ಟೆಸ್ಟ್‌ ಕ್ರಿಕೆಟ್ ಉದ್ಧಾರಕ್ಕೆ ಪಿಂಕ್‌ ಬಾಲ್‌ ಒಂದೇ ಸಾಲದು ಎಂದ ರಾಹುಲ್‌ ದ್ರಾವಿಡ್‌!

ಹೊಸದಿಲ್ಲಿ: ಟೆಸ್ಟ್‌ ಕ್ರಿಕೆಟ್‌ ವೀಕ್ಷಿಸಲು ಕ್ರೀಡಾಂಗಣಕ್ಕೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮಾಡಲು ಒಂದೇ ಸಾಲದು ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮತ್ತು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ () ಮುಖ್ಯಸ್ಥ ಅಭಿಪ್ರಾಯ ಪಟ್ಟಿದ್ದಾರೆ. "ಟೆಸ್ಟ್‌ ಕ್ರಿಕೆಟ್‌ನ ಜೀರ್ಣೋದ್ಧಾರಕ್ಕೆ ಪಿಂಕ್‌ ಬಾಲ್‌ ಒಂದೇ ಪರಿಹಾರವಲ್ಲ. ಆದರೆ, ಟೆಸ್ಟ್‌ ಕ್ರಿಕೆಟ್‌ಗೆ ಜೀವತುಂಬಲು ನೆರವಾಗುವ ಒಂದು ಅಂಶ. ಮೈದಾನದಲ್ಲಿನ ತೇವಾಂಶವನ್ನು ನಿಯಂತ್ರಿಸುವ ಪರಿಹಾರ ಕಂಡುಕೊಂಡರೆ ಪಿಂಕ್‌ ಬಾಲ್‌ ಟೆಸ್ಟ್‌ ಪ್ರತಿ ವರ್ಷ ಆಯೋಜಿಸಲು ಸಾಧ್ಯವಾಗುತ್ತದೆ," ಎಂದು ಎಕನಾಮಿಕ್‌ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ದ್ರಾವಿಡ್‌ ಹೇಳಿದ್ದಾರೆ. "ಮೈದಾನದಲ್ಲಿನ ತೇವಾಂಶದಿಂದ ಚೆಂಡು ಒದ್ದೆಯಾದರೆ ಬೌಲರ್‌ಗಳಿಗೆ ಚೆಂಡನ್ನು ಎಸೆಯುವುದು ಕಷ್ಟವಾಗಲಿದೆ. ಅಷ್ಟೇ ಅಲ್ಲದ ಚೆಂಡಿನಲ್ಲಿ ಯಾವುದೇ ಸ್ವಿಂಗ್‌ ಉಳಿಯುವುದಿಲ್ಲ. ಆದರೂ ಪಿಂಕ್‌ ಬಾಲ್‌ ಮೂಲಕ ಕ್ರೀಡಾಂಗಣಕ್ಕೆ ಜನರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಎಂದರೆ ಪ್ರಯತ್ನಿಸಲೇಬೇಕು," ಎಂದು ಹೇಳಿದ್ದಾರೆ. ಅಂದಹಾಗೆ ಟೆಸ್ಟ್‌ ಕ್ರಿಕೆಟ್‌ ಜನರನ್ನು ಆಕರ್ಷಿಸಲು ವಿಫಲವಾಗುತ್ತಿರುವುದು ಏಕೆ? ಎಂಬುದಕ್ಕೆ ಕಾರಣಗಳನ್ನು ಮೊದಲು ಕಂಡುಕೊಳ್ಳುವ ಅಗತ್ಯವಿದೆ ಎಂದು ಹೇಳಿರುವ ದ್ರಾವಿಡ್‌, ಕ್ರೀಡಾಂಗಣದ ಒಳಗಡೆ ಪ್ರೇಕ್ಷಕರಿಗೆ ಲಭ್ಯವಾಗುವ ಸವಲತ್ತುಗಳು ಕೂಡ ಮುಖ್ಯವಾಗುತ್ತದೆ ಎಂದಿದ್ದಾರೆ. ಪುಣೆಯಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್‌ ಪಂದ್ಯದಲ್ಲಿ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಿರಲಿಲ್ಲ ಎಂದು ದೂರಿದ್ದರು. "ಕನಿಷ್ಠ ಸವಲತ್ತುಗಳಾಗಿ ಶೌಚಾಲಯಗಳು, ಆಸನ ವ್ಯವಸ್ಥೆ ಮತ್ತು ಪಾರ್ಕಿಂಗ್‌ ಸೇರಿದಂತೆ ಮೊದಲಾದ ಮೂಲ ಸೌರ್ಕಯಗಳನ್ನು ಒದಗಿಸಿಕೊಡಬೇಕಾಗುತ್ತದೆ. ಈ ಅಂಶಗಳು ಕೂಡ ಪ್ರಭಾವ ಬೀರುತ್ತವೆ," ಎಂದು ದ್ರಾವಿಡ್‌ ತಿಳಿಸಿದ್ದಾರೆ. ಈ ಮಧ್ಯೆ ಡಿಜಿಟಲ್‌ ಮೀಡಿಯಾದಿಂದಲೂ ಮೈದಾನಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತದೆ. ಟೆಲಿವಿಷನ್‌ ಕವರೇಜ್‌ ಮತ್ತು ಆನ್‌ಲೈನ್‌ ಸ್ಟ್ರೀಮಿಂಗ್‌ ಹೆಚ್ಚಾಗುತ್ತಿದ್ದು, ಇದರಿಂದಲೂ ಪ್ರೇಕ್ಷಕರ ಸಂಖ್ಯೆ ಕುಸಿದಿದೆ. ಇನ್ನು ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾದಂತೆ ಭಾರತದಲ್ಲಿ ಟೆಸ್ಟ್‌ ಕ್ರಿಕೆಟ್‌ ಸಲುವಾಗಿ ಪ್ರತ್ಯೇಕ ವೇಳಾಪಟ್ಟಿಯಿಲ್ಲ. ಇದರಿಂದ ಟೆಸ್ಟ್‌ ಕ್ರಿಕೆಟ್‌ ವೀಕ್ಷಣಗೆ ಮೊದಲೇ ಯೋಜನೆ ರೂಪಿಸಿಕೊಳ್ಳುವುದು ಕೂಡ ಸಾಧ್ಯವಿಲ್ಲ. "2001ರಲ್ಲಿ ಈಡನ್‌ ಗಾರ್ಡನ್ಸ್‌ನಲ್ಲಿ ಟೆಸ್ಟ್‌ ಪಂದ್ಯ ವೀಕ್ಷಿಸಲು 1 ಲಕ್ಷ ಮಂದಿ ಸೇರಿದ್ದರು. ಆದರೆ ಅಂದಿನ ಪರಿಸ್ಥಿತಿಗಳಿಗೂ ಇಂದಿಗೂ ಬಹಳ ವ್ಯತ್ಯಾಸವಿದೆ. ಆ ಸಮಯದಲ್ಲಿ ಅತ್ಯುತ್ತಮ ಅನುಭವ ನೀಡುವ ಎಚ್‌ಡಿ ಟಿವಿಗಳಿರಲಿಲ್ಲ. ಮೊಬೈಲ್‌ ಫೋನ್‌ ಮತ್ತು ಲೈವ್‌ ಸ್ಟ್ರೀಮಿಂಗ್‌ಗಳಿರಲಿಲ್ಲ. ಹೀಗಾಗಿ ಪಂದ್ಯ ವೀಕ್ಷಿಸಲು ಮೈದಾನಕ್ಕೆ ಬರಲೇ ಬೇಕಿತ್ತು," ಎಂದು ದ್ರಾವಿಡ್ ವಿವರಿಸಿದ್ದಾರೆ. ಆಸ್ಟ್ರೇಲಿಯಾ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ಗೆ ಮಹತ್ವ "ಪರಿಸ್ಥಿತಿಗಳು ಈಗ ಬದಲಾಗಿವೆ ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಆಷಸ್‌ ಟೆಸ್ಟ್‌ ಸರಣಿಗೆ ಹೆಚ್ಚು ಜನ ಸೇರುತ್ತಾರೆ ಎಂದು ವಾದಿಸಬಹುದು. ಆದರೆ, ಅಲ್ಲಿ ಟೆಸ್ಟ್‌ ಕ್ರಿಕೆಟ್‌ ಸಲುವಾಗಿ ಪ್ರತ್ಯೇಕ ವೇಳಾಪಟ್ಟಿಯೇ ಇದೆ. ನಮ್ಮಲ್ಲಿ ಇಂಥದ್ದೊಂದು ವ್ಯವಸ್ಥೆಯೇ ಇಲ್ಲ. ಡಿಸೆಂಬರ್‌ನಲ್ಲಿ ನಡೆಯುವ ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಮತ್ತು ಜುಲೈನಲ್ಲಿ ಲಾರ್ಡ್ಸ್‌ನಲ್ಲಿ ನಡೆಯುವ ಟೆಸ್ಟ್‌ಗೆ ಜನರು ಈಗಿಂದಲೇ ಯೋಜನೆ ಮಾಡಿಕೊಳ್ಳಲು ಸಾಧ್ಯವಿದೆ. ಭಾರತದಲ್ಲೂ ಇಂಥದ್ದೊಂದು ವ್ಯವಸ್ಥೆಯ ಅಗತ್ಯವಿದೆ. ಜೊತೆಗೆ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗೆ ಮತ್ತಷ್ಟು ಗುಣಮಟ್ಟದ ಸವಲತ್ತುಗಳನ್ನು ಒದಗಿಸಕೊಡಬೇಕು," ಎಂದು ದ್ರಾವಿಡ್‌ ಹೇಳಿದ್ದಾರೆ. ಭಾರತ ಮತ್ತು ನಡುವಣ ಪಂದ್ಯ ನವೆಂಬರ್‌ 22ರಿಂದ ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ಆರಂಭವಾಗಲಿದೆ. ಸರಣಿಯ 2ನೇ ಮತ್ತು ಅಂತಿಮ ಪಂದ್ಯ ಇದಾಗಿದ್ದು, ಇಂದೋರ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡ ಇನಿಂಗ್ಸ್‌ ಮತ್ತು 130 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/35axeCK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...