ಬೆಂಗಳೂರು: ಉತ್ತರ ಕರ್ನಾಟಕದ ನೆರೆಸಂತ್ರಸ್ತರಿಗೆ ಪರಹಾರ ಒದಗಿಸುವಲ್ಲಿ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ವಿರುದ್ದ ರಾಜ್ಯಾದ್ಯಂತ ಟೀಕೆಗಳ ಸುರಿಮಳೆಯಾಗುತ್ತಿದೆ. ಇದೀಗ ನಟ ಪ್ರಕಾಶ್ ರಾಜ್ ಕೂಡ ರಾಜ್ಯಾದ್ಯಂತ ವ್ಯಕ್ತವಾಗಿರುವ ಜನರ ಟೀಕೆಗಳಿಗೆ ಸ್ಪಂಧಿಸಿದ್ದಾರೆ. ನಾನು ಉಗುದೆ...ಒರಸ್ಕೊಂಡ್ರೀ...ಈಗ ಜನ ಕ್ಯಾಕರ್ಸ್ಕೊಂಡ್ ಉಗೀತಾ ಇದಾರೆ...ಎಷ್ಟೂಂತ ಒರಸ್ಕೊತೀರಪ್ಪ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರವನ್ನು ಲೇವಡಿ ಮಾಡಿದ್ದಾರೆ. ಲೋಕೇಶ್ ಎಂಬುವವರು " ಹೈಕಳು 'ಮೋದಿ-ಮೋದಿ, ನಾನು ಚೌಕಿದಾರ್' ಎಂದು ಕುಣ್ಕೊಂಡು ಬೆಂಗಳೂರಿಂದ ರೈಲು ಹಿಡ್ಕೊಂಡ್ ಹೋಗಿ ವೋಟ್ ಗುದ್ದಿದ್ದೇ ಬಂತು! ಇವತ್ತು ಅವರ ಅಪ್ಪ-ಅವ್ವ ಊರು-ಕೇರಿ, ಹೊಲ-ಮನೆ ಕಳಕೊಂಡು ನಿಂತವರೆ , ಯಾವ ಚೌಕಿದಾರನೂ ಕಾಣ್ತಿಲ್ಲ" ಎಂದು ಮಾಡಿದ್ದ ಟ್ವೀಟ್ ಸೇರಿದಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳನ್ನು ಟೀಕಿಸಿರುವ ಹಲವಾರು ಟ್ವೀಟ್ಗಳಿಗೆ ಪ್ರಕಾಶ್ ರಾಜ್ ಈ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಲೋಕೇಶ್ ಎಂಬುವವರು " ಉತ್ತರ ಕರ್ನಾಟಕ ಹೈಕಳು 'ಮೋದಿ-ಮೋದಿ, ನಾನು ಚೌಕಿದಾರ್' ಎಂದು ಕುಣ್ಕೊಂಡು ಬೆಂಗಳೂರಿಂದ ರೈಲು ಹಿಡ್ಕೊಂಡ್ ಹೋಗಿ ವೋಟ್ ಗುದ್ದಿದ್ದೇ ಬಂತು! ಇವತ್ತು ಅವರ ಅಪ್ಪ-ಅವ್ವ ಊರು-ಕೇರಿ, ಹೊಲ-ಮನೆ ಕಳಕೊಂಡು ನಿಂತವರೆ , ಯಾವ ಚೌಕಿದಾರನೂ ಕಾಣ್ತಿಲ್ಲ" ಎಂದು ಮಾಡಿದ್ದ ಟ್ವೀಟ್ ಸೇರಿದಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳನ್ನು ಟೀಕಿಸಿರುವ ಹಲವಾರು ಟ್ವೀಟ್ಗಳಿಗೆ ಪ್ರಕಾಶ್ ರಾಜ್ ಈ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಚಕ್ರವರ್ತಿ ಸೂಲಿಬೆಲೆ, ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದಶಕ ಶಂಕರ ಬಿದರಿ ಸೇರಿದಂತೆ ಹಲವಾರು ಗಣ್ಯ ವ್ಯಕ್ತಿಗಳು ಪರಿಹಾರ ಒದಗಿಸಲು ವಿಫಲವಾಗಿರುವ ಸಂಸದರ ವಿರುದ್ಧ ಹರಿಹಾಯ್ದಿದ್ದರು. ಶಂಕರ್ ಬಿದರಿ ಅವರು ಒಂದು ಹೆಜ್ಜೆ ಮುಂದೆ ಹೋಗಿ ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಜನರಿಗೆ ಸಹಾಯ ಮಾಡಲು ಮುಂದಾಗದೇ ಇರುವಂತಹ ಸಂಸದರನ್ನು ಆಯ್ಕೆ ಮಾಡಿದ್ದಕ್ಕೆ ನಮ್ಮ ನಾವೇ ಚಪ್ಪಲಿ ತಗೆದುಕೊಂಡು ಹೊಡೆದುಕೊಳ್ಳಬೇಕು ಎಂಬ ಹೇಳಿಕೆ ನೀಡಿದ್ದರು.
from India & World News in Kannada | VK Polls https://ift.tt/32WpTWi