ಕೋಲ್ಕೊತಾ: ಇದೇ ಮೊದಲ ಬಾರಿಗೆ ಭಾರತೀಯ ಕ್ರಿಕೆಟ್ ತಂಡವು ಹೊನಲು ಬೆಳಕಿನ ಟೆಸ್ಟ್ ಕ್ರಿಕೆಟ್ನಲ್ಲಿ ಆಡಲು ಸಜ್ಜಾಗಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಣ ಎರಡನೇ ಟೆಸ್ಟ್ ಪಂದ್ಯವು ಕೋಲ್ಕೊತಾದ ಈಡನ್ ಗಾರ್ಡನ್ ಮೈದಾನದಲ್ಲಿ ನವೆಂಬರ್ 22ರಂದು ಆರಂಭವಾಗಲಿದೆ. ಇತ್ತಂಡಗಳು ಇದೇ ಮೊದಲ ಬಾರಿಗೆ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸುತ್ತಿದೆ. ಇದರಂತೆ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ನಾಯಕ , ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಪಂದ್ಯ ಸವಾಲಿನಿಂದ ಕೂಡಿರಲಿದೆ. ಹೊನಲು ಬೆಳಕಿನ ಟೆಸ್ಟ್ ಕ್ರಿಕೆಟ್ ಆಡಲು ಉತ್ಯಂತ ಉತ್ಸುಕರಾಗಿದ್ದು, ಹೆಚ್ಚಿನ ಹುರುಪಿನಿಂದ ಕಾದು ನೋಡುತ್ತಿದ್ದೇವೆ ಎಂದಿದ್ದಾರೆ. ಕೊಹ್ಲಿ ಪ್ರಕಾರ, ಚೆಂಡಿನ ಬಣ್ಣವು ವಿಭಿನ್ನವಾಗಿರುವುದರಿಂದ ಫೀಲ್ಡಿಂಗ್ ಅತಿ ಹೆಚ್ಚು ಸವಾಲಿನಿಂದ ಕೂಡಿರಲಿದೆ ಎಂದಿದ್ದಾರೆ. ಗುಲಾಬಿ ಚೆಂಡಿನಾಟದಲ್ಲಿ ಫೀಲ್ಡಿಂಗ್ ದೊಡ್ಡ ಸವಾಲಾಗಿರಲಿದೆ. ಚೆಂಡು ಭಾರವಿಲ್ಲದಿದ್ದರೂ ಹೆಚ್ಚು ಭಾರವಿದ್ದಂತೆ ಭಾಸವಾಗುತ್ತಿದೆ. ಸ್ಲಿಪ್ನಲ್ಲಿ ಕ್ಯಾಚಿಂಗ್ ವೇಳೆಯಲ್ಲಿ ನೇರವಾಗಿ ಕೈಗಳಿಗೆ ಅಪ್ಪಳಿಸುತ್ತಿದೆ. ಬೌಂಡರಿ ಗೆರೆಯಿಂದ ಥ್ರೋ ಮಾಡುವಾಗಲೂ ಹೆಚ್ಚಿನ ಶಕ್ತಿ ಪ್ರಯೋಗಿಸಬೇಕಿದೆ ಎಂಬ ಭಾವನೆ ಫೀಲ್ಡರ್ಗಳಲ್ಲಿ ಮೂಡುತ್ತಿದೆ ಎಂದು ವಿವರಿಸಿದರು. ನಿಸ್ಸಂಶವಾಗಿಯೂ ಇದೊಂದು ವಿಭಿನ್ನ ಬಾಲ್ ಗೇಮ್ ಆಗಿದೆ. ಅಭ್ಯಾಸ ಅವಧಿಯ ವೇಳೆಯಲ್ಲೂ ಚೆಂಡು ಹೇಗೆ ಸ್ವಿಂಗ್ ಹಾಗೂ ತಿರುವು ಪಡೆದುಕೊಳ್ಳುತ್ತಿದೆ ಎಂಬುದನ್ನು ಮೇಲೆ ಗಮನ ಹರಿಸಿದ್ದೆವು. ಹಾಗಾಗಿ ದೇಹದ ಸಮೀಪದಿಂದ ಆಡಲು ಯತ್ನಿಸಿದೆವು. ರೆಡ್ ಬಾಲ್ಗೆ ಹೋಲಿಸಿದಾಗ ಪಿಂಕ್ ಬಾಲ್ ತುಂಬಾನೇ ತಿರುವು ಪಡೆದುಕೊಳ್ಳುತ್ತಿದೆ. ಹಾಗಾಗಿ ಸ್ವಲ್ಪ ತಡವಾಗಿ ಶರೀರಕ್ಕೆ ಹತ್ತಿರದಿಂದ ಆಡುವುದು ಸೂಕ್ತ ಎಂದು ತಿಳಿಸಿದರು. ಪಿಕ್ ಬಾಲ್ನಲ್ಲಿ ನಾವು ಕ್ರಿಕೆಟ್ ಆಡಿಲ್ಲ. ಹಾಗಾಗಿ ಗುಲಾಬಿ ಚೆಂಡಿಗೆ ಹೊಂದಿಕೊಳ್ಳಲು ಹೆಚ್ಚು ತಂತ್ರಗಾರಿಕೆಯ ಅಗತ್ಯವಿದೆ ಎಂದು ಸೇರಿಸಿದರು. ಅದೇ ಹೊತ್ತಿಗೆ ದಿನದಾಟದ ಕೊನೆಯ ಅವಧಿಯಲ್ಲಿ ಇಬ್ಬರಿ ಫಾಕ್ಟರ್ ಆವರಿಸಲಿರುವುದರಿಂದ ಹೆಚ್ಚು ಸವಾಲಿನಿಂದ ಕೂಡಿರಲಿದೆ ಎಂದು ಉಲ್ಲೇಖಿಸಿದರು. ಅಹರ್ನಿಶಿ ಟೆಸ್ಟ್ ಪಂದ್ಯದ ಎಲ್ಲ ನಾಲ್ಕು ದಿನಗಳ ಟಿಕೆಟ್ಗಳು ಮಾರಾಟವಾಗಿದೆ. ವಿರಾಟ್ ಕೊಹ್ಲಿ ಸಹ ಕಿಕ್ಕಿರಿದು ತುಂಬಲಿರುವ ಸ್ಟೇಡಿಯಂ ಬಗ್ಗೆ ಅತೀವ ಉತ್ಸಾಹಿತರಾಗಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2s20GMZ