ರಾಜೀನಾಮೆ ನೀಡಲು ಪಾಕ್ ಪ್ರಧಾನಿ ಇಮ್ರಾನ್‌ ಖಾನ್‌ ಗೆ ನೀಡಿದ್ದ ಗಡುವು ಮುಕ್ತಾಯ

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಪ್ರಧಾನಿ ಇಮ್ರಾನ್‌ ಖಾನ್‌ ಸರಕಾರದ ವಿರುದ್ಧ ಪ್ರತಿ­ಪಕ್ಷಗಳು ನಡೆಸುತ್ತಿರುವ '' ಆಂದೋಲನ ತೀವ್ರ ಸ್ವರೂಪ ಪಡೆದು­ಕೊಂಡಿದ್ದು, ಚಳವಳಿಯ ನೇತೃತ್ವ ವಹಿಸಿರುವ ಮೌಲ್ವಿ ಫಜ್ಲೂರ್‌ ರೆಹ್ಮಾನ್‌ ಅವರು, ಇಮ್ರಾನ್‌ ಖಾನ್‌ ಗೆ ಪದತ್ಯಾಗ ಮಾಡಲು ಭಾನುವಾರ ರಾತ್ರಿವರೆಗೆ ಗಡುವು ನೀಡಿದ್ದರು. ಆದರೆ ಈವರೆಗೆ ಯಾವುದೇ ಬೆಳವಣಿಗೆ ''2018ರ ಸಾರ್ವತ್ರಿಕ ಚುನಾವಣೆಯಲ್ಲಿ ರಿಗ್ಗಿಂಗ್‌ ಮೂಲಕ ಅಧಿಕಾರಕ್ಕೆ ಬಂದಿರುವ ಇಮ್ರಾನ್‌ ಖಾನ್‌ ಅವರದ್ದು 'ನಕಲಿ' ಸರಕಾರ­ವಾಗಿದ್ದು, ಕೂಡಲೇ ಅವರು ರಾಜೀನಾಮೆ ನೀಡಬೇಕು,''ಎಂದು ಪ್ರತಿಭಟನಾಕಾರರ ಆಗ್ರಹವಾಗಿದೆ. ಶುಕ್ರವಾರ ಪ್ರತಿಭಟನಾ ರ‍್ಯಾಲಿ ಇಸ್ಲಾಮಾಬಾದ್‌ಗೆ ತಲುಪಿದ್ದು, ಪಾಕ್‌ನ ಪ್ರಮುಖ ಪ್ರತಿಪಕ್ಷಗಳಾದ 'ಪಿಎಂಎಲ್‌-ಎನ್‌', ಪಿಪಿಪಿ ಸಹ ಈ ಪ್ರತಿಭಟನೆಗೆ ಕೈಜೋಡಿಸಿರುವುದರಿಂದ ಇಮ್ರಾನ್‌ ಮೇಲೆ ಒತ್ತಡ ಹೆಚ್ಚಾಗಿದೆ. ಸೇನೆಗೂ ಡೆಡ್‌ಲೈನ್‌: ''ದೇಶವನ್ನು ಆಳುವ ಹಕ್ಕು ಪಾಕಿಸ್ತಾನದ ಜನತೆಗೆ ಇದೆಯೇ ಹೊರತು ಯಾವುದೇ 'ಸಂಸ್ಥೆಗಲ್ಲ' ಎಂದು ಹೇಳುವ ಮೂಲಕ ಸರಕಾರವನ್ನು ಕೈಗೊಂಬೆ ಮಾಡಿ­ಕೊಂಡಿರುವ ಸೇನೆ ವಿರುದ್ಧವೂ ರೆಹಮಾನ್‌ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ. ''ಯಾವುದೇ ಸಂಸ್ಥೆ ಜತೆ ನಮ್ಮ ಸಂಘರ್ಷ­ವಿಲ್ಲ. ಎಲ್ಲ ಸಂಸ್ಥೆಗಳೂ ಸರಕಾರದ ವಿಚಾರದಲ್ಲಿ ತಟಸ್ಥ ಧೋರಣೆ ತಾಳಬೇಕೆಂಬುದು ನಮ್ಮ ಒತ್ತಾಯ. ಇಮ್ರಾನ್‌ ಖಾನ್‌ ಸರಕಾರವನ್ನು ಬೆಂಬಲಿಸುವುದೋ ಅಥವಾ ಇಲ್ಲವೋ ಎಂಬುದನ್ನು ನಿರ್ಧರಿಸಲು ಸೇನೆಗೂ ಎರಡು ದಿನಗಳ ಗಡುವನ್ನು ನೀಡುತ್ತಿದ್ದೇವೆ,'' ಎಂದು ರೆಹಮಾನ್‌ ಹೇಳಿದ್ದಾರೆ. ಸರ್ವ ಪಕ್ಷ ಸಭೆ: ಈ ಮಧ್ಯೆ, ರೆಹಮಾನ್‌ ಅವರು, ತಮ್ಮ ಹೋರಾಟದ ಮುಂದಿನ ಹಾದಿಯ ಬಗ್ಗೆ ಚರ್ಚಿಸಲು ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ. ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯ ಅಧ್ಯಕ್ಷ ಬಿಲಾವಾಲ್‌ ಭುಟ್ಟೋ ಜರ್ದಾರಿ, ಪಖ್ತುಂಖ್‌ವಾ ಮಿಲ್ಲಿಆವಾಮಿ ಪಕ್ಷದ ಅಧ್ಯಕ್ಷ ಮೆಹಮೂದ್‌ ಖಾನ್‌, ಪಾಕಿಸ್ತಾನ್‌ ಮುಸ್ಲಿಂ ಲೀಗ್‌ -ನವಾಜ್‌ ಮುಖಂಡರಾದ ಅಸನ್‌ ಇಕ್ಬಾಲ್‌ ಮತ್ತು ಖವಾಜಾ ಆಸಿಫ್‌, ಅವಾಮಿ ನ್ಯಾಷನಲ್‌ ಪಾರ್ಟಿ ಪ್ರಧಾನ ಕಾರ್ಯದರ್ಶಿ ಮಿಯಾನ್‌ ಇಫ್ತಿಕರ್‌ ಹುಸೇನ್‌ ಅವರು ಈ ಸಭೆಯಲ್ಲಿಭಾಗವಹಿಸಲಿದ್ದಾರೆ. ಈ ಮಧ್ಯೆ, ಜೈಲಿನಿಂದ ಬಿಡುಗಡೆಗೊಂಡಿರುವ ಜೆಯುಐ- ಎಫ್‌ ಮುಖಂಡ ಮುಫ್ತಿ ಕೈಫಾಯತುಲ್ಲಾ ಅವರು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹರಿಪುರ್‌ ಕೇಂದ್ರ ಕಾರಾಗೃಹತದಿಂದ ಇಸ್ಲಾಮಾಬಾದ್‌ಗೆ ತೆರಳಿದ್ದಾರೆ. ಅ.27ರಂದು ಸಿಂಧ್‌ ಪ್ರಾಂತ್ಯದಲ್ಲಿಇಮ್ರಾನ್‌ ಸರಕಾರದ ವಿರುದ್ಧ 'ಆಜಾದಿ ಮಾರ್ಚ್'ಗೆ (ಸ್ವತಂತ್ರ ನಡಿಗೆ) ರೆಹಮಾನ್‌ ಚಾಲನೆ ನೀಡಿ­ದ್ದರು. ರ‍್ಯಾಲಿಯ ಮೂಲಕ ಪ್ರತಿಭಟನಾ­ಕಾರರು ಅ.31ರಂದು ಇಸ್ಲಾಮಾಬಾದ್‌ ತಲುಪಬೇಕಿತ್ತು. ಆದರೆ ಲಾಹೋರ್‌ ರೈಲಿನಲ್ಲಿ ಬೆಂಕಿ ದುರಂತದ ಹಿನ್ನೆಲೆ ತಡವಾಯಿತು. ಇಸ್ಲಾಮಾಬಾದ್‌ನ ಪೇಶಾವರ್‌ ಮೊರ್‌ ಪ್ರದೇಶದಲ್ಲಿ ಪ್ರತಿಭಟ­ನಾಕಾರರು ಜಮಾಯಿಸಿದ್ದು, ಅವರಿಗಾಗಿ ವಿವಿಧ ಪಕ್ಷಗಳು ಟೆಂಟ್‌ಗಳನ್ನು ನಿರ್ಮಿಸಿವೆ. ಈ ಮಧ್ಯೆ, ಸಾಗರೋಪಾದಿಯಲ್ಲಿ ಜಮಾವಣೆ­ಗೊಳ್ಳುತ್ತಿರುವ ಪ್ರತಿಭಟನಾಕಾರರನ್ನು ನಿಯಂತ್ರಿ­ಸಲು ಸರಕಾರ ಭಾರಿ ಭದ್ರತೆ ಏರ್ಪಡಿಸಿದೆ. ರೆಡ್‌ ಝೋನ್‌ಗೆ ಸರ್ಪಗಾವಲು: ಪ್ರಮುಖ ಸರಕಾರಿ ಕಚೇರಿಗಳು, ಸುಪ್ರೀಂ ಕೋರ್ಟ್‌, ಸಂಸತ್‌ ಭವನ ಮತ್ತು ಧೂತಾವಾಸಗಳು ಇರುವ 'ರೆಡ್‌ ಝೋನ್‌'ಗೆ ಪ್ರತಿಭಟನಾಕಾರರು ನುಗ್ಗದಂತೆ ತಡೆಯಲು ಮುಳ್ಳಿನ ತಂತಿ ಮತ್ತು ಬೃಹತ್‌ ಶಿಪ್‌ ಕಂಟೇನರ್‌ಗಳ ಮೂಲಕ ತಡೆಗೋಡೆ ನಿರ್ಮಿಸಲಾಗಿದೆ. 'ರೆಡ್‌ ಝೋನ್‌'ನಲ್ಲಿ ಭದ್ರತೆಗಾಗಿ ಪಾಕ್‌ ಸರಕಾರ '111 ಬ್ರಿಗೇಡ್‌' ತುಕಡಿಯನ್ನು ನಿಯೋಜಿಸುವಂತ ಸೇನೆಗೆ ಸೂಚಿಸಿದೆ.


from India & World News in Kannada | VK Polls https://ift.tt/2qhRQd9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...