ಶಸ್ತ್ರಚಿಕಿತ್ಸೆ ಮಾಡಿದ ಬಳಿಕವೂ ಪೈಲ್ಸ್‌ ಮರಳಿ ಬರೋದ್ಯಾಕೆ?

ಬೆಂಗಳೂರು: ಮೂಲವ್ಯಾಧಿ ಕುರಿತ ಅಪನಂಬಿಕೆಗಳ ನಿವಾರಣೆಗೆ ಹಾಗೂ ಸೂಕ್ತ ಸಮಯದಲ್ಲಿಹೇಗೆ ಚಿಕಿತ್ಸೆ ಪಡೆಯಬೇಕೆಂದು ಮಾರ್ಗದರ್ಶನ ನೀಡಲು ‘ವಿಜಯ ಕರ್ನಾಟಕ’ ಆಯೋಜಿಸಿದ್ದ ‘ನೇರ ಫೋನ್‌ ಇನ್‌’ ಹಾಗೂ ‘ಫೇಸ್‌ಬುಕ್‌ ಲೈವ್‌’ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಜನರು ಸ್ಪಂದಿಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡರು. ನ.20ರ ‘ವಿಶ್ವ ಮೂಲವ್ಯಾಧಿ ದಿನ’ದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೋಗದ ಬಗ್ಗೆ ಜನರಲ್ಲಿ ಇರುವ ತಪ್ಪು ತಿಳಿವಳಿಕೆ ನಿವಾರಿಸಿ ಯಾವ ರೀತಿ ಚಿಕಿತ್ಸೆ ಪಡೆಯಬೇಕೆಂಬ ಬಗ್ಗೆ ತಿಳಿಸಿಕೊಡಲಾಯಿತು. ಫೋನ್‌ ಇನ್‌ನಲ್ಲಿ ಪಾಲ್ಗೊಂಡ ಬೆಂಗಳೂರಿನ ಸ್ಮೈಲ್ಸ್‌ ಇನ್ಸಿಟಿಟ್ಯೂಟ್‌ ಆಫ್‌ ಗ್ಯಾಸ್ಟ್ರಎಂಟ್ಯುರಾಲಜಿ ಆಸ್ಪತ್ರೆಯ ಮುಖ್ಯ ಕೋಲೋರೆಕ್ಟಲ್‌ ಸರ್ಜನ್‌ ಅವರು ರೋಗಕ್ಕೊಳಗಾದವರ ಹಾಗೂ ಅವರ ಕುಟುಂಬ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ ಗೊಂದಲ ಬಗೆಹರಿಸಿದರು. ಬೆಂಗಳೂರು, ಮೈಸೂರು, ಶಿವಮೊಗ್ಗ, ಕಲಬುರಗಿ, ವಿಜಯಪುರ, ಕೋಲಾರ, ಹಾಸನ, ಧಾರವಾಡ, ತುಮಕೂರು ಮೊದಲಾದ ಜಿಲ್ಲೆಗಳಿಂದ ಕರೆ ಮಾಡಿದ ಜನರು ಚಿಕಿತ್ಸೆ ಪಡೆಯುವ ಬಗ್ಗೆ ತಿಳಿದುಕೊಂಡರು. ಶಸ್ತ್ರಚಿಕಿತ್ಸೆ ಮಾಡಿದ ಬಳಿಕವೂ ರೋಗ ಮರಳಿ ಬರುವುದು, ರೋಗ ನಿವಾರಣೆಗೆ ನಾಟಿ ಔಷಧಿಯ ಮೊರೆ ಹೋಗುವುದು, ರೋಗ ನಿವಾರಣೆಗೆ ಅನುಸರಿಸಬೇಕಾದ ಆಹಾರ ಪದ್ಧತಿ ಮೊದಲಾದವುಗಳ ಬಗ್ಗೆ ಜನರು ಮಾಹಿತಿ ಪಡೆದುಕೊಂಡರು. ದೂರದ ಪ್ರದೇಶಗಳಿಂದ ಕರೆ ಮಾಡಿದವರಿಗೆ ತಮ್ಮ ಸ್ಥಳೀಯ ಪ್ರದೇಶದಲ್ಲೇ ಲಭ್ಯವಿರುವ ತಜ್ಞರ ಕುರಿತು ಮಾಹಿತಿ ನೀಡಲಾಯಿತು. ಜತೆಗೆ ತಮ್ಮ ಆಸ್ಪತ್ರೆಗೂ ಬಂದು ಸಂಪರ್ಕಿಸುವಂತೆ ವೈದ್ಯರು ಹೇಳಿದರು. ಫೋನ್‌ ಇನ್‌ ಕಾರ್ಯಕ್ರಮವನ್ನು ಫೇಸ್‌ಬುಕ್‌ ಲೈವ್‌ನಲ್ಲಿವೀಕ್ಷಿಸಿದ ಸಾವಿರಾರು ಜನರು ಕಾಮೆಂಟ್‌ ಮಾಡಿ ಪ್ರಶ್ನೆಗಳನ್ನು ಕೇಳಿದರು. ವಿಕ ಕೈಗೊಂಡ ಈ ಕಾರ್ಯಕ್ರಮ ಬಹಳ ಉಪಯುಕ್ತವಾಗಿದೆ ಎಂದು ಜನರು ಕಾಮೆಂಟ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ ಶಸ್ತ್ರಚಿಕಿತ್ಸೆ ಮಾಡದೆ ಮೂಲವ್ಯಾಧಿ ಗುಣಪಡಿಸುತ್ತೇವೆಂದು ಪ್ರಚಾರ ಫಲಕ ಹಾಕಿಕೊಳ್ಳಲು ಯಾರು ಅನುಮತಿ ನೀಡುತ್ತಾರೆ ಎಂದು ಕರೆ ಮಾಡಿದವರೊಬ್ಬರು ಪ್ರಶ್ನೆ ಮಾಡಿದರು. ‘‘ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆಗೆ ಅಧಿಕಾರವಿದೆ. ಆದರೂ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಜನರ ಆರೋಗ್ಯದ ರಕ್ಷಣೆಗೆ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಬೇಕು,’’ ಎಂದು ಡಾ.ಪರಮೇಶ್ವರ್‌ ಸಿ.ಎಂ. ಒತ್ತಾಯಿಸಿದರು. ನಕಲಿ ವೈದ್ಯರ ಬಗ್ಗೆ ಎಚ್ಚರವಿರಲಿ ಕರೆ ಮಾಡಿದ ಅನೇಕರು ನಕಲಿ ವೈದ್ಯರ ಬಳಿ ಚಿಕಿತ್ಸೆ ಮಾಡಿಸಿಕೊಂಡರೂ ಗುಣಮುಖರಾಗದಿರುವ ಕುರಿತು ಹೇಳಿಕೊಂಡರು. ‘‘ನಕಲಿ ವೈದ್ಯರು ದಾರ ಹಾಕುವುದು, ಆ್ಯಸಿಡ್‌ ಸುರಿಯುವುದು ಸೇರಿದಂತೆ ಅವೈಜ್ಞಾನಿಕವಾದ ಕ್ರಮಗಳನ್ನು ಕೈಗೊಳ್ಳುತ್ತಾರೆ. ಇದರಿಂದ ರೋಗ ನಿವಾರಣೆಯಾಗುವ ಬದಲು ಉಲ್ಬಣವಾಗುತ್ತದೆ. ರಸ್ತೆ ಬದಿ ಹಾಕಿರುವ ಪ್ರಚಾರ ಫಲಕಗಳನ್ನು ನೋಡಿಕೊಂಡು ನಕಲಿ ವೈದ್ಯರನ್ನು ನಂಬಬಾರದು,’’ ಎಂದು ವೈದ್ಯರು ಎಚ್ಚರಿಕೆ ನೀಡಿದರು.


from India & World News in Kannada | VK Polls https://ift.tt/2XyPpj6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...