ಬೆಂಗಳೂರು: ಹನಿಟ್ರ್ಯಾಪ್ ಮೂಲಕ ಕ್ರಿಕೆಟ್ ಆಟಗಾರರನ್ನು ಬ್ಲ್ಯಾಕ್ಮೇಲ್ ಮಾಡಿ ಮ್ಯಾಚ್ ಫಿಕ್ಸರ್ಗಳು ಮತ್ತು ಬೆಟ್ಟಿಂಗ್ ಮಾಫಿಯಾ ನಿಯಂತ್ರಿಸುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತಿಳಿಸಿದ್ದಾರೆ. ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳ ಜತೆ ಮ್ಯಾಚ್ ಫಿಕ್ಸಿಂಗ್ ತನಿಖೆಯ ಪ್ರಗತಿ ಕುರಿತು ಮಾಹಿತಿ ನೀಡಿದ ಅವರು, ''ಮ್ಯಾಚ್ ಫಿಕ್ಸಿಂಗ್ ಜಾಲದ ಜತೆಗಿರುವ ಕ್ರಿಕೆಟ್ ಆಟಗಾರರರಿಗೆ ಟ್ರೋಫಿ ಗೆದ್ದಾಗ ಸಿಗುವುದಕ್ಕಿಂತ ಹೆಚ್ಚಿನ ಹಣ ಮ್ಯಾಚ್ ಫಿಕ್ಸಿಂಗ್ ಮತ್ತು ಬಿಡ್ಡರ್ಗಳಿಂದ ಸಿಗುತ್ತಿದೆ. ವಿದೇಶ ಪ್ರವಾಸ ಮತ್ತು ಪಂಚತಾರಾ ಹೋಟೆಲ್ಗಳಿಗೆ ಆಟಗಾರಧಿರನ್ನು ಕಳುಹಿಸಿ ಹನಿಟ್ರ್ಯಾಪ್ ಮೂಲಕ ಅವರನ್ನು ನಿಯಂತ್ರಿಸುವ ಪ್ರಯತ್ನಗಳು ನಡೆಯುತ್ತಿವೆ. ಸಾಮಾನ್ಯ ಜನ ಮತ್ತು ಕ್ರಿಕೆಟ್ ಪ್ರೇಮಿಗಳು ಬಹಳ ನಿರೀಕ್ಷೆಯಿಂದ ಪಂದ್ಯಗಳನ್ನು ನೋಡುತ್ತಾರೆ. ಆದರೆ ಪಂದ್ಯ ಆರಂಭ ಆಗುವುದಕ್ಕಿಂತ ಮೊದಲೇ ಪಂದ್ಯಧಿದಲ್ಲಿಗೆಲುವು, ಸೋಲು ಫಿಕ್ಸ್ ಆಗುತ್ತಿದೆ ಎಂದರೆ ಕ್ರಿಕೆಟ್ಗೆ ಮತ್ತು ಕ್ರೀಡಾ ಸ್ಫೂರ್ತಿಗೆ ಮಾಡುವ ಅವಮಾನವಾಗಿದೆ. ಕ್ರಿಕೆಟ್ನಿಂದ ಮ್ಯಾಚ್ ಫಿಕ್ಸಿಂಗ್ ಮತ್ತು ಬಿಡ್ಡಿಂಗ್ ವ್ಯವಸ್ಥೆಯನ್ನು ಅಳಿಸಿ ಹಾಕುವ ದಿಕ್ಕಿನಲ್ಲಿತನಿಖೆ ತೀವ್ರಗತಿಯಲ್ಲಿನಡೆಯುತ್ತಿದೆ,'' ಎಂದು ತಿಳಿಸಿದರು. ''ಕ್ರಿಕೆಟ್ ಸ್ವಚ್ಛಗೊಳಿಧಿಸುವ ಕಾರ್ಯಕ್ಕೆ ಹಿರಿಯ ಆಟಗಾರರು ಮತ್ತು ಕ್ರೀಡಾ ಪ್ರೇಮಿಗಳಿಂದ ಪ್ರಶಂಸೆ ವ್ಯಕ್ತ ಆಗುತ್ತಿದೆ. ಯಾವುದೇ ಕಾರಣಕ್ಕೂ ತನಿಖೆಯನ್ನು ಅರ್ಧಕ್ಕೇ ನಿಲ್ಲಿಸಬೇಡಿ ಎನ್ನುವ ಸಲಹೆ ವ್ಯಕ್ತವಾಗುತ್ತಿದೆ. ಎಲ್ಲಾಕೆಪಿಎಲ್ ತಂಡಧಿಗಳಿಂದ ಸಮಗ್ರ ಮಾಹಿತಿ ಸಂಗ್ರಹಿಸಲು ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡಕ್ಕೆ ಸೂಚನೆ ನೀಡಿಧಿದ್ದೇನೆ. ಅದರಂತೆ ಎಲ್ಲಾತಂಡಗಳಿಗೆ ನೋಟಿಸ್ ನೀಡಲಾಗಿದೆ,'' ಎಂದರು. ಸಿಸಿಬಿ ಒಳಗೇ ಎಸ್ಐಟಿ: ಮ್ಯಾಚ್ ಫಿಕ್ಸಿಂಗ್ ತನಿಖೆ ನಡೆಸುತ್ತಿರುವ ಸಿಸಿಬಿ ತಂಡ ಎಸ್ಐಟಿಯಂತೆ ಕೆಲಸ ಮಾಡುತ್ತಿದೆ. ಪ್ರಕರಣದ ಆಳಕ್ಕಿಳಿದು ಆರೋಪಿಗಳನ್ನು ವಿಚಾರಣೆ ನಡೆಸುವಂತೆ ಸೂಚಿಸಿದ್ದೇನೆ. ಐಪಿಎಲ್ ಜತೆ ಗುರುತಿಸಿಕೊಂಡಿದ್ದವರು ಮ್ಯಾಚ್ ಫಿಕ್ಸಿಂಗ್ನಲ್ಲಿ ಸಿಕ್ಕಿಕೊಂಡಿದ್ದಾರೆ. ಐದು ಎಫ್ಐಆರ್ಗಳು ದಾಖಲಾಗಿದ್ದು, ಏಳು ಮಂದಿಯನ್ನು ಬಂಧಿಸಲಾಗಿದೆ. ಇನ್ನಷ್ಟು ಮಂದಿಯ ಬಂಧನ ಸದ್ಯದಲ್ಲೇ ಆಗಲಿದೆ ಎಂದು ತಿಳಿಸಿದರು. ಎಲ್ಲಿದ್ದರೂ ಬಂಧಿಸದೆ ಬಿಡಲ್ಲ: ಈಗಾಗಲೇ ನಾನಾ ಕ್ರಿಕೆಟ್ ತಂಡಗಳ ಮಾಲೀಕರು ವಿದೇಶಕ್ಕೆ ಪರಾರಿ ಆಗಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿ, ''ಅವರೇನೂ ಪ್ರಪಂಚ ಬಿಟ್ಟು ಓಡಿ ಹೋಗಿಲ್ಲ, ಈಗಾಗಲೇ ಎಲ್ಒಸಿ ಹೊರಡಿಸಲಾಗಿದೆ. ಅವರು ಎಲ್ಲೇ ಇದ್ದರೂ ತನಿಖೆಗೆ ಹಾಜರಾಗಬೇಕು. ಇಲ್ಲದಿದ್ರೆ ಅವರನ್ನು ಹಿಡಿದು ತರುವುದು ನನಗೂ ಗೊತ್ತಿದೆ'' ಎಂದು ಎಚ್ಚರಿಸಿದರು. ಕೆಎಸ್ಸಿಎ-ಬಿಸಿಸಿಐಗೆ ಮನವಿ: ಬೆಂಗಳೂರು ಪೊಲೀಸರು ಮಾಡುತ್ತಿರುವ ಕೆಲಸವನ್ನು ಕೆಎಸ್ಸಿಎ ಮತ್ತು ಬಿಸಿಸಿಐ ಮೊದಲೇ ಮಾಡಬೇಕಿತ್ತು. ಈಗ ಆ ಸಂಸ್ಥೆಗಳಿಂದಲೂ ಕೆಲವು ಮಾಹಿತಿ ಕೇಳಿದ್ದೇವೆ. ಕ್ರಿಕೆಟ್ ಆಟ ಮೈದಾನಕ್ಕಿಂತ ಮೈದಾನದ ಹೊರಗೇ ಹೆಚ್ಚು ನಡೆಯುತ್ತಿದೆ. ಕ್ರಿಕೆಟ್ ಫಿಕ್ಸರ್ಗಳ ಕೈಗೆ ಸಿಲುಕಿಬಿಟ್ಟಿದೆ. ಇದನ್ನೇ ದೊಡ್ಡ ದಂಧೆ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಸಂಸ್ಥೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ ಎಂದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2O7rYKH