ಮುಂಬಯಿ: ಆರಂಭದಲ್ಲಿ ಬಿಜೆಪಿ ಇವಿಎಂ ಜತೆ ಆಟವಾಡುತ್ತಿದ್ದರು. ಇದೀಗ ಹೊಸ ಆಟ ಶುರುವಿಟ್ಟುಕೊಂಡಿದ್ದಾರೆ. ಇನ್ನು ಮುಂದೆ ಚುನಾವಣೆ ನಡೆಯುತ್ತದೆ ಎಂದು ನನಗನಿಸುತ್ತಿಲ್ಲ. ಮೋಸ ಮಾಡಿದವರಿಗೆ ಮತ್ತು ಹಿಂದಿನಿಂದ ದಾಳಿ ನಡೆಸಿದವರಿಗೆ ಛತ್ರಪತಿ ಶಿವಾಜಿ ಮಹಾರಾಜ ಏನು ಮಾಡಿದ ಎಂಬುದು ಎಲ್ಲಿರಿಗೂ ತಿಳಿದಿದೆ ಎಂದು ಅಬ್ಬರಿಸಿದ್ದಾರೆ. ಮುಂಬಯಿನಲ್ಲಿ ಶಿವಸೇನೆ ಮತ್ತು ಎನ್ಸಿಪಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಬಿಜೆಪಿ ಮಹಾರಾಷ್ಟ್ರದ ಮೇಲೆ ಸರ್ಜಿಕಲ್ ದಾಳಿ ನಡೆಸಿದೆ. ಇದಕ್ಕೆ ಜನರೇ ಪ್ರತೀಕಾರ ತೀರಿಸುತ್ತಾರೆ. ಬಿಜೆಪಿ ಆಟ ಬಯಲಾಗಬೇಕು ಎಂದರು. ಅಜಿತ್ ಪವಾರ್ ಜತೆ 10-11 ಶಾಸಕರಿದ್ದಾರೆ ಅಷ್ಟೇ: ಮುಂಬಯಿ: ಕಾಂಗ್ರೆಸ್, ಶಿವಸೇನೆ ಮತ್ತು ಎನ್ಸಿಪಿ ನಾಯಕರು ಜತೆಯಾಗಿ ಸರಕಾರ ರಚನೆಗೆ ಮುಂದೆ ಬಂದಿದ್ದೇವೆ. ನಮಗೆ ಸರಕಾರ ರಚಿಸಲು ಬಹುಮತವಿದೆ. ಅಧಿಕೃತವಾಗಿ ಕಾಂಗ್ರೆಸ್ನಿಂದ 44, ಶಿವಸೇನೆಯಿಂದ 56 ಮತ್ತು ಎನ್ಸಿಪಿಯಿಂದ 54 ಶಾಸಕರು ಇದ್ದಾರೆ. ಕೆಲವು ಪಕ್ಷೇತರರು ನಮ್ಮ ಜತೆಗೆ ಇದ್ದಾರೆ. ನಮಗೆ ಸುಮಾರು 170 ಶಾಸಕರ ಬೆಂಬಲವಿದೆ ಎಂದು ಎನ್ಸಿಪಿ ಮುಖಂಡ ಶರದ್ ಪವಾರ್ ಪ್ರತಿಪಾದಿಸಿದ್ದಾರೆ. ಬಿಜೆಪಿ ಜತೆ ಸೇರಿ ಸರಕಾರ ರಚಿಸುವ ನಿರ್ಧಾರ ಅಜಿತ್ ಪವರ್ ಅವರ ವೈಯಕ್ತಿಕ ನಿರ್ಧಾರವಾಗಿದೆ. ಅಜಿತ್ ಪವಾರ್ ನಡೆಯಿಂದ ಕಾರ್ಯಕರ್ತರಿಗೆ ನೋವಾಗಿದೆ. ಪಕ್ಷದ ವಿರುದ್ಧ ಅಜಿತ್ ನಿರ್ಧಾರ ಕೈಗೊಂಡಿದ್ದಾರೆ. ಅಜಿತ್ ಪವಾರ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಈ ಬೆಳವಣಿಗೆ ಕಂಡು ಅಚ್ಚರಿಗೆ ಒಳಗಾಗಿದ್ದೇನೆ. ನಮ್ಮ ರಾಷ್ಟ್ರದಲ್ಲಿ ಪಕ್ಷಾಂತರ ವಿರೋಧಿ ಕಾನೂನು ಇದೆ. ಇಂತಹ ಸರಕಾರವನ್ನು ನಾವು ಬೆಂಬಲಿಸುವುದಿಲ್ಲ. ಎಲ್ಲ ಮೂರು ಪಕ್ಷಗಳು ಮುಂದೆ ಏನು ಮಾಡಬೇಕು ಎಂಬುದನ್ನು ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಶರದ್ ಪವಾರ್ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ರಚನೆ ಕುರಿತು ಶಿವಸೇನೆ-ಎನ್ಸಿಪಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರದ್ ಪವಾರ್, ಡಿಸಿಎಂ ಅಜಿತ್ ಪವಾರ್ ಜತೆಗೆ ಎನ್ಸಿಪಿಯ 10-11 ಶಾಸಕರು ಇದ್ದಾರೆ. ಅವರು ಯಾರು ಎಂಬುದನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಶರದ್ ಪವಾರ್ ತಿಳಿಸಿದ್ದಾರೆ. 54 ಎಂಎಲ್ಎಗಳ ಬೆಂಬಲವಿದೆ ಎಂದು ಬಿಜೆಪಿ ತಪ್ಪು ಮಾಹಿತಿ ರವಾನೆ ಮಾಡಿದೆ. ವಿಶ್ವಾಸಮತ ಪರೀಕ್ಷೆ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶರದ್ ಪವಾರ್ ತಿಳಿಸಿದ್ದಾರೆ.
from India & World News in Kannada | VK Polls https://ift.tt/2OdRWfy