ಕೋಲ್ಕತಾ: ಮಾಜಿ ನಾಯಕ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗೆಲುವಿನ ಅಭಿಯಾನ ಆರಂಭಗೊಂಡಿತ್ತು ಎಂಬ ನಾಯಕ ಹೇಳಿಕೆಗೆ ಮಾಜಿ ಬ್ಯಾಟಿಂಗ್ ದಿಗ್ಗಜ ಟಾಂಗ್ ನೀಡಿದ್ದಾರೆ. ಗಂಗೂಲಿ ನಾಯಕತ್ವದಲ್ಲಿ ಆರಂಭವಾದ ಗೆಲುವಿನ ಅಭಿಯಾನವನ್ನು ಮುಂದುವರಿಸುತ್ತಿದ್ದೇವೆ ಎಂದು ವಿರಾಟ್ ಕೊಹ್ಲಿ ಹೇಳಿಕೆ ಕೊಟ್ಟಿದ್ದರು. ಇದು ಮಾಜಿ ಬ್ಯಾಟ್ಸ್ಮನ್ ಸುನಿಲ್ ಗವಾಸ್ಕರ್ಗೆ ಇರಸು ಮುರುಸು ಉಂಟು ಮಾಡಿದೆ. ಅಲ್ಲದೆ ಕೊಹ್ಲಿ ಹೇಳಿಕೆಗೆ ಲಘುವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿದ ಗವಾಸ್ಕರ್, ಸೌರವ್ ಗಂಗೂಲಿ ಈಗ ಬಿಸಿಸಿಐ ಐಧ್ಯಕ್ಷರಾಗಿರುವುದರಿಂದ ಅವರ ಬಗ್ಗೆ ಒಳ್ಳೆಯ ಮಾತನಾಡುವ ಅನಿವಾರ್ಯತೆ ಕೊಹ್ಲಿಗಿದೆ. ಆದರೆ 70 ಹಾಗೂ 80ರ ದಶಕದಲ್ಲೂ ಬಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿತ್ತು ಎಂದು ಹೇಳಿದ್ದಾರೆ. ಅನೇಕ ಮಂದಿ 2000ನೇ ಶತಮಾನದಲ್ಲಿ ಕ್ರಿಕೆಟ್ ಆರಂಭವಾಗಿದೆ ಎಂದು ಅಂದುಕೊಂಡಿದ್ದಾರೆ. 70ರ ದಶಕದಲ್ಲೂ ಭಾರತ ವಿದೇಶದಲ್ಲೂ ಗೆಲುವು ದಾಖಲಿಸಿದೆ. 1986ರಲ್ಲೂ ವಿದೇಶ ನೆಲದಲ್ಲಿ ಗೆಲುವು ಬಾರಿಸಿದೆ. ವಿದೇಶದಲ್ಲೂ ಸಮಬಲದ ಪ್ರದರ್ಶನ ನೀಡಿದೆ. ಇತರೆ ತಂಡಗಳಂತೆ ಸೋಲನ್ನು ಅನುಭವಿಸಿದೆ ಎಂದು ಗವಾಸ್ಕರ್ ನೆನಪಿಸಿದರು. ಕೊಹ್ಲಿ ತಮ್ಮ ಹೇಳಿಕೆಯಲ್ಲಿ ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಮಾಡಿರುವ ಕಠಿಣ ಪರಿಶ್ರಮಕ್ಕೀಗ ಫಲ ದಕ್ಕಿದೆ ಎಂದು ತಿಳಿಸಿದ್ದರು. ಅಲ್ಲದೆ ನಿರ್ಭಿತಿಯ ಬೌಲಿಂಗ್ ಪಡೆಯನ್ನು ತಮ್ಮ ತಂಡ ಹೊಂದಿದೆ ಎಂಬುದನ್ನು ಉಲ್ಲೇಖಿಸಿದ್ದರು. ಬಾಂಗ್ಲಾದೇಶ ವಿರುದ್ಧ ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಐತಿಹಾಸಿಕ ಪಿಂಕ್ ಬಾಲ್ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್ ಹಾಗೂ 46 ರನ್ ಅಂತರದ ಭರ್ಜರಿ ಗೆಲುವು ಬಾರಿಸಿತ್ತು. ಇದರೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ಸ್ವೀಪ್ಗೈದಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Ofo3v6