ಭಾರತ vs ವೆಸ್ಟ್ಇಂಡೀಸ್ ಮೊದಲ ಟಿ20 ಪಂದ್ಯ ಮುಂಬಯಿನಿಂದ ಶಿಫ್ಟ್?

ಮುಂಬಯಿ: ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವಣ ಮೊದಲ ಟ್ವೆಂಟಿ-20 ಪಂದ್ಯ ಡಿಸೆಂಬರ್ 6ರಂದು ವಾಂಖೆಡೆ ಮೈದಾನದಲ್ಲಿ ನಿಗದಿಯಾಗಿದೆ. ಆದರೆ ಕಾರಣಾಂತರಗಳಿಂದಾಗಿ ಮೊದಲ ಟಿ20 ಪಂದ್ಯವು ವಾಣಿಜ್ಯ ನಗರಿ ಮುಂಬಯಿಯಿಂದ ಸ್ಥಳಾಂತರವಾಗುವ ಎಲ್ಲ ಲಕ್ಷ್ಮಣಗಳು ಕಾಣಿಸುತ್ತಿದೆ. ಭಾರತ ಹಾಗೂ ವೆಸ್ಟ್‌ಇಂಡೀಸ್ ಕದನಕ್ಕೆ ಸೂಕ್ತ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಮುಂಬೈ ಪೊಲೀಸ್ ಹೇಳಿಕೆ ನೀಡಿರುವುದು ಹಿನ್ನಡೆಗೆ ಕಾರಣವಾಗಿದೆ. ಡಿಸೆಂಬರ್ 6ರಂದು ಭಾರತದ ಸಂವಿಧಾನ ಶಿಲ್ಪಿ ಬಿಆರ್ ಅಂಬೇಡ್ಕರ್ ಪುಣ್ಯತಿಥಿ ಆಚರಣೆ ನಡೆಸಲಾಗುತ್ತಿದೆ. ಇದರಂತೆ ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿರುವ ಚೈತ್ಯಭೂಮಿಯಲ್ಲಿ ದೊಡ್ಡ ಸಂಖ್ಯೆಯ ಜನರು ಜಮಾಯಿಸಲಿದ್ದು, ಬೃಹತ್ ಕಾರ್ಯಕ್ರಮ ನಡೆಯಲಿದೆ. ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ 27 ವರ್ಷಗಳು ತುಂಬಿಕೊಳ್ಳುತ್ತಿದೆ. ಇದರಂತೆ ನಗರದಲ್ಲಿ ಕೋಮು ಗಲಭೆ ನಡೆಯದಂತೆ ಎಚ್ಚರಿಕೆ ವಹಿಸಲಿರುವ ಮುಂಬೈ ಪೊಲೀಸ್ ಹೆಚ್ಚಿನ ಭದ್ರತೆಯನ್ನು ಒದಗಿಸಲು ಮುಂದಾಗಿದೆ. ಈ ಎಲ್ಲದರಿಂದಾಗಿ ಭಾರತ ಹಾಗೂ ವೆಸ್ಟ್‌ಇಂಡೀಸ್ ಪಂದ್ಯಕ್ಕೆ ಸೂಕ್ತ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಮುಂಬೈ ಪೊಲೀಸ್ ಸ್ಪಷ್ಟಪಡಿಸಿದೆ. ಅಲ್ಲದೆ ಪಂದ್ಯವನ್ನು ಬೇರೆಡೆಗೆ ವರ್ಗಾಯಿಸುವಂತೆ ಮುಂಬೈ ಕ್ರಿಕೆಟ್ ಅಕಾಡೆಮಿಗೆ (ಎಂಸಿಎ) ವಿನಂತಿಸಿಕೊಂಡಿದೆ. ಇದೇ ವೇಳೆಯಲ್ಲಿ ಪಂದ್ಯವನ್ನು ಬೇರೆ ದಿನಾಂಕದಲ್ಲೂ ಆಯೋಜಿಸುವಂತೆ ಕೋರಿಕೊಳ್ಳಲಾಗಿದೆ. ಇದರಿಂದಾಗಿ ಮುಂಬಯಿಗೆ ಆತಿಥ್ಯ ವಹಿಸಲು ಸಾಧ್ಯವೇ ಎಂಬುದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಂತಿಮ ನಿರ್ಧಾರ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಭಾರತ ಪ್ರವಾಸದಲ್ಲಿ ವೆಸ್ಟ್‌ಇಂಡೀಸ್ ತಲಾ ಮೂರು ಪಂದ್ಯಗಳ ಟ್ವೆಂಟಿ-20 ಹಾಗೂ ಏಕದಿನ ಸರಣಿಯಲ್ಲಿ ಭಾಗವಹಿಸಲಿದೆ. ಟಿ20 ಸರಣಿಯು ಮುಂಬೈ (ಡಿ.6), ತಿರುವನಂತಪುರ (ಡಿ.8) ಮತ್ತು ಹೈದರಾಬಾದ್‌ನಲ್ಲಿ (ಡಿ.11) ನಿಗದಿಯಾಗಿದೆ. ಹಾಗೆಯೇ ಏಕದಿನ ಸರಣಿಯು ಚೆನ್ನೈ (ಡಿ. 15), ವಿಶಾಖಪಟ್ಟಣ (ಡಿ.18) ಮತ್ತು ಕಟಕ್‌ನಲ್ಲಿ (ಡಿ.22) ನಡೆಯಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/35np9dY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...