- ಐತಿಚಂಡ ರಮೇಶ್ ಉತ್ತಪ್ಪ, ಮೈಸೂರು ಬೆಂಗಳೂರು: ಪ್ಲಾಸ್ಟಿಕ್ನಿಂದಾಗುತ್ತಿರುವ ಪರಿಸರದ ಮೇಲಿನ ಹಾನಿ ತಪ್ಪಿಸಲು ಹಾಲಿನ ಕವರ್ಗಳನ್ನು ಮರು ಖರೀದಿಸಲು ಚಿಂತನೆ ನಡೆಸಿದೆ. ರಾಜ್ಯದಲ್ಲಿ ಪ್ರತಿದಿನ 17 ಮೆಟ್ರಿಕ್ ಟನ್ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ರಾಜ್ಯದಲ್ಲಿ ಕೆಎಂಎಫ್ನಿಂದ ಒಟ್ಟು 38 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಇದರಲ್ಲಿ ಅರ್ಧ ಲೀಟರ್ ಅತಿಹೆಚ್ಚು ಮಾರಾಟವಾಗುತ್ತಿರುವುದರಿಂದ ಪ್ರತಿ ದಿನ ಸುಮಾರು 55 ಲಕ್ಷ ಪ್ಲಾಸ್ಟಿಕ್ ಕವರ್ಗಳು ಬಳಕೆಯಾಗುತ್ತಿವೆ. ಆದರೆ, ಇವುಗಳಲ್ಲಿ ಮರು ಬಳಕೆಗೆ ಲಭ್ಯವಾಗದೆ ಬಹುತೇಕ ಮಣ್ಣು ಪಾಲಾಗುತ್ತಿದ್ದು, ಪ್ರಕೃತಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಪ್ಲಾಸ್ಟಿಕ್ ಕವರ್ಗಳನ್ನು ಗ್ರಾಹಕರಿಂದ ಮರು ಖರೀದಿಸಲು ಚಿಂತನೆ ನಡೆಯುತ್ತಿದ್ದು, ಈ ಕುರಿತು ಟೆಂಡರ್ ಕರೆಯುವ ಹಂತದಲ್ಲಿದೆ. 17 ಮೆಟ್ರಿಕ್ ಟನ್ ಬಳಕೆ: ರಾಜ್ಯದಲ್ಲಿ ನಂದಿನಿ ಹಾಲಿನ ಪ್ಯಾಕೆಟ್ಗೆ ಪ್ರತಿನಿತ್ಯ 17 ಮೆಟ್ರಿಕ್ ಟನ್ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ನಿತ್ಯ 78 ಲಕ್ಷ ಲೀಟರ್ ಹಾಲು ರಾಜ್ಯದಲ್ಲಿ ಸಂಗ್ರಹವಾಗುತ್ತಿದೆ. ಇವುಗಳಲ್ಲಿ38 ಲಕ್ಷ ಲೀಟರ್ ಗ್ರಾಹರಿಗೆ ವಿತರಣೆಯಾಗುತ್ತಿದೆ. ಕೆಎಂಎಫ್ ಪ್ಲಾಸ್ಟಿಕ್ μಲ್ಮ್ಗಳನ್ನು ಖರೀದಿಸಿ ಅವುಗಳನ್ನು ಹಾಲಿನ ಪ್ಯಾಕೆಟ್ಗಳಾಗಿ ಪರಿ ವರ್ತಿಸಿ ಹಾಲು ಮಾರಾಟ ಮಾಡುತ್ತಿದೆ. ಬಹುದೊಡ್ಡ ಆತಂಕ: ದೇಶದಲ್ಲಿಪ್ಲಾಸ್ಟಿಕ್ ಬಳಕೆ ಪರಿಸರದ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತಿದೆ. ಅದರಲ್ಲಿ ಹಾಲು ಸೇರಿದಂತೆ ಪ್ಯಾಕಿಂಗ್ ಸೆಕ್ಟರ್ನ ಕೊಡುಗೆ ಶೇ.60 ರಷ್ಟಿದೆ. ಅಂದರೆ ದೇಶದಲ್ಲಿ ಹಾಲು ಪ್ಯಾಕೆಟ್ಗೆ ನಿತ್ಯ ಸುಮಾರು 35 ರಿಂದ 40 ಮೆಟ್ರಿಕ್ ಟನ್ನಷ್ಟು ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಇದಕ್ಕೆ ಪರ್ಯಾಯ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಆತಂಕಕಾರಿ ಸ್ಥಿತಿ ನಿರ್ಮಾಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಾಲು ಮಾರಾಟಕ್ಕೆ ಪ್ಲಾಸ್ಟಿಕ್ ಕವರ್ ಬಿಟ್ಟರೆ ಪರ್ಯಾಯ ಮಾರ್ಗ ಇಲ್ಲದ ಹಿನ್ನೆಲೆಯಲ್ಲಿಅವುಗಳು