ಬೆಂಗಳೂರು: ಗ್ರಾಮೀಣ ಭಾಗದ ಪ್ರತಿಭಾನ್ವಿತ ಕ್ರಿಕೆಟಿಗರನ್ನು ಹೆಕ್ಕಿತರಲು ಮತ್ತು ಯುವ ಆಟಗಾರರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ವೇದಿಕೆ ಒದಗಿಸಿಕೊಡುವ ಉದ್ದೇಶದಿಂದ ಆರಂಭಿಸಲಾಗಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ()ಯ ಮಹತ್ವಾಕಾಂಕ್ಷೀಯ ಟಿ20 ಕ್ರಿಕೆಟ್ ಟೂರ್ನಿ ಕರ್ನಾಟಕ ಪ್ರೀಮಿಯರ್ ಲೀಗ್ನ ಭವಿಷ್ಯ ಇಂದು ಬೆಂಗಳೂರಿನ ಸಿಸಿಬಿ ಪೊಲೀಸರ ಕೈಲಿದೆ. ಟೂರ್ನಿಯಲ್ಲಿ ಮತ್ತು ಲಂಗು ಲಗಾಮಿಲ್ಲದೆ ನಡೆದಿದೆ ಎಂಬುದನ್ನು ಬೆಂಗಳೂರಿನ ಅಪರಾಧ ವಿಭಾಗದ ಪೊಲೀಸರು ಎಳೆ ಎಳೆಯಾಗಿ ಬಿಡಿಸುತ್ತಿದ್ದು, ಒಂದೊಂದ್ದಾಗಿ ಫ್ರಾಂಚೈಸಿ ಮಾಲೀಕರು ಮತ್ತು ಕಳ್ಳಾಟವಾಡಿದ ಆಟಗಾರರು ಬೆತ್ತೆಲೆಯಾಗುತ್ತಿದ್ದಾರೆ. ಸಿಎಂ ಗೌತಮ್ ಮತ್ತು ಅಬ್ರಾರ್ ಖಾಜಿ ಅವರಂತಹ ರಣಜಿ ಆಟಗಾರರು ಕೂಡ ಸಿಕ್ಕಿ ಬಿದ್ದಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದೆ. ಈ ವಿಚಾರವಾಗಿ ಪೊಲೀಸರ ತನಿಖೆಯ ಅಂತಿಮ ನಿರ್ಧಾರವನ್ನು ಆಧರಿಸಿ ಟೂರ್ನಿಯ ಭವಿಷ್ಯ ನಿರ್ಧಾರ ಮಾಡುವುದಾಗಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಖಜಾಂಚಿ ವಿನಯ್ ಮೃತ್ಯುಂಜಯ ಹೇಳಿದ್ದಾರೆ. "ಟೂರ್ನಿ ಭವಿಷ್ಯದ ಬಗ್ಗೆ ಈಗಲೇ ಏನನ್ನೂ ಹೇಳಲಾಗದು. ಇನ್ನು ಸಮಯವಿದೆ. ಪೊಲೀಸರ ಅಂತಿಮ ತನಿಖಾ ವರದಿ ಹೊರಬರಲಿ. ತನಿಖೆ ಪೂರ್ಣಗೊಳ್ಳುವವರೆಗೂ ನಾವು ಟೂರ್ನಿ ಆಯೋಜಿಸುವುದಿಲ್ಲ," ಎಂದು ಟೂರ್ನಿಯ ಭವಿಷ್ಯ ಕುರಿತಾಗಿ ಸುದ್ದಿ ಸಂಸ್ಥೆ ಕೇಳಿದ ಪ್ರಶ್ನೆಗೆ ವಿನಯ್ ಮೃತ್ಯುಂಜಯ ವಿವರಣೆ ನೀಡಿದ್ದಾರೆ. ಇದೇ ವೇಳೆ ಪೊಲೀಸರು ಕೆಪಿಎಲ್ ಟೂರ್ನಿ ಆಯೋಜನೆಯ ಸಂಪೂರ್ಣ ಮಾಹಿತಿ ನೀಡುವಂತೆ ಕೆಎಸ್ಸಿಎಗೆ ನೋಟಿಸ್ ಜಾರಿಗೊಳಿಸಿದೆ. ಫ್ರಾಂಚೈಸಿಗಳ ವಿವರ, ಫ್ರಾಂಚೈಸಿ ಹೂಡಿಕೆ ಮಾಡಿರುವ ಹಣದ ಮೂಲ ಎಲ್ಲವನ್ನೂ ಪ್ರಶ್ನಿಸಿ ಸೂಕ್ತ ದಾಖಲೆಗಳನ್ನು ನೀಡುವಂತೆ ಸೂಚಿಸಿದೆ. "ಕೆಪಿಎಲ್ ಟೂರ್ನಿ ಕುರಿತಾಗಿ ಪೊಲೀಸರು ಸಾಕಷ್ಟು ಮಾಹಿತಿ ಕೇಳಿದ್ದಾರೆ. ತಂಡಗಳು, ಸ್ಕೋರ್ ವಿವರ, ಎಲ್ಲಾ ಪಂದ್ಯಗಳ ವಿಡಿಯೋಗಳು, ಎಲ್ಲಾ ಆಟಗಾರರ ಮಾಹಿತಿ, ಫೋನ್ ನಂಬರ್ ಎಲ್ಲವನ್ನೂ ಕೇಳಲಾಗಿದೆ," ಎಂದು ವಿನಯ್ ತಿಳಿಸಿದ್ದಾರೆ. ಆಟಗಾರರಿಗೆ ಹನಿಟ್ರ್ಯಾಪ್ - ಮನಿ ಟ್ರ್ಯಾಪ್ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ನಡೆಸಲು ಆಟಗಾರರನ್ನು ಒಲಿಸಿಕೊಳ್ಳಲು ಬುಕೀಗಳು ವಿದೇಶದಿಂದಲೇ ಹನೀ ಟ್ರ್ಯಾಪ್, ಮನಿ ಟ್ರ್ಯಾಪ್ (ಹಣದ ಆಮೀಶ) ಮತ್ತು ವಿದೇಶ ಪ್ರವಾಸದಂತಹ ತಂತ್ರಗಳನ್ನು ಬಳಕೆ ಮಾಡುತ್ತಿದ್ದರು ಎಂಬುದರ ಬಗ್ಗೆ ಕೆಎಸ್ಸಿಎಗೆ ಆಗಲಿ ಅಥವಾ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗಾಗಲಿ ಯಾವುದೇ ಸುಳಿವು ಇರಲಿಲ್ಲ ಎಂದು ಕೆಎಸ್ಸಿಎ ಖಜಾಂಚಿ ತಿಳಿಸಿದ್ದಾರೆ. "ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ಅಧಿಕಾರಿಗಳ ಜೊತೆಗೂ ಈ ಬಗ್ಗೆ ಚರ್ಚಿಸಲಿದ್ದೇನೆ," ಎಂದು ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬಂದು ಆಡುತ್ತಿರುವ ಆಟಗಾರರು ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ನಲ್ಲಿ ಹಣ ಗಳಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಹನಿಟ್ರ್ಯಾಪ್ ಸಲುವಾಗಿ ಚಿಯರ್ ಲೀಡರ್ಸ್ಗಳನ್ನು ಬಳಕೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಲಾಗಿದೆ. "ಈಬಗ್ಗೆ ನಮಗೆ ಗೊತ್ತಿಲ್ಲ. ಪೊಲೀಸರ ಬಳಿ ಮಾಹಿತಿ ಇರಬಹುದು. ಕೆಎಸ್ಸಿಎ ಈವರೆಗೆ ಯಾವುದೇ ಚಿಯರ್ಲೀಡರ್ಗಳನ್ನು ಕರೆತಂದಿಲ್ಲ," ಎಂದಿ ವಿನಯ್ ಹೇಳಿದ್ದಾರೆ. ಹನಿಟ್ರ್ಯಾಪ್ ಬಗ್ಗೆ ಈಗಲೇ ಹೇಳಲಾಗದು ಆಟಗಾರರನ್ನು ಫಿಕ್ಸಿಂಗ್ನಲ್ಲಿ ಪಾಲ್ಗೊಳ್ಳುವಂತೆ ಮಾಡಲು ಹುಡುಗಿಯರನ್ನು ಬಳಕೆ ಮಾಡಿಕೊಳ್ಳಲಾಗಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬೆಂಗಳೂರು ಕೇಂದ್ರ ಅಪರಾದ ವಿಭಾಗದ ಉಪ ಆಯುಕ್ತ ಸಂದೀಪ್ ಪಾಟಿಲ್, "ಈ ಬಗ್ಗೆ ಈಗಲೇ ಏನನ್ನೂ ಹೇಳಲಾಗದು. ಎಲ್ಲವೂ ಸ್ಪಷ್ಟವಾದ ಬಳಿಕ ಹುಡುಗಿಯರನ್ನು ಹನಿಟ್ರ್ಯಾಪ್ ಸಲುವಾಗಿ ಬಳಕ್ಎ ಮಾಡಿದ್ದಾರೆಯೇ ಇಲ್ಲವೇ ಎಂಬುದನ್ನು ತಿಳಿಸಲಿದ್ದೇವೆ," ಎಂದಿದ್ದಾರೆ. ಐಪಿಎಲ್ ಮಾದರಿಯಲ್ಲೇ 2008ರಿಂದ ಕೆಪಿಎಲ್ ಟೂರ್ನಿಯನ್ನು ಆಯೋಜಿಸಲಾಗುತ್ತಿdಎ. ಮಧ್ಯ 3 ವರ್ಷಗಳ ಕಾಲ ಸ್ಥಗಿತ ಗೊಳಿಸಲಾಗಿತ್ತು. 2019ರ ಕೆಪಿಎಲ್ ಟೂರ್ನಿ ಆಗಸ್ಟ್ 16-31ರವರೆಗೆ ನಡೆದಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2rgAPjS