ಸೂರತ್: ಸ್ಟಾರ್ ಬ್ಯಾಟ್ಸ್ಮನ್ಗಳಾದ (0) ಮತ್ತು ಮನೀಶ್ ಪಾಂಡೆ (4) ವೈಫಲ್ಯ ಮತ್ತು ಬೌಲರ್ಗಳ ನೀರಸ ಪ್ರದರ್ಶನದಿಂದ ಕಂಗಾಲಾದ ತಂಡ, ಇಲ್ಲಿ ನಡೆದ ಟಿ20 ಕ್ರಿಕೆಟ್ ಟೂರ್ನಿಯ ಹಂತದಲ್ಲಿ ಮೊದಲ ಸೋಲಿನ ಆಘಾತಕ್ಕೊಳಗಾಗಿದೆ. ಇಲ್ಲಿನ ಸಿಬಿ ಪಟೇಲ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ 19 ರನ್ ಗಳಿಸುವ ಹೊತ್ತಿಗಾಗಲೇ ರಾಹುಲ್, ಪಾಂಡೆ ಮತ್ತು ಕರುಣ್ ನಾಯರ್ (8) ಅವರಂತಹ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಯುವ ಆಟಗಾರರಾದ ದೇವದತ್ ಪಡಿಕ್ಕಲ್ (57) ಮತ್ತು ರೋಹನ್ ಕದಮ್ (71) ಆಸರೆಯಾಗಿ ನಿಂತು ತಂಡವನ್ನು ಮೇಲೆತ್ತಿದರು. ಪ್ರಸಕ್ತ ಸಾಲಿನಲ್ಲ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಸಮಗ್ರವಾಗಿ 1000ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿರುವ 20 ವರ್ಷದ ತಾರೆ ದೇವದತ್, ಬಿರುಸಿನ ಬ್ಯಾಟಿಂಗ್ ನಡೆಸಿ 34 ಎಸೆತಗಳಲ್ಲಿ ತಲಾ 4 ಫೋರ್ ಮತ್ತು ಸಿಕ್ಸರ್ಗಳೊಂದಿಗೆ 57 ರನ್ ಚೆಚ್ಚಿದರು. ಮತ್ತೊಂದು ತುದಿಯಲ್ಲಿ ಮುಂಬೈ ಬೌಲರ್ಗಳ ಬೆವರಿಳಿಸಿದ ರೋಹನ್, 47 ಎಸೆತಗಳಲ್ಲಿ 7 ಫೋರ್ ಮತ್ತು 3 ಸಿಕ್ಸರ್ ಸೇರಿದ 71 ರನ್ಗಳನ್ನು ಬಾರಿಸಿದರು. ಯುವ ಬ್ಯಾಟ್ಸ್ಮನ್ಗಳ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ ತನ್ನ 20 ಓವರ್ಗಳಲ್ಲಿ 6 ವಿಕೆಟ್ಗೆ 171 ರನ್ಗಳ ಸವಾಲಿನ ಮೊತ್ತ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಮುಂಬೈ ತಂಡ ನಾಯಕ ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇನ್ನೊಂದು ಓವರ್ ಬಾಕಿ ಇರುವಾಗಲೇ 3 ವಿಕೆಟ್ ನಷ್ಟದಲ್ಲಿ 174 ರನ್ ಬಾರಿಸಿ ಸುಲಭ ಜಯ ದಾಖಲಿಸಿತು. ಈ ಮೂಲಕ ಸೂಪರ್ ಲೀಗ್ನಲ್ಲಿ ಆಡಿದ ತನ್ನ ಮೂರನೇ ಪಂದ್ಯದಲ್ಲಿ 2ನೇ ಜಯದ ಸಿಹಿಯುಂಡಿತು. ಕರ್ನಾಟಕ ಬೌಲರ್ಗಳ ಮೇಲೆ ಸಿಡಿಲಿನಂತೆ ಅಪ್ಪಳಿಸಿದ ಸೂರ್ಯಕುಮಾರ್, 53 ಎಸೆತಗಳಲ್ಲಿ 11 ಫೋರ್ ಮತ್ತು 4 ಸಿಕ್ಸರ್ಗಳನ್ನು ಒಳಗೊಂಡ ಅಜೇಯ 94 ರನ್ಗಳನ್ನು ಬಾರಿಸಿ ಜಯದ ರೂವಾರಿ ಎನಿಸಿದರು. ಇದಕ್ಕೂ ಮುನ್ನ ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ, 17 ಎಸೆತಗಳಲ್ಲಿ 3 ಫೋರ್ ಮತ್ತು 2 ಸಿಕ್ಸರ್ ಸೇರಿದ 30 ರನ್ ಬಾರಿಸಿ ಉತ್ತಮ ಆರಂಭ ಒದಗಿಸಿಕೊಟ್ಟರು. ಆಲ್ರೌಂಡರ್ ಶಿವಂ ದುಬೇ 18 ಎಸೆತಗಳಲ್ಲಿ 22 ರನ್ಗಳನ್ನು ಗಳಿಸಿ ಅಜೇಯರಾಗಿ ಉಳಿದರು. ಸಂಕ್ಷಿಪ್ತ ಸ್ಕೋರ್ ಕರ್ನಾಟಕ: 20 ಓವರ್ಗಳಲ್ಲಿ 6 ವಿಕೆಟ್ಗೆ 171 (ದೇವದತ್ ಪಡಿಕ್ಕಲ್ 57, ರೋಹನ್ ಕದಮ್ 71; ಶಾರ್ದುಲ್ ಠಾಕೂರ್ 29ಕ್ಕೆ 2, ಶಿವಂ ದುಬೇ 39ಕ್ಕೆ 2). ಕರ್ನಾಟಕ: 19 ಓವರ್ಗಳಲ್ಲಿ 3 ವಿಕೆಟ್ಗೆ 174 (ಪೃಥ್ವಿ ಶಾ 30, ಸೂರ್ಯಕುಮಾರ್ ಯಾದವ್ ಅಜೇಯ 94, ಶಿವಂ ದುಬೇ ಔಟಾಗದೆ 22; ಶ್ರೇಯಸ್ ಗೋಪಾಲ್ 19ಕ್ಕೆ 1, ರೋನಿತ್ ಮೋರೆ 41ಕ್ಕೆ 1, ಪ್ರವೀಣ್ ದುಬೇ 32ಕ್ಕೆ 1).
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2OGu9DV