'ಅನ್ನಭಾಗ್ಯಕ್ಕೆ ಅವರಪ್ಪನ ಮನೆ ದುಡ್ಡು ಕೊಡ್ತಿಲ್ಲ', 'ನಾಳೆ ಸುಪ್ರೀಂನಲ್ಲಿ ಆಡಿಯೋ ಬಾಂಬ್'! ಬಿಎಸ್‌ವೈಗೆ 'ಕೈ' ಅವಳಿ ಏಟು

ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ನೆರವು ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ದಿನೇಶ್ ಗುಂಡೂರಾವ್, ಕೇಂದ್ರದವರೇನೂ ಅವರಪ್ಪನ ಮನೆಯಿಂದ ತಂದು ಕೊಡ್ತಿಲ್ಲ ಎಂದು ಚಾಟಿ ಬೀಸಿದ್ದಾರೆ. ಅನ್ನಭಾಗ್ಯದ ಹಣ ಬಿಜೆಪಿಯವರ ಅಪ್ಪನ ಮನೆಯದ್ದಲ್ಲ ಎಂದು ಕಿಡಿಕಾರಿದ ದಿನೇಶ್ ಗುಂಡೂರಾವ್, ಆಹಾರ ಭದ್ರತಾ ಕಾಯ್ದೆಯನ್ನು ತಂದವರು ಯಾರು‌‌ ಎಂದು ಪ್ರಶ್ನಿಸಿದರು. ಪ್ರಧಾನಿ ಮೋದಿ ಕೊಡುವ ಹಣ ಅವರಪ್ಪನ ಮನೆಯದ್ದಲ್ಲ ಎಂದ ದಿನೇಶ್ ಗುಂಡೂರಾವ್, ನಾವು ಹಣ ಕೊಡುತ್ತೇವೆ ಎನ್ನುವಂಥಾ ಮಾತುಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಬಾರದು ಎಂದಿದ್ದಾರೆ. ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ‘ಆಡಿಯೋ ಬಾಂಬ್’..! ಸಿಎಂ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಾಂಬ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನಾಯಕರ ಧ್ವನಿಯೇ ಇದರಲ್ಲಿ ಇರೋದು. ಯಡಿಯೂರಪ್ಪ ಕೂಡಾ ಇದು ನನ್ನ ಧ್ವನಿ ಅಲ್ಲ ಅಂತ ಎಲ್ಲೂ ಹೇಳಿಲ್ಲ ಎಂದ ದಿನೇಶ್ ಗುಂಡೂರಾವ್, ಸಂವಿಧಾನ ಬಾಹಿರವಾಗಿ ಸರ್ಕಾರ ಬೀಳಿಸಿರುವುದು ಸ್ಪಷ್ಟವಾಗಿ ಗೊತ್ತಾಗಿದೆ. ಹೀಗಾಗಿ, ಸುಪ್ರೀಂ ಕೋರ್ಟ್ ಮುಂದೆಯೂ ಸೋಮವಾರ ಇದೇ ವಿಚಾರ ಮಂಡಿಸುತ್ತಿದ್ದೇವೆ ಎಂದು ಪ್ರಕಟಿಸಿದರು. ನಮಗೆ ಯಾರು ಆಡಿಯೋ ಬಿಡುಗಡೆ ಮಾಡಿದ್ದಾರೆ ಅನ್ನೋದು ಮುಖ್ಯವಲ್ಲ ಎಂದ ದಿನೇಶ್ ಗುಂಡೂರಾವ್, ಬಿಜೆಪಿಗೆ ಬೇಕಿದ್ದರೆ ಆಂತರಿಕೆ ತನಿಖೆ ಮಾಡಿಕೊಳ್ಳಲಿ ಎಂದರು. ಈ ವಿಚಾರಕ್ಕೆ ಬಿಜೆಪಿಯೊಳಗೇ ಎಷ್ಟು ಭಿನ್ನಾಭಿಪ್ರಾಯ ಇದೆ ಅನ್ನೋದು ಇದರಿಂದಲೇ ಗೊತ್ತಾಗುತ್ತದೆ ಎಂದು ದಿನೇಶ್ ಕುಟುಕಿದ್ದಾರೆ. ಖುದ್ದು ಯಡಿಯೂರಪ್ಪನವರೇ ತಾವೇ ಮಾಡಿಸಿದ್ದೇನೆ ಅಂತ ಹೇಳಿದಾಗ ನಾವು ಸುಮ್ಮನೆ ಕೂರೋದಕ್ಕೆ ಆಗತ್ತಾ ಎಂದು ಪ್ರಶ್ನಿಸಿದ ದಿನೇಶ್, ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲೇ ಆಪರೇಷನ್ ಕಮಲ ನಡೆದಿರೋದು ಪ್ರೂವ್ ಆಯ್ತಲ್ಲಾ, ಇವರೆಲ್ಲ ರಾಜೀನಾಮೆ ಯಾಕೆ ಕೊಟ್ರೂ ಅನ್ನೋದು ಇದರಲ್ಲೇ ಗೊತ್ತಾಯ್ತಲ್ಲ ಎಂದು ಮಾಧ್ಯಮಗಳಿಗೆ ಸವಾಲೆಸೆದರು. ಪ್ರಧಾನಿ ಮೋದಿ ಸರ್ಕಾರದ ವಿರುದ್ಧವೂ ಹೋರಾಟ..! ದೇಶದ ಆರ್ಥಿಕ ವ್ಯವಸ್ಥೆ ಐಸಿಯುನಲ್ಲಿದೆ. ಉದ್ಯೋಗ ಸೃಷ್ಟಿ ಕೋಮಾವಸ್ಥೆಯಲ್ಲಿದೆ. ಉದ್ಯೋಗ ಸೃಷ್ಟಿಯಿರಲಿ ಇರೋ ಉದ್ಯೋಗವನ್ನೇ ಉಳಿಸಿಕೊಳ್ಳಲು ಆಗ್ತಿಲ್ಲ. ದೇಶ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿರೋ ಹಾಗೆ ಕಾಣ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆತಂಕ ವ್ಯಕ್ತಪಡಿಸಿದ್ದಾರೆ. ಐದೂವರೆ ವರ್ಷದ ಹಿಂದೆ ಮೋದಿಯವರು ಪ್ರಧಾನಿ ಆದಾಗ ಜನರಲ್ಲಿ ಸಾಕಷ್ಟು ಆಸೆ ಹುಟ್ಟಿಸಿದ್ದರು ಎಂದು ಹೇಳಿದರು. ಈ ಹಿಂದೆ ಜಿಎಸ್‌ಟಿ ಜಾರಿಗೆ ತರಲು ಹೊರಟಾಗ ಗುಜರಾತ್ ಸಿಎಂ ಆಗಿದ್ದಾಗ ಮೋದಿ ವಿರೋಧಿಸಿದ್ರು. ಆದ್ರೆ, ಅವರು ಪ್ರಧಾನಿ ಆದಾಗ ಏನೂ ತಯಾರಿ ಮಾಡಿಕೊಳ್ಳದೆ ಜಿಎಸ್‌ಟಿ ಜಾರಿಗೆ ತಂದ್ರು. ದೇಶದ ಪ್ರಗತಿಗೆ ಪೂರಕವಾಗಬೇಕಿದ್ದ ಜಿಎಸ್‌ಟಿ ಈಗ ದೇಶಕ್ಕೆ ಮಾರಕವಾಗ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ದೇಶದಲ್ಲೀಗ 8.19% ನಿರುದ್ಯೋಗ ಇದೆ. ಸ್ವಾತಂತ್ರ್ಯ ಬಂದ ನಂತರ ಇಷ್ಟು ನಿರುದ್ಯೋಗ ಯಾವತ್ತು ಇರಲಿಲ್ಲ ಎಂದ ದಿನೇಶ್ ಗುಂಡೂರಾವ್, ಕೇಂದ್ರ ಸರ್ಕಾರದ ಪ್ರಕಾರವೇ ಜಿಡಿಪಿ 5%ಗೆ ಇಳಿದಿದೆ. 16 ವರ್ಷದಲ್ಲೇ ಖಾಸಗಿ ಬಂಡವಾಳ ಅತೀ ಕಡಿಮೆ ಹೂಡಿಕೆಯಾಗಿದೆ. ಹೀಗಾಗಿ, ಮೋದಿ ಸರ್ಕಾರದ ಆರ್ಥಿಕ ತೀರ್ಮಾನಗಳ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ದಿನೇಶ್ ಗುಂಡೂರಾವ್ ಪ್ರಕಟಿಸಿದ್ಧಾರೆ. ರಾಜ್ಯಾದ್ಯಂತ ಕಾಂಗ್ರೆಸ್ ಹೋರಾಟ ನಡೆಸಲಿದ್ದು, ವಿವಿಧ ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಬೆಂಗಳೂರಿನಲ್ಲಿ ನವೆಂಬರ್ 11ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.


from India & World News in Kannada | VK Polls https://ift.tt/32djt4e

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...