'ಮೊದಲಿದ್ದ ಫಿಟ್ನೆಸ್‌ ಈಗ ಧೋನಿಗಿಲ್ಲ' : ಮಾಜಿ ನಾಯಕನ ನಿವೃತ್ತಿಗೆ ಸಕಾಲವೆಂದ ಬಿನ್ನಿ!

ಹೊಸದಿಲ್ಲಿ: ಕಳೆದ ವರ್ಷ ಐಸಿಸಿ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಬಳಿಕ ಮಹೇಂದ್ರ ಸಿಂಗ್‌ ಧೋನಿ ಟೀಮ್‌ ಇಂಡಿಯಾದಿಂದ ಹೊರಗುಳಿದಿದ್ದಾರೆ. ಅಂದಿನಿಂದ ಮಾಜಿ ನಾಯಕನ ವಿದಾಯದ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ಇದುವರೆಗೂ ತಮ್ಮ ವೃತ್ತಿ ಬದುಕಿನ ವಿದಾಯದ ಬಗ್ಗೆ ಮೌನ ಮುರಿದಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ತಂಡದ ಮಾಜಿ ಆಟಗಾರ , ಮಹೇಂದ್ರ ಸಿಂಗ್‌ ಧೋನಿ ಫಿಟ್ನೆಟ್‌ ಪ್ರಮಾಣ ಕಡಿಮೆಯಾಗಿದೆ. ಮೊದಲಿನಂತೆ ಅವರು ಹೊಂದಿದ್ದ ಪ್ರಭಾವವನ್ನು ಇದೀಗ ಹೊಂದಿಲ್ಲ. ಹಾಗಾಗಿ, ಎಂಎಸ್‌ ಧೋನಿ ಯುವ ಪೀಳಿಗೆಗೆ ದಾರಿ ಮಾಡಿಕೊಡುವ ಸಮಯ ಬಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಮಹೇಂದ್ರ ಸಿಂಗ್‌ ಧೋನಿ ಅವರನ್ನು ನೋಡುತ್ತಿದ್ದು, ಅವರು ಭಾರತ ತಂಡದ ಅತ್ಯಂತ ಯಶಸ್ವಿ ನಾಯಕ ಎಂಬ ಅಂಶವನ್ನು 1983ರ ವಿಶ್ವಕಪ್‌ ವಿಜೇತ ರೋಜರ್‌ ಬಿನ್ನಿ ಮನಗಂಡಿದ್ದಾರೆ. 'ಪಾಸ್‌ ಈಸ್‌ ಬೆಸ್ಟ್‌ ' ಎಂದು ಬಿನ್ನಿ ಹೇಳಿದ್ದಾರೆ. "ಕಳೆದ ಹಲವು ಋತುಗಳಲ್ಲಿ ಎಂಎಸ್‌ ಧೋನಿಯನ್ನು ನೋಡಿದ್ದೇನೆ. ಅವರು ಅತ್ಯುತ್ತಮ ಕ್ರಿಕೆಟ್ ಅನ್ನು ಕಳೆದಿದ್ದಾರೆ ಮತ್ತು ಹಲವು ಸೋಲುವ ಪಂದ್ಯಗಳನ್ನು ತಮ್ಮ ಬುದ್ದಿವಂತಿಕೆ ಹಾಗೂ ಶಕ್ತಿಯಿಂದ ಗೆಲ್ಲಿಸಿದ್ದಾರೆ. ಅವರು ಆಟಗಾರರಿಗೆ ಪ್ರೇರೇಪಿಸುವ ಹಾದಿ ಕೂಡ ಅತ್ಯುತ್ತಮವಾಗಿದೆ," ಎಂದು ಸ್ಪೋರ್ಟ್ಸ್‌ಕೀಡಾದ ಫೇಸ್‌ಬುಕ್‌ ಪೇಜ್‌ನಲ್ಲಿ ಇಂದ್ರಾನಿಲ್‌ ಬಸು ಅವರಿಗೆ ತಿಳಿಸಿದ ಬಿನ್ನಿ, "ಈ ಹಿಂದೆ ಇದ್ದ ಫಿಟ್ನೆಸ್‌ ಅನ್ನು ಕಳೆದುಕೊಂಡಿದ್ದಾರೆ. ಯುವ ಪ್ರತಿಭೆಗಳು ಕೂಡ ರಾಷ್ಟ್ರೀಯ ತಂಡಕ್ಕೆ ಬರುತ್ತಿದ್ದಾರೆ. ನಿಜಕ್ಕೂ ಧೋನಿಯ ಹಿಂದಿನ ಕ್ರಿಕೆಟ್‌ ದಿನಗಳು ಅತ್ಯುತ್ತಮವಾಗಿವೆ ಹಾಗೂ ನಿವೃತ್ತಿ ಬಗ್ಗೆ ಅವರು ಸೂಕ್ತ ತೀರ್ಮಾನಕಾರ," ಎಂದು