ಹರಿಯಾಣ ನಂತರ ಮಹಾರಾಷ್ಟ್ರದಲ್ಲೂ ಬಿಜೆಪಿಗೆ ಶುರುವಾಯಿತು ತಲೆನೋವು, ಆದಿತ್ಯಗೆ ಸಿಎಂ ಪಟ್ಟ ಕಟ್ಟಲು ಒತ್ತಡ

ಮುಂಬಯಿ: ಹರಿಯಾಣದಲ್ಲಿ ಬಹುಮತಕ್ಕೆ ಸನಿಹ ಬಂದು ಎಡವಿ ಸರಕಾರ ರಚಿಸಲು ತೀವ್ರ ಹೆಣಗಾಡಿದ್ದ ಬಿಜೆಪಿಗೆ ಈಗ ಮಹಾರಾಷ್ಟ್ರದಲ್ಲೂ ತಲೆನೋವು ಶುರುವಾಗಿದೆ. ಮಹಾರಾಷ್ಟ್ರದ 288 ವಿಧಾನಸಭೆಯ ಬಲಾಬಲದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದುಕೊಂಡಿದೆ. 105, 56, ಎನ್‌ಸಿಪಿ 54, ಕಾಂಗ್ರೆಸ್‌ 44, ಎಂಎನ್‌ಎಸ್‌ 1, ಇತರರು 28 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಬಹುಮತಕ್ಕೆ ಬೇಕಾಗಿದ್ದು 145 ಆದರೆ ಬಿಜೆಪಿ ಮೈತ್ರಿಕೂಟಕ್ಕೆ 161 ಸೀಟು ಬಂದಿದೆ. ಆದರೆ ಈಗ ತಲೆನೋವಾಗಿರುವುದು ಬಹುಮತದ ಬಗ್ಗೆ ಅಲ್ಲ. ಯಾರಿಗೆ ಮುಖ್ಯಮಂತ್ರಿ ಪಟ್ಟ ಎಂಬುದಾಗಿದೆ. ಬಿಜೆಪಿ ನಾಯಕರು ದೇವೇಂದ್ರ ಫಡ್ನವಿಸ್‌ಗೆ ಪಟ್ಟ ಕಟ್ಟಲು ಮುಂದಾಗಿದ್ದಾರೆ. ಚುನಾವಣೆಗೆ ಮುನ್ನವೇ ಈ ರೀತಿ ಘೋಷಣೆ ಮಾಡಲಾಗಿತ್ತು. ಕೇಂದ್ರಕ್ಕೆ ನರೇಂದ್ರ, ಮಹಾರಾಷ್ಟ್ರಕ್ಕೆ ದೇವೇಂದ್ರ ಎಂದು ಪ್ರಚಾರ ಮಾಡಲಾಗಿತ್ತು. ಆದರೆ ಚುನಾವಣೆಯಲ್ಲಿ ಬಿಜೆಪಿ ಒಟ್ಟಾರೆಯಾಗಿ ಅಲ್ಪ ಹಿನ್ನಡೆ ಅನುಭವಿಸಿದೆ. ಹೀಗಾಗಿ ಶಿವಸೇನೆ ಈಗ ಮೇಲುಗೈ ಸಾಧಿಸಲು ಮುಂದಾಗಿದೆ. ಅಧಿಕಾರ ಸಮಾನ ಹಂಚಿಕೆಯಾಗಬೇಕು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಈಗಾಗಲೇ ಒಂದು ಬಾಂಬ್‌ ಹಾಕಿದ್ದಾರೆ. ಇದೇ ಮೊದಲ ಬಾರಿಗೆ ಶಿವಸೇನೆಯಲ್ಲಿ ಠಾಕ್ರೆ ಕುಟುಂಬದ ಕುಡಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದೆ. ವರ್ಲಿ ಕ್ಷೇತ್ರದಿಂದ ಸ್ಪರ್ಧಿಸಿರುವ ಗೆಲುವು ಸಾಧಿಸಿದ್ದಾರೆ. ಈಗ ಶಿವಸೇನೆ ಸರಕಾರ ರಚನೆಗೆ ಕೆಲವು ಷರತ್ತುಗಳನ್ನು ಹಾಕಲು ಮುಂದಾಗಿದೆ. ಇದರಲ್ಲಿ ಮೊದಲಿಗೆ 30:30 ಡಿಮ್ಯಾಂಡ್‌ ಇಟ್ಟಿದೆ. ಅಂದರೆ ತಲಾ 30 ತಿಂಗಳು ಅಧಿಕಾರ ಹಂಚಿಕೆಯ ಸೂತ್ರ. ಈಗ ಮತ್ತೊಂದು ಪ್ರಮುಖ ಡಿಮ್ಯಾಂಡ್‌ ಅನ್ನು ಶಿವಸೇನೆಯ ಒಂದು ಬಣ ಮುಂದಿಟ್ಟಿದೆ. ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿರುವ ಆದಿತ್ಯ ಠಾಕ್ರೆಗೆ ಸಿಎಂ ಪಟ್ಟ ತೊಡಿಸಲು ಕೂಗು ಕೇಳಿಬಂದಿದೆ. ಯುವ ಸಮುದಾಯವನ್ನೇ ಹೆಚ್ಚಾಗಿರುವ ದೇಶದಲ್ಲಿ ಯುವ ಮುಖ್ಯಮಂತ್ರಿಯನ್ನು ಮಾಡೋಣ ಎಂದು ಶಿವಸೇನೆಯ ಒಂದು ಬಣ ಪ್ರಚಾರ ಮಾಡುತ್ತಿದೆ. ಈ ಕುರಿತು ಶೀವಸೇನೆ ನಾಯಕರು ಬಿಜೆಪಿ ನಾಯಕರ ಜತೆ ಮಾತುಕತೆ ಕೂಡ ನಡೆಸಿದ್ದಾರೆ. ಅಲ್ಲದೇ ಶಿವಸೇನೆ ನಾಯಕರು ಮುಂಬಯಿಯಲ್ಲಿ ಸಭೆ ಸೇರಲಿದ್ದು, ಇದೇ ವಿಷಯದ ಕುರಿತು ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.


from India & World News in Kannada | VK Polls https://ift.tt/366WJGu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...