ಹೊಸದಿಲ್ಲಿ: ವಿರುದ್ಧದ ಟೆಸ್ಟ್ ಸರಣಿ ವೇಳೆ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಒಂದು ಪಂದ್ಯ ಆಡದಂತೆ ಬ್ಯಾನ್ ಆಗಲು ಅಂದಿನ ಕೋಚ್ ಕಾರಣವಂತೆ. ಈ ಸತ್ಯವನ್ನು ಖುದ್ದಾಗಿ ಗೌತಮ್ ಗಂಭೀರ್ ಬಾಯ್ಬಿಟ್ಟಿದ್ದಾರೆ. 2007ರ ಟಿ20 ಕ್ರಿಕೆಟ್ ವಿಶ್ವಕಪ್ ಮತ್ತು 2011ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡುವಲ್ಲು ಗಂಭೀರ್ ಮಹತ್ವದ ಪಾತ್ರ ವಹಿಸಿದ್ದರು. ಎರಡೂ ಫೈನಲ್ಗಳಲ್ಲಿ ಭಾರತದ ಪರ ಗಂಭೀರ್ ಗರಿಷ್ಠ ರನ್ ಸ್ಕೋರರ್ ಆಗಿದ್ದರು. 2018ರಲ್ಲಿ ಗಂಭೀರ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಪ್ರಕಟಿಸಿದರು. ಗಂಭೀರ್, ಕ್ರಿಕೆಟ್ನಿಂದ ದೂರ ಉಳಿದು ರಾಜಕೀಯ ವೃತ್ತಿ ಬದುಕಿನ ಕಡೆಗೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಇದೇ ವೇಳೆ ತಮ್ಮ ಹಲವು ಹೇಳಿಕೆಗಳ ಮೂಲಕ ಎಡಗೈ ಬ್ಯಾಟ್ಸ್ಮನ್ ಆಗಿಂದ್ದಾಗೆ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಹೊಸ ಸೇರ್ಪಡೆಯಾಗಿ ತಾವು ಒಂದು ಪಂದ್ಯ ಬ್ಯಾನ್ ಶಿಕ್ಷೆ ಎದುರಿಸಲು ಭಾರತ ತಂಡದ ಅಂದಿನ ಕೋಚ್ ಗ್ಯಾರಿ ಕರ್ಸ್ಟನ್ ಕಾರಣ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಕರ್ಸ್ಟನ್ ಮಾರ್ಗದರ್ಶನದಲ್ಲಿ ಭಾರತ ತಂಡ 2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿ ಗೆದ್ದಿತ್ತು. 2008ರಲ್ಲಿ ನಡೆದ ಘಟನೆ ಆಸ್ಟ್ರೇಲಿಯಾ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಸಲುವಾಗಿ ಭಾರತ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ 3 ಪಂದ್ಯಗಳ ಸರಣಿಯ ಅಂತಿಮ ಪಂದ್ಯದಲ್ಲಿ ಗಂಭೀರ್ ಆಡದಂತೆ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಈ ಸಂದರ್ಭದಲ್ಲಿ ಗಂಭೀರ್ ತಮ್ಮ ವೃತ್ತಿ ಬದುಕಿನ ಸರ್ವಶ್ರೇಷ್ಠ ಬ್ಯಾಟಿಂಗ್ ಲಯದಲ್ಲಿದ್ದರು. ಹೀಗಾಗಿ ಗಂಭೀರ್ ಆತ್ಮವಿಶ್ವಾಸ ಕುಗ್ಗಿಸಲು ಆಸ್ಟ್ರೇಲಿಯಾ ಆಟಗಾರರು ಸ್ಲೆಡ್ಜಿಂಗ್ ಅಸ್ತ್ರದ ಬಳಕೆ ಮಾಡಿದ್ದರು. ಈ ಸಂದರ್ಭದಲ್ಲಿ ತಿರುಗೇಟು ನೀಡುವ ಭರದಲ್ಲಿಆಸೀಸ್ ಆಲ್ರೌಂಡರ್ ಶೇನ್ ವಾಟ್ಸನ್ಗೆ ಭುಜದಿಂದ ಗುದ್ದಿದ್ದರು. ಬಳಿಕ ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್, ಐಸಿಸಿ ನೀತಿಸಂಹಿತೆಯ ಅಡಿಯಲ್ಲಿ ಗಂಭೀರ್ ತಪ್ಪು ಮಾಡಿರುವುದನ್ನು ಪರಿಗಣಿಸಿ ಒಂದು ಪಂದ್ಯ ನಿಷೇಧ ಶಿಕ್ಷೆ ವಿಧಿಸಿದ್ದರು. ಗಂಭೀರ್ ಬ್ಯಾನ್ ಆಗಲು ಕರ್ಸ್ಟನ್ ಕಾರಣ! " ಹಿರಿಯ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ, ತಪ್ಪನ್ನು ಒಪ್ಪಿಕೊಳ್ಳದೆ ಆರೋಪವನ್ನು ತಳ್ಳಿಹಾಕುವಂತೆ ಸಲಹೆ ನೀಡಿದ್ದರು. ಅಂತೆಯೇ ಮ್ಯಾಚ್ ರೆಫ್ರಿ ಕೊಠಡಿಗೆ ತೆರಳುತ್ತಿದ್ದೆ. ಮಾರ್ಗ ಮಧ್ಯದಲ್ಲಿ ಕರ್ಸ್ಟನ್ ಎದುರಾಗಿ ಎಲ್ಲ ತಪ್ಪುಗಳನ್ನು ಒಪ್ಪಿಕೊಳ್ಳುವಂತೆ ಮನವೊಲಿಸಿದರು. ಮ್ಯಾಚ್ ರೆಫ್ರೆ ಒಳ್ಳೆಯ ವ್ಯಕ್ತಿ ತಪ್ಪು ಒಪ್ಪಿಕೊಂಡರೆ ಗಂಭೀರ ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದರು. ಅಂತೆಯೇ ಎಲ್ಲಾ ತಪ್ಪುಗಳನ್ನು ಒಪ್ಪಿಕೊಂಡೆ. ಮರುದಿನ ಒಂದು ಪಂದ್ಯ ನಿಷೇಧದ ಸುದ್ದಿ ಹೊರಬಂದಿತ್ತು," ಎಂದು ಗಂಭೀರ್ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದರಿಂದಾಗಿ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಗಂಭೀರ್ ಆಡದಂತೆ ಆದರೂ, ಆಡಿದ ಎರಡು ಪಂದ್ಯಗಳಲ್ಲಿ 2 ಶತಕ ಮತ್ತು 1 ಅರ್ಧಶತಕವನ್ನು ಒಳಗೊಂಡ ಒಟ್ಟು 463 ರನ್ಗಳನ್ನು ಬಾರಿಸಿ ಸರಣಿಯಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/34H7AG9