ಮುಂಬಯಿ: ಭಾವಿ ಮುಖ್ಯಮಂತ್ರಿ ಎಂದು ಕಾರ್ಯಕರ್ತರು ಬಿಂಬಿಸುತ್ತಿದ್ದು, ಮುಖ್ಯಸ್ಥ ಉದ್ದವ್ ಠಾಕ್ರೆ 50:50 ಸೂತ್ರದ ಭರವಸೆ ನೀಡಿದರಷ್ಟೇ ಬಿಜೆಪಿ ಜತೆಗೆ ಸರಕಾರ ರಚನೆ ಎಂದು ಪಟ್ಟು ಹಿಡಿದಿದ್ದಾರೆ. ಮೊದಲ ಬಾರಿಗೆ ಠಾಕ್ರೆ ಕುಟುಂಬದ ಕುಡಿ ಆದಿತ್ಯ ಠಾಕ್ರೆ ವರ್ಲಿ ಕ್ಷೇತ್ರದಿಂದ ವಿಧಾನಸಭೆಗೆ ಆರಿಸಿ ಬಂದಿದ್ದು, 29 ವರ್ಷಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗುತ್ತಾರೆಯೇ? ಕಾದು ನೋಡಬೇಕಿದೆ. ಕಳೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ 17 ಸ್ಥಾನಗಳನ್ನು ಕಳೆದುಕೊಂಡಿರುವ ಬಿಜೆಪಿಗೆ 50:50 ಸೂತ್ರದ ಭರವಸೆಯೇ ಕಾದ ಕೆಂಡವಾಗಿ ಬಿಸಿ ಮುಟ್ಟಿಸುತ್ತಿದೆ. ಹಾಗೆ ನೋಡಿದರೆ 2014ರಲ್ಲಿ ಶಿವಸೇನೆ 63 ಸೀಟುಗಳನ್ನು ಗೆದ್ದಿತ್ತು. ಆದರೆ ಈ ಬಾರಿ 56 ಸ್ಥಾನಗಳನ್ನು ಗಳಿಸಲಷ್ಟೇ ಶಕ್ತವಾಗಿದೆ. ಮಿತ್ರಪಕ್ಷ ಬಿಜೆಪಿ ಹೋಲಿಸದರೆ ಕೊಂಚ ಸುಧಾರಿಸಿದೆ ಎಂಬಂತಿದೆ. ಆದರೆ ಅಧಿಕಾರಕ್ಕಾಗಿ ಮೊದಲಿನಿಂದಲೂ ಬಿಜೆಪಿ ಜತೆಗೆ ಜಟಾಪಟಿ ನಡೆಸುತ್ತಿರುವ ಶಿವಸೇನೆ ಈ ಬಾರಿ ಸಿಕ್ಕಿರುವ ಸುವರ್ಣಾವಕಾಶವನ್ನು ಕೈಚೆಲ್ಲುವ ಲಕ್ಷಣಗಳು ಕಂಡುಬರುತ್ತಿಲ್ಲ. ಥಾಣೆ ನಗರದ ಶಾಸಕ ಪ್ರತಾಪ್ ಸಾರನಾಯಕ್ ಕಾರ್ಯಕರ್ತನ್ನು ಉದ್ದೇಶಿಸಿ, ಆದಿತ್ಯ ಠಾಕ್ರೆ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತೇವೆ. ಆದರೆ ಉದ್ಧವ್ ಠಾಕ್ರೆ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ ಎಂದರು. ಆದಿತ್ಯ ಠಾಕ್ರೆ ಅವರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್-ಎನ್ಸಿಪಿ ಸಹಾಯ ಪಡೆಯುತ್ತೀರಾ ಎಂಬ ಪ್ರಶ್ನೆಗೆ ಪ್ರತಾಪ್ ಸಾರನಾಯಕ್ ಈ ಉತ್ತರ ನೀಡಿದ್ದಾರೆ. ಸಾರನಾಯಕ್ ಮತ್ತು ಇತರ ನೂತನ ಶಾಸಕರು ಠಾಕ್ರೆ ಅವರ ಮಾತೊಶ್ರೀ ನಿವಾಸದಲ್ಲಿ ಪಕ್ಷದ ಸಭೆ ಹಿನ್ನೆಲೆ ಸೇರಿದ್ದರು. ಕಾಂಗ್ರೆಸ್ನಿಂದ ಶಿವಸೇನೆಗೆ ಬಂದು ವಿಧಾನಸಭೆಗೆ ಆಯ್ಕೆಯಾದ ಅಬ್ದುಲ್ ಸತ್ತರ್ ಸಾರನಾಯಕ್ ಅವರ ನಿರ್ಧಾರವನ್ನು ಬೆಂಬಲಿಸಿದ್ದಾರೆ.
from India & World News in Kannada | VK Polls https://ift.tt/347VMfl