ಅನಿವಾರ್ಯವಾಗಿವೆ. ಆದರೆ, ಅವು ಪರಿಸರ ಸೇರುವುದನ್ನು ತಪ್ಪಿಸುವ ಉದ್ದೇಶದಿಂದ ಮರುಬಳಕೆಗೆ ಕೆಎಂಎಫ್ ಗಂಭೀರ ಚಿಂತನೆ ನಡೆಸಿದೆ. ಮಹಾರಾಷ್ಟ್ರದಲ್ಲಿ ಒಂದು ಕವರ್ ನೀಡಿದರೆ 50 ಪೈಸೆ ನೀಡಲಾಗುತ್ತಿದೆ. ಚೆನ್ನೈನ ಅವಿನ್ ಹಾಲು ಸಂಸ್ಥೆ ಗ್ರಾಹಕರಿಗೆ 10 ಪೈಸೆ ನೀಡುತ್ತಿದೆ. ನಮ್ಮ ರಾಜ್ಯದಲ್ಲಿಯೂ ಗ್ರಾಹಕರಿಂದ ಹಿಂತಿರುಗಿ ಪಡೆಯಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ 1550 ನಂದಿನಿ ಮಾರಾಟ ಕೇಂದ್ರಗಳಿವೆ. ಅಲ್ಲಿಗೆ ಗ್ರಾಹಕರೇ ತಂದುಕೊಡುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಯು ತ್ತಿದೆ. ಆದರೆ, ಬಳಸಿದ ಕವರ್ಗಳನ್ನು ಮತ್ತೆ ನಂದಿನಿ ಕೇಂದ್ರದಲ್ಲಿಸ್ಟಾಕ್ ಮಾಡಲು ಸಾಧ್ಯವಿಲ್ಲ. ಬ್ಯಾಕ್ಟೀರಿಯಗಳ ದಾಳಿ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿಪ್ಲಾಸ್ಟಿಕ್ ಮರುಸಂಸ್ಕರಣಾ ಘಟಕಗಳೇ ನೇರವಾಗಿ ಹಾಲು ಉತ್ಪಾದಕರ ಸಂಘಗಳ ಮೂಲಕ ಸಂಗ್ರಹಿಸಿ ಪ್ರೋತ್ಸಾಹದ ಧನ ನೀಡುವ ಸಾಧ್ಯತೆಗಳು ಹೆಚ್ಚಿವೆ. ಹಾಲಿನ ಪ್ಯಾಕೆಟ್ಗಳನ್ನು ಪೌರ ಕಾರ್ಮಿಕರು ಇಲ್ಲವೆ ಚಿಂದಿ ಆಯುವವರು ಕೆಲವನ್ನು ಪಡೆದುಕೊಳ್ಳುತ್ತಾರೆ. ಆದರೆ, ಅದರ ಕತ್ತರಿಸಿದ ಭಾಗ ತ್ಯಾಜ್ಯದ ಮೂಲಕ ನೇರವಾಗಿ ಭೂಮಿ ಸೇರುತ್ತದೆ. ಇದು ಮರುಸಂಸ್ಕರಣೆಗೆ ಬಳಕೆಯಾಗುವುದಿಲ್ಲ. ನೀರಿನ ಮೂಲಗಳಿಗೆ ಸೇರಿ ಒರತೆಯನ್ನು ತಡೆಯುತ್ತದೆ. ಕೊಳವೆ ಹಾಗೂ ಚರಂಡಿಗಳನ್ನು ಬ್ಲಾಕ್ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಹಾಲಿನ ಪ್ಯಾಕೆಟ್ ತುದಿಯನ್ನು ಪೂರ್ತಿ ಕತ್ತರಿಸದಂತೆ ಗ್ರಾಹಕರಲ್ಲಿಹಾಲು ಉತ್ಪಾದಕರ ಸಂಘಗಳು ಮನವಿ ಮಾಡಿವೆ. ಒಂದು ವೇಳೆ ಕತ್ತರಿಸಿದರೂ ಅದರ ಭಾಗವನ್ನು ಪ್ಯಾಕೆಟ್ ಒಳಗೆ ಹಾಕಿದರೆ ಮರು ಬಳಕೆ ಮಾಡಬಹುದು ಎಂದು ಸಲಹೆ ನೀಡಲಾಗಿದೆ. ಮೈಸೂರು ವಿಭಾಗದಲ್ಲಿ ನಿತ್ಯ 1300 ಕೆಜಿ ಪ್ಲಾಸ್ಟಿಕ್ ಕವರ್ ಬಳಕೆಯಾಗುತ್ತಿದೆ. ಮರು ಸಂಗ್ರಹ ಮಾಡುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡಲಾಗಿದೆ. ಈ ಕುರಿತು ರಾಜ್ಯ ಮಟ್ಟದಲ್ಲಿ ಹಾಗೂ ಸ್ಥಳೀಯ ಕೇಂದ್ರಗಳಲ್ಲಿಯೂ ಚರ್ಚೆ ನಡೆಯುತ್ತಿದೆ. - ಡಾ. ಎಂ.ಎಸ್. ವಿಜಯ ಕುಮಾರ್, ವೈಮುಲ್ ಎಂಡಿ.
from India & World News in Kannada | VK Polls https://ift.tt/31MkhNm