ನವದೆಹಲಿ: ನಾಳೆ(ಸೋಮವಾರ) ಪಕ್ಷದ ಕಾರ್ಯಕಾರಣಿ ಸಭೆ(CWC) ನಡೆಯಲಿದ್ದು, ಈ ವೇಳೆ ಪಕ್ಷಕ್ಕೆ ಸೂಕ್ತ ನೀಡುವ ಕುರಿತು 20 ಧುರೀನರು ಬರೆದಿರುವ ಪತ್ರದ ಕುರಿತು ಚರ್ಚೆ ಮಾಡಲಾಗುವುದು ಎನ್ನಲಾಗಿದೆ. ಪಕ್ಷದ ಆಂತರಿಕ ಬೇಗುದಿ ಹಾಗೂ ನಾಯಕತ್ವದ ಕುರಿತು ಸುಮಾರು 20 ಹಿರಿಯ ನಾಯಕರು, ಕಾಂಗ್ರೆಸ್ ಮುಖ್ಯಸ್ಥೆ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದ್ದು, ನಾಳಿನ ಸಭೆಯಲ್ಲಿ ಈ ಕುರಿತು ಚರ್ಚೆ ಮಾಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ನಾಳೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ವರ್ಚುವಲ್ ಸಭೆ ಕರೆಯಲಾಗಿದ್ದು, ಪ್ರಸಕ್ತ ರಾಜಕೀಯ ಬೆಳವಣಿಗೆಗಳು ಹಾಗೂ ಪಕ್ಷದ ಭವಿಷ್ಯದ ದಾರಿಯ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಈಗಷ್ಟೇ ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನಿಂದ ಹೊರ ಬಂದಿರುವ ಕಾಂಗ್ರೆಸ್, ಎಲ್ಲರನ್ನೂ ಒಟ್ಟುಗೂಡಿಸಿ ಸಾಗಬೇಕಾದ ಅನಿವಾfಯತೆಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ನಾಳಿನ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಪ್ರಮುಖವಾಗಿ ಪಕ್ಷಕ್ಕೆ ಸೂಕ್ತ ಹಾಗೂ ಖಾಯಂ ನಾಯಕತ್ವ ನೀಡಲು ಹಲವು ಧುರೀಣರು ಆಗ್ರಹಿಸುತ್ತಿದ್ದು, ರಾಹುಲ್ ಗಾಂಧಿ ಅವರನ್ನೇ ಪಕ್ಷದ ಮುಖ್ಯಸ್ಥರನ್ನಾಗಿ ಮರು ಆಯ್ಕೆ ಮಾಡಬೇಕು ಎಂದು ಒಂದು ಬಣ ವಾದಿಸುತ್ತಿದೆ. ಪಕ್ಷದ ನಾಯಕತ್ವ ಬದಲಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ನ 100ಕ್ಕೂ ಹೆಚ್ಚು ನಾಯಕರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು ಎಂಬ ಉಚ್ಛಾಟಿತ ನಾಯಕ ಸಂಜಯ್ ಝಾ ಹೇಳಿಕೆಯನ್ನು ಪಕ್ಷ ಈಗಾಗಲೇ ತಿರಸ್ಕರಿಸಿದೆ. ಕಳೆದ ಬಾರಿ ನಡೆದ ವರ್ಚುವಲ್ ಸಭೆಯಲ್ಲಿ ಪಕ್ಷದ ಇಂದಿನ ಕಳಪೆ ಸ್ಥಿತಿಗೆ ಹಿರಿಯ ನಾಯಕರು ಹಾಗೂ ಯುಪಿಎ ಉನ್ನತ ನಾಯಕತ್ವವೇ ಕಾರಣ ಎಂದು ಕಿರಿಯ ನಾಯಕರು ನೇರ ಆರೋಪ ಮಾಡಿದ್ದರು. ಆಂತರಿಕ ಬೇಗುದಿ ನಡುವೆಯೇ ನಾಳೆ(ಸೋಮವಾರ) ಕಾಂಗ್ರೆಸ್ ನಡೆಯಲಿದ್ದು, ಏನು ನಿರ್ಣಯ ಹೊರಬೀಳಲಿದೆ ಎಂಬ ಕುತೂಹಲ ಮನೆ ಮಾಡಿದೆ.
from India & World News in Kannada | VK Polls https://ift.tt/3laXWUI