆಗೀಡು ಮಾಡಿದೆ. ಭಾರತದ ಸಿದ್ಧತೆಗಳನ್ನು ಡ್ರ್ಯಾಗನ್ ಹೌಹಾರಿದೆ.

ಪಶ್ಚಿಮ ಗಡಿಗೆ ತೇಜಸ್ ಫೈಟರ್ ಜೆಟ್ ನಿಯೋಜನೆ: ಪಾಕ್-ಚೀನಾ ಎರಡಕ್ಕೂ ಶಾಕ್ ಕೊಟ್ಟ ವಾಯುಸೇನೆ!

ಒಟ್ಟಿನಲ್ಲಿ ಈ ಎಲ್ಲಾ ಬೆಳವಣಿಗೆಗಳ ಕುರಿತು ಚರ್ಚಿಸಲು ಆರ್ಮಿ ಕಮಾಂಡರ್ ವಿಶೇಷ ಸಭೆ ನಡೆದಿದ್ದು, ಮುಂದಿನ ಕಾರ್ಯತಂತ್ರಗಳ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.





from India & World News in Kannada | VK Polls https://vijaykarnataka.com/news/india/top-army-commanders-special-meeting-to-discuss-security-situation-in-lac/articleshow/77701970.cms

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...