'ಸಿದ್ದರಾಮಯ್ಯಗಿಂತ ಕುಮಾರಸ್ವಾಮಿ ಮೇಲು' ಎಂದು ಬಿಜೆಪಿ ಸಚಿವ!

ಚಿತ್ರದುರ್ಗ: ‘ಮಾಜಿ ಸಿಎಂ ಅವರಿಗಿಂತ ಕುಮಾರಸ್ವಾಮಿ ಅವರೇ ಮೇಲು, ಸಿದ್ದರಾಮಯ್ಯ ಅವರಿಗಿಂತ ಕುಮಾರಸ್ವಾಮಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು. ನಗರದ ಮುರುಘಾಮಠಕ್ಕೆ ಭಾನುವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿ, ‘ಕುಮಾರಸ್ವಾಮಿ ಅವರು ನಾಲ್ಕಾರು ಹಳ್ಳಿಗಳಿಗೆ ಓಡಾಡಿ ಜನರ ಸಮಸ್ಯೆ ಆಲಿಸಿದ್ದಾರೆ. ಸಿದ್ದರಾಮಯ್ಯ ಏನ್‌ ಮಾಡಿದ್ದಾರೆ. ಬರೀ ಭಾಷಣ ಮಾಡಿ ಬರುತ್ತಾರೆ. ಸಿದ್ದರಾಮಯ್ಯ ಬಳಸುವ ಭಾಷೆ ಜನ ಗಮನಿಸುತ್ತಿದ್ದಾರೆ. ಅವರಿಗೆ ಭಾಷೆ ಮೇಲೆ ಹಿಡಿತ ಇಲ್ಲ. ಅವರಪ್ಪ, ಇವರಪ್ಪ ಅಂತ ಮಾತಾಡ್ತಾರೆ, ಇದನ್ನೇ ಅವರಿಗೆ ತಿರುಗಿಸಿ ಕೇಳಿದರೆ ಹೇಗೆ,’’ ಎಂದು ಪ್ರಶ್ನಿಸಿದರು. ಬಿಎಸ್‌ ಯಡಿಯೂರಪ್ಪ ಸರಕಾರವನ್ನು ಬೀಳಿಸಲು ಬಿಡುವುದಿಲ್ಲ ಎಂದಿದ್ದ ಕುಮಾರಸ್ವಾಮಿ ರಾಜ್ಯದ ಜನತೆಯನ್ನು ಉಳಿಸುವುದಕ್ಕಾಗಿ ಯಾವ ಪಕ್ಷದವರ ಜತೆಗೆ ಬೇಕಿದ್ದರು ಹೋಗಲು ಸಿದ್ಧ ಎಂದಿದ್ದರು. ಬಿಎಸ್‌ ಯಡಿಯೂರಪ್ಪ ಅವರು ಕುಮಾರಸ್ವಾಮಿ ಜತೆಗೆ ಆತ್ಮೀಯವಾಗಿ ಕಾಣಿಸಿಕೊಂಡಿದ್ದರು. ಇವೆಲ್ಲ ನಡೆಗಳನ್ನು ಗಮನಿಸಿದಾಗ ಒಳಗೊಳಗೆ ಜೆಡಿಎಸ್‌-ಬಿಜೆಪಿ ಒಟ್ಟಾಗುತ್ತಿವೆಯೇ? ಎಂಬ ಅನುಮಾನ ಜನರಲ್ಲಿ ಕಾಡುತ್ತಿದೆ. ಬೆನ್ನಲ್ಲೇ ಸಚಿವ ಸೋಮಣ್ಣ ಅವರು ಕುಮಾರಸ್ವಾಮಿ ಅವರನ್ನು ಹೊಗಳಿದ್ದು ಜೆಡಿಎಸ್‌-ಬಿಜೆಪಿ ಸ್ನೇಹ ಸಂಬಂಧ ವೃದ್ಧಿಸುತ್ತಿರುವುದಕ್ಕೆ ಉದಾಹರಣೆ ಎಂಬಂತೆ ಕಾಣಿಸುತ್ತಿದೆ. ಸಿದ್ದು ದೂರುವುದು ತಪ್ಪು ಪಠ್ಯದಲ್ಲಿಟಿಪ್ಪು ವಿಷಯವಿದ್ದರೆ ತಪ್ಪೇನಿದೆ ಎಂದು ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಎಸ್‌. ಆರ್‌.ಪಾಟೀಲ್‌ ಹೇಳಿದರು. ರಾಜ್ಯ ದೇವಾಂಗ ಸಂಘ ಆಯೋಜಿಸಿದ್ದ ದಾಸಿಮಯ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಮಾತನಾಡಿದ ಅವರು, ‘‘ರಾಜ್ಯ ರಾಜಕೀಯ ವಲಯದಲ್ಲಿನ ಬದಲಾವಣೆಗಳಿಗೆ ಸಿದ್ದರಾಮಯ್ಯ ಅವರನ್ನು ದೂರುವುದು ತಪ್ಪು,’’ಎಂದರು. ‘‘ಕೇಂದ್ರ ಗೃಹಮಂತ್ರಿಗಳು ಹಾಗೂ ರಾಜ್ಯದ ಅನೇಕ ಬಿಜೆಪಿ ನಾಯಕರು ಸೇರಿಕೊಂಡು ನ್ಯಾಯಯುತವಾಗಿ ಆಯ್ಕೆಯಾಗಿದ್ದ ಸರಕಾರವನ್ನು ಬೀಳಿಸಿದ್ದಾರೆ,’’ಎಂದು ಆರೋಪಿಸಿದರು.


from India & World News in Kannada | VK Polls https://ift.tt/2qkNrpI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...