ಬಾಂಗ್ಲಾದೇಶ ವಿರುದ್ಧ ಭಾರತದ ಸೋಲಿಗಿರುವ 7 ಕಾರಣಗಳು

ಹೊಸದಿಲ್ಲಿ: ನವೆಂಬರ್ 3 ಭಾನುವಾರದಂದು ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ವಿರುದ್ಧ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ಏಳು ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಅಂತರದ ಮುನ್ನಡೆ ದಾಖಲಿಸಿದೆ. ಇದು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶ ದಾಖಲಿಸಿದ ಮೊದಲ ಗೆಲುವುವಾಗಿದೆ. ಇದರೊಂದಿಗೆ 1000ನೇ ಅಂತಾರಾಷ್ಟ್ರೀಯ ಟ್ವೆಂಟಿ-20 ಪಂದ್ಯದಲ್ಲಿ ಚಾರಿತ್ರಿಕ ಸಾಧನೆ ಮೆರೆದಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಸೇರಿದಂತೆ ಪಂದ್ಯದ ಎಲ್ಲ ವಿಭಾಗದಲ್ಲೂ ಭಾರತ ವೈಫಲ್ಯವನ್ನು ಅನುಭವಿಸಿತ್ತು. ಈ ಸಂಬಂಧ ಭಾರತದ ಸೋಲಿಗಿರುವ ಏಳು ಕಾರಣಗಳನ್ನು ಮೆಲುಕು ಹಾಕಲಾಗಿದೆ. 1. ನಾಯಕನ ಮೇಲೆ ಹೆಚ್ಚಿನ ಒತ್ತಡ: (9) ಎರಡು ಬೌಂಡರಿ ನೆರವಿನಿಂದ ಉತ್ತಮ ಆರಂಭ ಪಡೆದರೂ ಶಫಿಯುಲ್ ಇಸ್ಲಾಂ ದಾಳಿಯಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿರುವುದು ಹಿನ್ನಡೆಗೆ ಕಾರಣವಾಯಿತು. ಇದರೊಂದಿಗೆ ಪ್ರಸಕ್ತ ಸಾಲಿನಲ್ಲಿ ಟಿ20 ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನವನ್ನು ಮುಂದುವರಿಸಿದರು. 2. ಕೆಎಲ್ ರಾಹುಲ್ ವೈಫಲ್ಯ: ಆಗಲೇ ಟೆಸ್ಟ್ ಸ್ಥಾನವನ್ನು ಕಳೆದುಕೊಂಡಿರುವ ಕರ್ನಾಟಕದ ಕೆಎಲ್ ರಾಹುಲ್, ಟ್ವೆಂಟಿ-20ನಲ್ಲೂ ತಮಗೆ ಲಭಿಸಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ವಿಫಲವಾದರು. 17 ಎಸೆತಗಳನ್ನು ಎದುರಿಸಿದ ರಾಹುಲ್ ಎರಡು ಬೌಂಡರಿಗಳಿಂದ 15 ರನ್ ಗಳಿಸಿದರು. 3. ಧವನ್ ಹೋರಾಟ ವ್ಯರ್ಥ: ಈ ನಡುವೆ ಶಿಖರ್ ಧವನ್ 41 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರೂ ಪಂದ್ಯ ಗೆಲ್ಲಲು ಸಾಕಾಗಲಿಲ್ಲ. ನಿರ್ಣಾಯಕ ಹಂತದಲ್ಲಿ ಧವನ್ ರನೌಟ್ ಬಲೆಗೆ ಸಿಲುಕಿರುವುದು ಹಿನ್ನಡೆಗೆ ಕಾರಣವಾಯಿತು. 4. ಅಯ್ಯರ್, ಪಂತ್ ಅನನುಭವ: ಶ್ರೇಯಸ್ ಅಯ್ಯರ್ (22) ಹಾಗೂ (27) ಬ್ಯಾಟಿಂಗ್‌ನಲ್ಲಿ ಅನನುಭವ ಎದ್ದು ಕಾಣಿಸುತ್ತಿತ್ತು. ಇದರಿಂದಾಗಿ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸುವಲ್ಲಿ ವಿಫಲವಾದರು. 5. ಮೊನಚು ಕಳೆದುಕೊಂಡ ಬೌಲಿಂಗ್: ಯುಜ್ವೇಂದ್ರ ಚಹಲ್ ಹೊರತುಪಡಿಸಿ ಇತರೆಲ್ಲ ಬೌಲರ್‌ಗಳು ಪರಿಣಾಮಕಾರಿ ಎನಿಸಿಕೊಳ್ಳುವಲ್ಲಿ ವಿಫಲವಾದರು. ಈ ಪೈಕಿ ಖಲೀಲ್ ಅಹ್ಮದ್ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 37 ರನ್ ಬಿಟ್ಟುಕೊಟ್ಟರು. 6. ಕ್ಯಾಚ್ ಡ್ರಾಪ್... ನಿರ್ಣಾಯಕ ಹಂತದಲ್ಲಿ ಚಹಲ್ ದಾಳಿಯಲ್ಲಿ ಬೌಂಡರಿ ಲೈನ್‌ನಲ್ಲಿ ಕೃುಣಾಲ್ ಪಾಂಡ್ಯ ಕ್ಯಾಚ್ ಕೈಚೆಲ್ಲಿರುವುದು ಹಿನ್ನಡೆಗೆ ಕಾರಣವಾಯಿತು. ಇದರ ಸಂಪೂರ್ಣ ಪ್ರಯೋಜನ ಪಡೆದ ಮುಷ್ಫಿಕರ್ ರಹೀಂ ಬಿರುಸಿನ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 7. ಡಿಆರ್‌ಎಸ್ ಮಿಸ್: ಟೀಮ್ ಇಂಡಿಯಾಗೆ ಮಹೇಂದ್ರ ಸಿಂಗ್ ಧೋನಿ ಅವರ ಸಾನಿಧ್ಯ ಎಷ್ಟು ಅಗತ್ಯವಿದೆ ಎಂಬುದು ಇದರಿಂದಲೇ ತಿಳಿದು ಬರುತ್ತಿದೆ. ಯುಜ್ವೇಂದ್ರ ಚಹಲ್ ಅವರು ಎಸೆದ ಇನ್ನಿಂಗ್ಸ್‌ನಲ್ಲಿ 10ನೇ ಓವರ್‌ನಲ್ಲಿ ಎರಡು ಬಾರಿ ಎಲ್‌ಬಿಡಬ್ಲ್ಯುಗಾಗಿ ಡಿಆರ್‌ಎಸ್ ಮನವಿ ಪಡೆಯುವ ಅವಕಾಶವಿದ್ದರೂ ರಿಷಬ್ ಪಂತ್ ಎಡವಟ್ಟಿನಿಂದಾಗಿ ಭಾರತ ಅವಕಾಶ ಮಿಸ್ ಮಾಡಿಕೊಂಡಿತು. ಆದರೆ ಅದೇ ಓವರ್‌ನ ಅಂತಿಮ ಎಸೆತದಲ್ಲಿ ಬ್ಯಾಟ್ ತಗುಲದಿದ್ದರೂ ಮನವಿ ಮಾಡುವ ಮೂಲಕ ಮಹತ್ವದ ಡಿಆರ್‌ಎಸ್ ಕಳೆದುಕೊಂಡಿತು. ಇದರೊಂದಿಗೆ ಒಂದೇ ಓವರ್‌ನಲ್ಲಿ ಮೂರು ಮೂರು ಬಾರಿ ಎಡವಟ್ಟು ಮಾಡಿಕೊಂಡಿತು. ಇದರ ಸಂಪೂರ್ಣ ಪ್ರಯೋಜನ ಪಡೆದ ಮುಷ್ಪಿಕರ್ ರಹೀಂ ಪಂದ್ಯವನ್ನು ಭಾರತದಿಂದ ಕಸಿದುಕೊಂಡರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Naj8eq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...