ಹೇಳಿದರು. ಸದ್ಯ ಮಹೇಂದ್ರ ಸಿಂಗ್‌ ಇದೇ ಸೆಪ್ಟೆಂಬರ್‌ 19ಕ್ಕೆ ಯುಎಇಯಲ್ಲಿ ಆರಂಭವಾಗುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 13ನೇ ಆವೃತ್ತಿ ಆಡಲು ಪೂರ್ವ ತಯಾರಿಯಲ್ಲಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸುವ ಅವರು ಉತ್ತಮ ಪ್ರದರ್ಶನ ತೋರುವ ಮೂಲಕ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಯೋಜನೆಯಲ್ಲಿದ್ದಾರೆ. ಆದಾಗ್ಯೂ, ಧೋನಿ ಚಾಂಪಿಯನ್ ಕ್ರಿಕೆಟಿಗ ಮತ್ತು ಅದ್ಭುತ ವರ್ತನೆ ಹೊಂದಿದ್ದಕ್ಕಾಗಿ ಬಿನ್ನಿ ಶ್ಲಾಘಿಸಿದರು. 2012 ರಲ್ಲಿ ಬಿಸಿಸಿಐನ ಆಯ್ಕೆ ಸಮಿತಿಯ ಐದು ಸದಸ್ಯರಲ್ಲಿ ಒಬ್ಬರಾಗಿ ನೇಮಕಗೊಂಡ ಬಿನ್ನಿ, ಧೋನಿಗೆ ಹಿರಿಯ ಕ್ರಿಕೆಟಿಗರು ಮತ್ತು ಉಸ್ತುವಾರಿ ವಹಿಸುವವರ ಬಗ್ಗೆ ಯಾವಾಗಲೂ ಅಪಾರ ಗೌರವವಿದೆ ಎಂದು ಬಹಿರಂಗಪಡಿಸಿದರು. "ಎಂ.ಎಸ್‌ ಧೋನಿ ಬಗ್ಗೆ ಒಂದು ವಿಷಯವಂತೂ ಹೇಳಲೇ ಬೇಕು. ಅವರು ಯಾವಾಗಲೂ ಹಿರಿಯ ಕ್ರಿಕೆಟಿಗರಿಗೆ ಅತ್ಯುತ್ತಮ ಗೌರವವನ್ನು ನೀಡುತ್ತಿದ್ದರು. ಎಲ್ಲರಿಗೂ ಲಭ್ಯವಾಗುವ ವ್ಯಕ್ತಿತ್ವ ಅವರದು ಮತ್ತು ಕ್ರಿಕೆಟಿಗರಿಗೆ ಸಾಕಷ್ಟು ಗೌರವ ಮತ್ತು ಸಮಯವನ್ನು ನೀಡುತ್ತಿದ್ದರು. ಆತನಿಗೆ ಏನಾದರೂ ಅವಶ್ಯಕತೆಯಿದ್ದರೆ, ಅವರೇ ನೇರವಾಗಿ ಬಂದು ಚರ್ಚೆ ನಡೆಸುತ್ತಾರೆ," ಎಂದು ರೋಜರ್‌ ಬಿನ್ನಿ ಮಾಜಿ ನಾಯಕನನ್ನು ಗುಣಗಾನ ಮಾಡಿದರು. "ಧೋನಿ ಮೈದಾನದಲ್ಲಿ ಆಡುವಾಗ ಅವರಿಗೆ ಅಗತ್ಯವಿರುವುದನ್ನು ನೀಡಬೇಕಾಗಿತ್ತು. ಆದರೆ, ಆತ ಎಂದಿಗೂ ಬೇಡಿಕೆ ಇಡುತ್ತಿರಲಿಲ್ಲ. ಅವರು ಅಧ್ಯಕ್ಷರು ಮತ್ತು ಆಯ್ಕೆದಾರರೊಂದಿಗೆ ಮಾತನಾಡುತ್ತಿದ್ದರು ಮತ್ತು ನಮ್ಮ ನಡುವೆ ಯಾವುದೇ ವಾದಗಳು ಅಥವಾ ಕಾದಾಟಗಳು ಇರಲಿಲ್ಲ. ಅವರೊಂದಿಗೆ ಕೆಲಸ ಮಾಡಿರುವುದು ಉತ್ತಮ ಅನುಭವ ನೀಡಿದೆ," ಎಂದು ಬಿನ್ನಿ ಧೋನಿಯನ್ನು ಕೊಂಡಾಡಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2XkPRma

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...