ಬೆಳ್ತಂಗಡಿ: ಆಗಸದಲ್ಲಿ ಇಂದು ಸೂರ್ಯನ ಸುತ್ತಲೂ ಆವರಿಸಿತ್ತು. ಇದೊಂದು ಪ್ರಾಕೃತಿಕ ವಿಸ್ಮಯವಾಗಿದ್ದು, ಸೂರ್ಯನ ಸುತ್ತಲೂ ಕಾಮನಬಿಲ್ಲು ಮೂಡುವ ವಿದ್ಯಮಾನವಾಗಿದೆ. ಇದು ಶುಭ್ರ ವಾತಾವರಣವನ್ನು ಸೂಚಿಸುತ್ತದೆ. ಸೂರ್ಯನಿಗೆ ಪರಿಮಂಡಲ ಆವರಿಸಿದರೆ, ಜೋರು ಮಳೆಯಾಗುವ ಸಾಧ್ಯತೆ ಇದೆ ಎಂಬ ನಂಬಿಕೆ ಇದೆ. ಒಟ್ಟಾರೆ ಸೂರ್ಯನಿಗೆ ಆವರಿಸಿದ್ದ ಪರಿಮಂಡಲ ಜನರಲ್ಲಿ ಕುತೂಹಲ ಮೂಡಿಸಿದ್ದಂತೂ ಹೌದು. ಸೂರ್ಯನ ವಿರುದ್ಧ ದಿಕ್ಕಿನಲ್ಲಷ್ಟೇ ಅರ್ಧ ವೃತ್ತಾಕರದಲ್ಲಿ ಮೂಡುವ ಕಾಮನಬಿಲ್ಲನ್ನಷ್ಟೇ ನೋಡಿದ್ದ ಜನಕ್ಕೆ ಪರಿಮಂಡಲ ಆಶ್ಚರ್ಯ ಉಂಟುಮಾಡಿತ್ತು. ಸೂರ್ಯ ಸುತ್ತಲೂ ವೃತ್ತಾಕಾರದಲ್ಲಿ ಮೂಡಿದ್ದ ಕಾಮನಬಿಲ್ಲನ್ನು ಕಂಡು ಜನಸಾಮಾನ್ಯರಲ್ಲಿ ಸಹಜವಾಗಿಯೇ ಕುತೂಹಲ ಮೂಡಿತ್ತು. ಕಾಮನಬಿಲ್ಲು ಎಂದು ಭಾವಿಸಿ ವೀಕ್ಷಣೆಯಲ್ಲಿ ತೊಡಗಿರುವುದು ಕಂಡು ಬಂತು. ಜನರು ಸಾಮಾಜಿಕ ಜಾಲತಾಣಗಳ ಸ್ಟೇಟಸ್ ನಲ್ಲಿ ಈ ವಿಶೇಷ ವಿದ್ಯಮಾನದ ಪೋಟೋಗಳನ್ನು ಹಂಚಿಕೊಂಡಿದ್ದಾರೆ.
from India & World News in Kannada | VK Polls https://ift.tt/2pgyZic