ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸದ ಪದಾಧಿಕಾರಿಗಳ ಪಟ್ಟಿ !

ಬೆಂಗಳೂರು: ಬಹುನಿರೀಕ್ಷಿತ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಬಳಿಕ ಬಿಜೆಪಿಯಲ್ಲಿಮೌನ ಸೃಷ್ಟಿಯಾಗಿದ್ದು, ಪಕ್ಷದಲ್ಲಿಉತ್ಸಾಹ ಹಾಗೂ ಹುಮ್ಮಸ್ಸು ಅಷ್ಟೇನೂ ಕಾಣಿಸಿಕೊಂಡಿಲ್ಲ.ಎಲ್ಲ ದೃಷ್ಟಿಯಿಂದಲೂ ಸಮತೋಲನ ಕಾಯ್ದುಕೊಳ್ಳುವ ಪಟ್ಟಿಯ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ಈ ಪಟ್ಟಿ ಒಂದು ಕಡೆ ವಾಲಿದ ಅನುಭವ ನೀಡುತ್ತಿದೆ. ಹಿರಿಯ ಉಪಾಧ್ಯಕ್ಷರ ಪಟ್ಟಿಯಲ್ಲಿಸ್ಥಾನ ಪಡೆದ ಕೆಲವರಿಗೆ ಔಪಚಾರಿಕತೆ ದೃಷ್ಟಿಯಿಂದಲೂ ನಿಮ್ಮನ್ನು ಪಕ್ಷದ ಸೇವೆಗೆ ನಿಯೋಜನೆಗೊಳಿಸುತ್ತೇವೆ ಎಂದು ಹೇಳಿಲ್ಲಎಂಬ ಆಕ್ಷೇಪವಿದೆ. ಒಟ್ಟಾರೆಯಾಗಿ ಹೊಸ ಪಟ್ಟಿಯ ಬಗ್ಗೆ ಯಾರಿಗೂ ಸಂತೋಷವಿಲ್ಲದಂತಾಗಿದೆ. ಬೆಂಗಳೂರಿಗೇ ಆದ್ಯತೆ, ರಣಜಿ ಬಿ ಟೀಂ! ಮುಖ್ಯವಾಗಿ ಈ ಪಟ್ಟಿ ಚುನಾವಣೆ ಗೆಲ್ಲುವ ತಂಡವಲ್ಲಎಂದು ವ್ಯಾಖ್ಯಾನಿಸಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪರಿಚಿತವಾದ ಮುಖಗಳ ಸಂಖ್ಯೆ ಕಡಿಮೆ ಇದೆ. 'ರಣಜಿ- ಬಿ ಟೀಂ' ಎಂಬ ಕುಹಕ ಪಕ್ಷದ ಒಳಗಿನಿಂದಲೇ ಕೇಳಿ ಬರುತ್ತಿದೆ. ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ, ರವಿಕುಮಾರ್‌, ಪ್ರತಾಪ್‌ ಸಿಂಹ, ಬಿ.ವೈ.ವಿಜಯೇಂದ್ರ, ತೇಜಸ್ವಿನಿ ಅನಂತಕುಮಾರ್‌, ಮಾಲೀಕಯ್ಯ ಗುತ್ತೇದಾರ್‌ ಹೊರತುಪಡಿಸಿದರೆ ಇಡೀ ರಾಜ್ಯಕ್ಕೆ ಪರಿಚಿತವಾದ ಮುಖ ಈ ಪಟ್ಟಿಯಲ್ಲಿಇಲ್ಲ. ಪದಾಧಿಕಾರಿಗಳ ಪಟ್ಟಿಯಲ್ಲಿಪ್ರಾದೇಶಿಕ ಅಸಮತೋಲನ ಸೃಷ್ಟಿಯಾಗಿದ್ದು, ಬೆಂಗಳೂರಿಗೆ ಅತಿ ಎನ್ನಿಸುವಷ್ಟು ಪ್ರಾಶಸ್ತ್ಯ ನೀಡಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. 10 ಉಪಾಧ್ಯಕ್ಷರ ಪೈಕಿ ಅರವಿಂದ ಲಿಂಬಾವಳಿ, ನಿರ್ಮಲ್‌ ಕುಮಾರ್‌ ಸುರಾನಾ, ತೇಜಸ್ವಿನಿ ಅನಂತಕುಮಾರ್‌, ಬಿ.ವೈ.ವಿಜಯೇಂದ್ರ, ಎಂ. ಶಂಕರಪ್ಪ ಬೆಂಗಳೂರಿನವರು. ಪ್ರಧಾನ ಕಾರ್ಯದರ್ಶಿಗಳ ಪೈಕಿ ಅಶ್ವತ್ಥನಾರಾಯಣ, ಕಾರ್ಯದರ್ಶಿಗಳ ಪೈಕಿ ಸತೀಶ್‌ ರೆಡ್ಡಿ, ತುಳಸಿ ಮುನಿರಾಜುಗೌಡ, ಕೇಶವ ಪ್ರಸಾದ್‌, ಖಜಾಂಜಿಗಳಾದ ಸುಬ್ಬನರಸಿಂಹ, ಲೆಹರ್‌ಸಿಂಗ್‌, ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್‌ ಅಂಬೆಕಲ್ಲುಬೆಂಗಳೂರು ಕೋಟಾದಲ್ಲಿಆಯ್ಕೆಯಾಗಿದ್ದಾರೆ. ಇನ್ನೂ ಯುವ ಮೋರ್ಚಾ ಅಧ್ಯಕ್ಷ ಡಾ. ಸಂದೀಪ್‌, ಮಹಿಳಾ ಮೋರ್ಚಾದ ಗೀತಾ ವಿವೇಕಾನಂದ, ಎಸ್‌ಸಿ ಮೋರ್ಚಾದ ಚಲವಾದಿ ನಾರಾಯಣಸ್ವಾಮಿ, ಅಲ್ಪಸಂಖ್ಯಾತ ಮೋರ್ಚಾದ ಮುಜ್ಹಾಮಿಲ್‌ ಬಾಬು ಬೆಂಗಳೂರಿನವರಾಗಿದ್ದಾರೆ.


from India & World News in Kannada | VK Polls https://ift.tt/2EIyiWD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...