ರಾಮನಗರ: ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರು ಸಚಿವರಾಗಿ ಇನ್ನು ಮೂರು ದಿನಗಳಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ..! ಇದು ಆಶ್ಚರ್ಯ ವಾದರೂ ಸತ್ಯ. ಕಳೆದ ಒಂದು ವಾರದಿಂದಲ್ಲೂ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಸಿಪಿವೈ ಪಕ್ಷದ ಹೈಕಮಾಂಡ್ ಸೂಚನೆಯಂತೆ ಸಚಿವರಾಗಲಿದ್ದಾರೆ ಎಂಬ ಮಾಹಿತಿ ವಿಕಗೆ ಬಲ್ಲ ಮೂಲಗಳಿಂದ ದೃಢಪಟ್ಟಿದೆ. ಸಚಿವ ಸ್ಥಾನ ಏಕೆ: ಸಮ್ಮಿಶ್ರ ಸರಕಾರ ಉರುಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿ.ಪಿ.ಯೋಗೇಶ್ವರ್ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಅಸಮಧಾನದಿಂದ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತು. ಇದಲ್ಲದೇ, ಇದೀಗ ಡಿಕೆ ಶಿಕುಮಾರ್ ಸಹ ಕ್ಷೇತ್ರಕ್ಕೆ ಮರಳಿರುವುದರಿಂದ ಒಂದೆ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ. ಸಚಿವ ಸ್ಥಾನ ನೀಡಿದ ಆರು ತಿಂಗಳೊಳಗಾಗಿ ಶಾಸಕ ಇಲ್ಲವೆ ಎಂಎಲ್ಸಿ ಆಗಬೇಕು. ಹೀಗಾಗಿ ಸಿ.ಪಿವೈ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಹುಣಸೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಟಿಕೆಟ್ ನೀಡುವ ಸಾದ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇಲ್ಲವೇ ಎಂಎಲ್ಸಿ ಮಾಡುವುದು ನಿಶ್ಚಿತ ಎನ್ನಲಾಗುತ್ತಿದೆ. ಡಿ.ಕೆ.ಶಿವಕುಮಾರ್ ಅವರನ್ನು ಎದುರಿಸುವ ಸಮರ್ಥರ ಪೈಕಿ ಸಿ.ಪಿ.ವೈ ಮೊದಲ ಸ್ಥಾನದಲ್ಲಿದ್ದಾರೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ರಾಮನಗರದಲ್ಲಿ ಡಿಕೆಶಿ ಅವರನ್ನು ಕಟ್ಟಿಹಾಕುವ ಪ್ರಯತ್ನವನ್ನು ಬಿಜೆಪಿ ಮಾಡಿದೆ ಎನ್ನಬಹುದು. ಸಿ.ಪಿ.ವೈ ಮಾತ್ರ ಯಾರೊಬ್ಬರ ಸಂಪರ್ಕಕ್ಕೂ ದೊರೆಯುತ್ತಿಲ್ಲ. ಪಕ್ಷದ ಮುಖಂಡರೇ ಈ ಮಾಹಿತಿ ನೀಡಿದ್ದು, ಇನ್ನು ಮೂರು ದಿನದಲ್ಲಿ ಸಚಿವ ಸ್ಥಾನ ದೊರೆತರೂ ಅಚ್ಚರಿ ಪಡಬೇಕಿಲ್ಲ
from India & World News in Kannada | VK Polls https://ift.tt/2Wi9Qjv