ಪಾಂಡೆ ಶತಕ, ರಾಹುಲ್ ಫಿಫ್ಟಿ; ಕರ್ನಾಟಕಕ್ಕೆ 79 ರನ್‌ಗಳ ಜಯ

ಬೆಂಗಳೂರು: ಬ್ಯಾಟಿಂಗ್‌ನಲ್ಲಿ ನಾಯಕ (142*) ಶತಕ ಹಾಗೂ ಅರ್ಧಶತಕ (81) ಹಾಗೂ ಬೌಲಿಂಗ್‌ನಲ್ಲಿ ಪ್ರಸಿದ್ಧ್ ಕೃಷ್ಣ (31ಕ್ಕೆ 3) ಮತ್ತು ಶ್ರೇಯಸ್ ಗೋಪಾಲ್ (53ಕ್ಕೆ 3) ಅವರ ಮೊನಚು ದಾಳಿಯ ನೆರವಿನಿಂದ ಕರ್ನಾಟಕ ತಂಡ ಪಂದ್ಯದಲ್ಲಿ ಛತ್ತೀಸ್‌ಗಢ ತಂಡದ ವಿರುದ್ಧ 79 ರನ್ ಅಂತರದ ಜಯ ಸಾಧಿಸಿದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣಧಲ್ಲಿ ಬುಧವಾರ ನಡೆದ ಎಲೈಟ್ ಎ ಗುಂಪಿನ 5ನೇ ಸುತ್ತಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 285 ರನ್ ಕಲೆ ಹಾಕಿತು. ನಂತರ ಗುರಿ ಬೆನ್ನಟ್ಟಿದ ಛತ್ತೀಸ್‌ಗಢ ತಂಡವನ್ನು 44.4 ಓವರ್‌ಗಳಲ್ಲಿ 206 ರನ್‌ಗಳಿಗೆ ಕಟ್ಟಿ ಹಾಕಿ 32 ಎಸೆತಗಳು ಬಾಕಿ ಇರುವಂತೆಯೇ ವಿಜಯೋತ್ಸವ ಆಚರಿಸಿತು. ಛತ್ತೀಸ್‌ಗಢ ಪರ ಶಶಾಂಕ್ ಚಂದ್ರಕರ್ (42) ಮತ್ತು ಅಮನ್ ದೀಪ್ ತಾರೆ (43) ಹೊರತುಪಡಿಸಿದರೆ ಇತರರಿಂದ ಆತಿಥೇಯ ಬೌಲರ್‌ಗಳ ಮಾರಕ ದಾಳಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ. ಈ ಗೆಲುವಿನೊಂದಿಗೆ ಕರ್ನಾಟಕ ಆಡಿದ ನಾಲ್ಕು ಪಂದ್ಯಗಳಿಂದ ಒಟ್ಟು 12 ಅಂಕ ಕಲೆ ಹಾಕಿದ್ದು, ಎ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಸ್ಪಷ್ಟ ಸಂದೇಶ ರವಾನಿಸಿದ ಪಾಂಡೆ, ರಾಹುಲ್... ಇದರೊಂದಿಗೆ ತಮ್ಮನ್ನು ಪದೇ ಪದೇ ಕಡೆಗಣಿಸುತ್ತಿರುವ ಆಯ್ಕೆ ಸಮಿತಿಗೆ ಮನೀಶ್ ಪಾಂಡೆ ಹಾಗೂ ರೋಹಿತ್ ಶರ್ಮಾ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. 118 ಎಸೆತಗಳನ್ನು ಎದುರಿಸಿದ ಪಾಂಡೆ ಐದು ಬೌಂಡರಿ ಹಾಗೂ ಏಳು ಸಿಕ್ಸರ್‌ಗಳಿಂದ 142 ರನ್‌ ಗಳಿಸಿ ಅಜೇಯರಾಗುಳಿದರು. ಅಲ್ಲದೆ ರಾಹುಲ್ ಜತೆಗೆ ಮೂರನೇ ವಿಕೆಟ್‌ಗೆ 150 ರನ್‌ಗಳ ಜತೆಯಾಟದಲ್ಲಿ ಭಾಗಿಯಾಗಿದ್ದರು. ಇನ್ನೊಂದೆಡೆ ಶತಕ ಮಿಸ್ ಮಾಡಿದ ರಾಹುಲ್ 103 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 81 ರನ್ ಗಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2nc6vpe

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...