ಕಾಲಗರ್ಭ ಸೇರಿದ ಕವಲೇದುರ್ಗಕ್ಕೆ ಬೇಕು ಕಾಯಕಲ್ಪ: ಅಭಿವೃದ್ಧಿಗೆ ಸರಕಾರದ ಹಿಂದೇಟು!

ರಾಘವೇಂದ್ರ ಮೇಗರವಳ್ಳಿ,ತೀರ್ಥಹಳ್ಳಿ ಶಿವಮೊಗ್ಗ: ಐತಿಹಾಸಿಕ ಪ್ರದೇಶವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶ ಈಡೇರಿಸುವಲ್ಲಿ ಸರಕಾರ ವಿಫಲಗೊಂಡಿರುವುದು ಇತಿಹಾಸ ಪರಂಪರೆಯ ಸ್ಥಳದ ನಾಶಕ್ಕೆ ನಾಂದಿಹಾಡಿದಂತಿದೆ. ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿರುವ ಕವಲೇ ದುರ್ಗ ಪ್ರವಾಸಿ ಕೇಂದ್ರವಾಗಿಸುವ ಕುರಿತಂತೆ ಸರಕಾರ ಈವರೆಗೂ ವಿಶೇಷ ಒತ್ತು ನೀಡಿಲ್ಲ. ಶಿಸ್ತಿಗೆ ಹೆಸರಾದ ಶಿವಪ್ಪನಾಯಕ ಆಳ್ವಿಕೆ ಇಂದಿಗೂ ಕವಲೇದುರ್ಗ ಮಹತ್ವದ ಸ್ಥಾನದಲ್ಲಿದೆ. ಕೋಟೆ, ಅರಮನೆ ಸಂರಕ್ಷಣೆ, ಅಭಿವೃದ್ಧಿಗೊಳ್ಳದೆ ಕವಲೇದುರ್ಗ ಪ್ರದೇಶಕ್ಕೆ ಅನಾಥ ಸ್ಥಿತಿ ಕಾಡುತ್ತಿದೆ. ಕವಲೇದುರ್ಗ ಕೋಟೆ ಕೊತ್ತಲ ಪ್ರದೇಶದ ಮಹತ್ವದ ಇತಿಹಾಸ ಅಂಶಗಳು ಕಾಲಗರ್ಭದ ಮಣ್ಣಿಗೆ ಸೇರುವಂತಾಗಿದ್ದರೂ ಸರಕಾರ ಮಾತ್ರ ಇನ್ನೂ ಕಣ್ಣು ತೆರೆದಿಲ್ಲ. ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಡಿ ಕವಲೇದುರ್ಗವನ್ನು ಪಾರಂಪರಿಕ ಹಿನ್ನೆಲೆಯಲ್ಲಿಅಭಿವೃದ್ಧಿಪಡಿಸುವ ಕುರಿತಂತೆ ಸರಕಾರಕ್ಕೆ ಮನವಿ ಸಲ್ಲಿಕೆ ಆಗಿದೆ. ಅರಮನೆ, ಕೋಟೆ ಸ್ಥಳ ವೀಕ್ಷಿಸಲು ಪ್ರತಿದಿನ ನೂರಾರು ಸಾರ್ವಜನಿಕರು ಭೇಟಿ ನೀಡುತ್ತಲಿದ್ದು ಸಂಪರ್ಕ ರಸ್ತೆ ದುರಸ್ತಿಗೆ ಆದ್ಯತೆ ನೀಡಲಾಗಿದೆ. ಭುವನಗಿರಿದುರ್ಗ ಹೆಸರು ಕರ್ನಾಟಕ ಇತಿಹಾಸದಲ್ಲಿ ನಾಗರಖಂಡ ಬನವಾಸಿ ನಾಡೆಂದು ಖ್ಯಾತಿಗೊಂಡ ಮಲೆನಾಡು ಪ್ರದೇಶದ ಕವಲೇದುರ್ಗ ಐತಿಹಾಸಿಕ ಸ್ಥಳವಾಗಿದೆ. ಮಲ್ಲವ ಅರಸರ ಆಳ್ವಿಕೆ ಒಳಪಟ್ಟಿದ್ದ ಕವಲೇದುರ್ಗ ಭುವನಗಿರಿದುರ್ಗ ಸಂಸ್ಥಾನವಾಗಿ ಮಾರ್ಪಟ್ಟ ಬೆಳವಣಿಗೆ ಹಿಂದೆ ಯುದ್ಧ ನಡೆದಿದೆ. ಮಲ್ಲವರು ಮೊದಲು ಕೆಳದಿ ಎಂಬಲ್ಲಿ ರಾಜ್ಯ ಸ್ಥಾಪಿಸಿ ಇಕ್ಕೇರಿ, ಬಿದನೂರಿನಲ್ಲಿ ಕೋಟೆಕೊತ್ತಲ ನಿರ್ಮಿಸಿ ರಾಜ್ಯಭಾರ ಮಾಡುತ್ತಿದ್ದರು. ತೊಲೆತಮ್ಮ ಮತ್ತು ಮುಂಡಿಗೆ ತಮ್ಮ ಎಂಬ ಬೆಳಗುತ್ತಿ ಪಾಳೆಗಾರ ಸಹೋದರರ ಸ್ವಾಧೀನದಲ್ಲಿ ಕವಲೇದುರ್ಗದ ಗಿರಿದುರ್ಗ ಪ್ರದೇಶವಿತ್ತು. ಮಲ್ಲವ ಅರಸರು ಈ ಸಹೋದರರನ್ನುಸೋಲಿಸಿ ಕವಲೇದುರ್ಗ ಕೋಟೆಯನ್ನು ವಶಕ್ಕೆ ಪಡೆದು ಭುವನಗಿರಿದುರ್ಗ ಎಂದು ಹೆಸರಿಟ್ಟು ಆಳ್ವಿಕೆ ಮಾಡುತ್ತಿದ್ದರು. ಶಿವಪ್ಪನಾಯಕ, ರಾಣಿ ಚೆನ್ನಮ್ಮಾಜಿ, ರಾಣಿ ವೀರಮ್ಮಾಜಿ ಆಳ್ವಿಕೆಯಲ್ಲಿ ಮಲ್ಲವಸಾಮ್ರಾಜ್ಯ ಪ್ರಖ್ಯಾತಿಗೊಂಡಿತ್ತು. ಅಭೇದ್ಯ ಕೋಟೆ ಸ್ಥಳ ತೀರ್ಥಹಳ್ಳಿ ಪಟ್ಟಣದಿಂದ 18 ಕಿ.ಮೀ.ದೂರದ ಕವಲೇದುರ್ಗ ಸಂಸ್ಥಾನದ ಅರಮನೆ, ಕೋಟೆ ಕೊತ್ತಲ ಇಂದಿಗೂ ಆಕರ್ಷಕವಾಗಿದೆ. ಬೆಟ್ಟದ ಮೇಲೆ ಅಭೇದ್ಯ ಎನ್ನಿಸುವ 5 ಸುತ್ತಿನ ಕೋಟೆ, ಮಹಾದ್ವಾರ, ಕಾವಲು ಗೋಪುರ, ಬತ್ತೇರಿ, ಬೃಹತ್‌ ಸೈನಿಕ ನೆಲೆ ಕಾಣಬಹುದಾಗಿದೆ. ಊರ ಮುಂಭಾಗ ಸುಮಾರು 29 ಎಕರೆ ವಿಸ್ತೀರ್ಣದ ಬೃಹತ್‌ ಕೆರೆಯೊಂದು ಇದ್ದು, ತಿಮ್ಮಣ್ಣ ನಾಯಕ ಕೆರೆ ಎಂದು ಕರೆಯಲ್ಪಡುತ್ತಿದೆ. ಕಾಶಿಯಿಂದ ದೊಡ್ಡ ಸಂಕಣ್ಣ ತಂದ ಶಿವಲಿಂಗ ಪ್ರತಿಷ್ಠಾಪಿಸಲ್ಪಟ್ಟಿದೆ. ಪುಟ್ಟಕೊಳ, ಸುಂದರ ವಿನ್ಯಾಸದ ಕೆತ್ತನೆಗಳಿದ್ದು ಅರಮನೆ ಮುಂದೆ ಶಿಖರೇಶ್ವರ ದೇವಾಲಯ ಇದೆ. ಗದಾತೀರ್ಥ ಎಂಬ ಪುಟ್ಟಕೊಳದಲ್ಲಿಸದಾಕಾಲ ನೀರು ತುಂಬಿರುತ್ತದೆ. ಪಾಂಡವರು ವನವಾಸ ಕಾಲದಲ್ಲಿಈ ಸ್ಥಳದಲ್ಲಿದ್ದರು, ಕೊಳ ಭೀಮಸೇನನಿಂದ ನಿರ್ಮಾಣಗೊಂಡಿದ್ದು ಎಂಬ ಪ್ರತೀತಿ ಹೊಂದಿದ್ದು ದೌಮ್ಯ ಮಹರ್ಷಿ ತಪಸ್ಸು ಮಾಡಿದ ಸ್ಥಳವೆಂದು ಭಾವಿಸಲಾಗಿದೆ. ವೀರಶೈವ ಧರ್ಮದ ಅವಲಂಬಿಗಳಾಗಿದ್ದ ಮಲ್ಲವ ಅರಸರು ಕವಲೇದುರ್ಗ ಸಂಸ್ಥಾನ ವ್ಯಾಪ್ತಿ ವೀರಶೈವ ಮಠಗಳ ಆರಂಭಕ್ಕೆ ಒತ್ತು ನೀಡಿದ ಪರಂಪರೆ ಹೊಂದಿದೆ. ಐತಿಹಾಸಿಕ ಪರಂಪರೆ ಹೊಂದಿರುವ ಕವಲೇದುರ್ಗ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿ ಸಾರ್ವಜನಿಕ ವೀಕ್ಷಣೆಗೆ ಒತ್ತು ನೀಡುವ ಉದ್ದೇಶದಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಐತಿಹಾಸಿಕ ಕುರುಹುಗಳಿಗೆ ಧಕ್ಕೆ ಆಗದಂತೆ ಸ್ಥಳ ಅಭಿವೃದ್ಧಿಗೊಳ್ಳಬೇಕಿದ್ದು ಸರಕಾರ ವಿಶೇಷ ಆದ್ಯತೆ ನೀಡಬೇಕು. ಚಂದವಳ್ಳಿ ಸೋಮಶೇಖರ್‌, ತೀರ್ಥಹಳ್ಳಿ ತಾ.ಪಂ.ಸದಸ್ಯರು


from India & World News in Kannada | VK Polls https://ift.tt/38skcDY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...